ಕನ್ನಡಪ್ರಭ ವಾರ್ತೆ ವಿಜಯಪುರ ನಮ್ಮ ಜಿಲ್ಲೆ ಫಲವತ್ತಾದ ಭೂಮಿ ಹೊಂದಿದ್ದು ನೀರನ್ನು ಕೊಟ್ಟರೇ ಬಂಗಾರದ ಬೆಳೆ ಬರುತ್ತದೆ ಎಂದು ಸಿದ್ದೇಶ್ವರ ಶ್ರೀಗಳ ನುಡಿಯನ್ನು ಸಚಿವ ಎಂ.ಬಿ.ಪಾಟೀಲರು ಅನುಷ್ಠಾನಗೊಳಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಮ್ಮ ಜಿಲ್ಲೆ ಫಲವತ್ತಾದ ಭೂಮಿ ಹೊಂದಿದ್ದು ನೀರನ್ನು ಕೊಟ್ಟರೇ ಬಂಗಾರದ ಬೆಳೆ ಬರುತ್ತದೆ ಎಂದು ಸಿದ್ದೇಶ್ವರ ಶ್ರೀಗಳ ನುಡಿಯನ್ನು ಸಚಿವ ಎಂ.ಬಿ.ಪಾಟೀಲರು ಅನುಷ್ಠಾನಗೊಳಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.ತಿಕೋಟಾ ಪಟ್ಟಣದಲ್ಲಿ ನಿರ್ಮಿಸಲಾದ ಜಾಕೀರ ಫರ್ಟಿಲೈಜರ್ ಎಜನ್ಸಿಯ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ೨೦೧೩ ರಿಂದ ೨೦೧೮ ರ ಅವಧಿಯಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಜಲ ಸಂಪನ್ಮೂಲ ಖಾತೆ ದೊರೆಯಿತು. ಸುದೈವ ಜಿಲ್ಲೆಗೆ ಕೃಷ್ಣಾ ನದಿಯಿಂದ ನೀರು ಹರಿಸಿದ್ದು ಈಗ ಇತಿಹಾಸ. ಕೆಲಜನ ನಮ್ಮನ್ನು ನೋಡಿ ಕಾಲಲ್ಲಿ ನೀರು ಬಂದವು ಎಂದು ತಮ್ಮ ಪ್ಯಾಂಟನ್ನು ಎತ್ತರಿಸಿ ಕುಹಕ ಮಾಡಿದ್ದರು. ಅಂಥವರಿಗೆ ಈಗ ತಕ್ಕ ಉತ್ತರ ಸಿಕ್ಕಿದೆ. ನೀರಾವರಿ ಸೌಲಭ್ಯ ಹೆಚ್ಚಾಗಿದ್ದರಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಇಂತಹ ಕೃಷಿ ಪರಿಕರಗಳ ಮಳಿಗೆಗಳು ಹೆಚ್ಚಾಗುತ್ತಿವೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.