ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕೆಎಸ್ಆರ್ಟಿಸಿ ಕಾಲನಿಯಲ್ಲಿನ ಎಕ್ಸಲಂಟ್ ಪ.ಪೂ ವಿಜ್ಞಾನ ಕಾಲೇಜಿನಲ್ಲಿ ೨೦೨೪-೨೫ ನೇ ಸಾಲಿನ ಪದವಿಪೂರ್ವ ತರಗತಿಗಳ ಪ್ರಾರಂಭೋತ್ಸವದಲ್ಲಿ ಮಾತನಾಡಿದರು. ಕೇವಲ ಯೋಚನೆಗಳಿಂದ ಗುರಿಮುಟ್ಟಲಾಗದು. ಶ್ರದ್ಧೆ, ಸಮರ್ಪಣಾಭಾವ, ಧೃಡ ನಿರ್ಧಾರ, ಉತ್ಕಟ ಬಯಕೆ, ಪ್ರಯತ್ನದಿಂಧ ಯಶಸ್ಸು ಕಾಣಬಹುದು. ಹಾಗೆಯೇ ವಿದ್ಯಾರ್ಥಿ ಜೀವನದಲ್ಲಿ ಕಷ್ಟ-ನಷ್ಟಗಳನ್ನು ತಾಳಿಕೊಂಡು ಸಹಿಷ್ಣುತಾ ಭಾವ ಹೊಂದಿ ಯಶಸ್ಸು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಯುವ ಬರಹಗಾರ ಮಂಜುನಾಥ ಜುನಗೊಂಡ ಮಾತನಾಡಿ, ಜ್ಞಾನ ಜಗತ್ತಿನ ಯಾವುದೇ ಮೂಲಗಳಿಂದ ಬಂದರೂ ನಾವು ಸ್ವೀಕರಿಸಬೇಕು. ಹಲವು ಹಳ್ಳಗಳು ಸೇರಿ ಸಮುದ್ರವಾದಂತೆ ಶಿಕ್ಷಕರು, ಪಾಲಕರು, ಹಿರಿಯರು ಹೇಳುವ ಅನುಭವಾಮೃತದ ನುಡಿಗಳನ್ನು ಪಾಲಿಸಿ ವಿದ್ಯಯ ಪರ್ವತವಾಗಿ ದೇಶಕ್ಕೆ ಒಳ್ಳೆಯ ನಾಗರಿಕರಾಗಬೇಕು. ಈ ಜಗತ್ತು ಇರುವುದು ನನ್ನ ಸಾಧನೆಗಾಗಿ ಎನ್ನುವ ಉತ್ಸಾಹ ಸದಾ ತುಂಬಿರಬೇಕು ಎಂದರು.ದ್ರೋಣ ಕರಿಯರ್ ಅಕಾಡೆಮಿಯ ಮುಖ್ಯಸ್ಥ ಕಲ್ಮೇಶ ಆಸಂಗಿ ಮಾತನಾಡಿ, ಒತ್ತಾಯದಿಂದ ಯಾವುದನ್ನು ಕಲಿಯಲಾಗದು. ಕಲಿಕೆಗೆ ಸ್ವಪ್ರೇರಣೆಯೇ ಮುಖ್ಯ, ಕಾಲೇಜು ಶಿಕ್ಷಣವೆಂದರೆ ಅಲ್ಲಿ ಹಲವಾರು ಆಯ್ಕೆಗಳಿರುತ್ತವೆ. ಉತ್ತಮರ ಒಡನಾಟ ಹೊಂದಿ ಕಲಿತ ಶಾಲೆಗೆ, ತಂದೆ-ತಾಯಿಗೆ, ಬೆಳೆಸಿದ ಊರಿಗೆ ಹೂ-ತರುವ ಸಾಧನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೇತುಬಂಧ ವರ್ಗಗಳಲ್ಲಿ ಆಯೋಜಿಸಿದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಾನ್ನಿಧ್ಯ ಅಥರ್ಗಾ ಗುರುದೇವಾಶ್ರಮದ ಈಶಪ್ರಸಾದ ಮಹಾಸ್ವಾಮಿಜೀ ವಹಿಸಿದ್ದರು. ಪ್ರಾಚಾರ್ಯ ಶ್ರೀಕಾಂತ ಕೆ.ಎಸ್,ಶರಣಗೌಡ ಪಾಟೀಲ, ಎಂ.ಎಂ.ಮಲಘಾಣ, ರಮೇಶ ಬಾಗೇವಾಡಿ ಮುಂತಾದವರು ಇದ್ದರು.