ಲೇಖಕ ಜಿ.ಟಿ.ಸತ್ಯನಾರಾಯಣ ಪ್ರತಿಪಾದನೆ । ಸುಳ್ಳಳ್ಳಿಯಲ್ಲಿ ಕಳೆಗಟ್ಟಿದ ಸೌಳ್ನಾಡ್ ಹಬ್ಬ। ‘ಬಿಟ್ಟಿ ಬೀರ’ ನಾಟಕ, ಮಲ್ಲಗಂಬ ಪ್ರದರ್ಶನ
ಒಂದೇ ನದಿ ದಂಡೆಯ ಜನರನ್ನು ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬಲವಂತವಾಗಿ ಒಕ್ಕಲು ಎಬ್ಬಿಸುವುದು ನಾಗರಿಕ ಸರ್ಕಾರದ ಹೆಸರಿನಲ್ಲಿ ನಡೆಸುವುದು ಪ್ರಭುತ್ವ ಪ್ರಾಯೋಜಿತ ಶೋಷಣೆಯಾಗಿದೆ. ಶರಾವತಿ ನದಿ ದಂಡೆಯ ನಾಗರಿಕತೆ ಇಂತಹ ಪ್ರಭುತ್ವಕ್ಕೆ ಪದೇ ಪದೇ ತುತ್ತಾಗುತ್ತಾ ಇದ್ದಾರೆ ಎಂದು ತಿಳಿಸಿದರು.ಅಂಬಾರಗುಡ್ಡದ ಖನಿಜ ಸಂಪತ್ತು ಗಣಿ ಗುತ್ತಿಗೆದಾರರು ಕೊಳ್ಳೆ ಹೊಡೆಯಲು ಭೂಮಿ ಅಗೆಯಲು ಬಂದಾಗ ಸರ್ಕಾರ ಪರವಾನಿಗೆ ಕೊಟ್ಟು ಸುಮ್ಮನೆ ಕುಳಿತಿತ್ತು. ಜನ ಹೋರಾಟ ಫಲವಾಗಿ ಉಳಿಸಿದ ಗುಡ್ಡದ ಹೆಸರಿನಲ್ಲಿ ಈಗ ಅರಣ್ಯ ಕಾನೂನು ನಿಯಮ ಬಾಹಿರವಾಗಿ ಜಾರಿಗೆ ತಂದು ಒಕ್ಕಲು ಎಬ್ಬಿಸಲು ಸರ್ಕಾರ ಮುಂದಾಗಿರುವುದು ಸಂತ್ರಸ್ತರ ಬದುಕುವ ಹಕ್ಕನ್ನು ಕಸಿದಿದೆ ಎಂದು ದೂರಿದರು.ಜನಪದ ಸಿರಿವಂತಿಕೆ ಹೊಂದಿದ ದ್ವೀಪದ ಭೂ ಭಾಗ ಅದನ್ನು ವಾಸ್ತವದ ಜಗತ್ತತ್ತು ಎದುರಿಸಲು ಇಂಧನ ಆಗಿಸಿಕೊಂಡಿದೆ. ಜನರ ಬಂಡಾಯದ ಕಥನಗಳೇ ಜಾನಪದ ವಾದವು ಎನ್ನುವ ಮಾತಿಗೆ ಇವರ ಬದುಕು ಅನ್ವರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಸೌಳ್ನಾಡ ಹಬ್ಬ ಆಯೋಜನೆ ಅರ್ಥಪೂರ್ಣವಾದುದು ಎಂದು ವಿವರಿಸಿದರು.
ಸೌಳ್ನಾಡ ಹಬ್ಬವನ್ನು ಸ್ಥಳೀಯ ಸಿಗಂದುರೇಶ್ವರಿ ಶಾಂತಿನಿಕೇತನ ಶಾಲೆಯ ಮಕ್ಕಳು ಸಾಮುಹಿಕವಾಗಿ ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ಸೌಲ್ನಾಡು ಹಬ್ದದಲ್ಲಿ ಅಂಟಿಕೆ ಪಿಂಟಿಕೆ, ಬತ್ತ ಕುಟ್ಟುವ ಹಾಡು, ಲಾವಣಿ, ಕುನುಬಿ ನೃತ್ಯ, ಕಾಲುಪೂಜೆ ಹಾಡು, ಯಕ್ಷಗಾನ, ಕೋಲಾಟ, ಬೀಸುಗಲ್ಲಿನ ಹಾಡು, ಜೋಗಿ ಪದ, ಮಕ್ಕಳ ಆಧುನಿಕ ನೃತ್ಯ, ರಸಮಂಜರಿ, ಗಾಡಿಗತನ ಮುಂತಾದ ಕಾರ್ಯಕ್ರಮ ಜತೆಗೆ ಕೊಡಚಾದ್ರಿ ಶಾಲೆಯ ಮಕ್ಕಳು ನಡೆಸಿಕೊಟ್ಟ ಮಲ್ಲಕಂಬ ಏರುವ ಸ್ಪರ್ಧೆ ನಡೆಯಿತು. ಪ್ರಸಾದ್ ಸುಳ್ಳಳ್ಳಿ ನಿರ್ದೇಶನದ ಜೀವಬಳಗ ತಂಡ ಅಭಿನಯಿಸಿದ ‘ಬಿಟ್ಟಿ ಬೀರ’ ನಾಟಕ ಪ್ರದರ್ಶನ ಬೆಳಗಿನ ತನಕವೂ ನಡೆಯಿತು. ಸಾವಿರಕ್ಕೂ ಹೆಚ್ಚು ಜನ ಕೊರೆಯುವ ಚಳಿಯ ನಡುವೆ ಇಡೀ ರಾತ್ರಿ ಕುಳಿತು ಹಬ್ಬದಲ್ಲಿ ಪಾಲ್ಗೊಂಡು ಕಾರ್ಯಕ್ರಮ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.ಫೋಟೋ ಬ್ಯಾಕೋಡು: 01 ಬ್ಯಾಕೋಡು ಸಮೀಪ ಸುಳ್ಳಳ್ಳಿಯಲ್ಲಿ ನಡೆದ ಸೌಳ್ನಾಡು ಹಬ್ಬದಲ್ಲಿ ಕೊಡಚಾದ್ರಿ ಶಾಲೆಯ ಮಕ್ಕಳಿಂದ ವಿವಿಧ ರೀತಿಯಲ್ಲಿ ಮಲ್ಲಗಂಬ ಪ್ರದರ್ಶನ ಕಣ್ಮನ ಸೆಳೆಯಿತು.