ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಂಕರಘಟ್ಟದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಸ್ನಾತಕೋತ್ತರ ವಿದ್ಯಾರ್ಥಿನಿ ನಿಲಯದ ಆವರಣದಲ್ಲಿ ಡಾ.ಸಣ್ಣರಾಮ ಅಭಿನಂದನಾ ಸಮಿತಿ ನೀಡಿರುವ ದತ್ತಿ ಆಶಯದಂತೆ ಸಮಕಾಲೀನ ಸಮಾಜ-ಮಹಿಳಾ ಬಿಕ್ಕಟ್ಟುಗಳು ಕುರಿತು ಉಪನ್ಯಾಸ ನೀಡಿದರು.ಗುಣಾತ್ಮಕ ಜೀವನಕ್ಕೆ ಪ್ರಜ್ಞೆ ಬೇಕು. ನಮ್ಮ ಅಸ್ತಿತ್ವದ ಚರಾಚರವನ್ನು ಗುರುತಿಸುವುದು ಪ್ರಜ್ಞೆ. ನಾವು ಮನುಷ್ಯರು ಎನ್ನುವ ಸಮಾನ ಪ್ರಜ್ಞೆ ನೆಲೆಯೂರಿದಾಗ ಮಾತ್ರ ನಾವು ಮನುಷ್ಯರಾಗಿರುತ್ತೇವೆ.
ನಮಗೆ ಸ್ವಯಂ ಅರಿವು ಇರಬೇಕು. ಕೂಡಿಟ್ಟು ಹಾಳು ಮಾಡುವುದಕ್ಕಿಂತ ಇಲ್ಲದವರಿಗೆ ಹಂಚಿ ಸಾಮಾಜಿಕ ಪ್ರಜ್ಞೆ ತಂದುಕೊಂಡರೆ ಬಿಕ್ಕಟ್ಟು ಮೀರಲು ಅವಕಾಶವಿದೆ. ನಾವು ಭಾರತೀಯರು ಎನ್ನುವ ಸಂವಿಧಾನ ಬದ್ಧ ಹಕ್ಕು ದೊರೆತಾಗಲೂ ಬಿಕ್ಕಟ್ಟು ಬಗೆ ಹರಿಯದಿರುವುದು ನಮ್ಮ ಚಿಂತನೆಗಳಲ್ಲಿನ ಭಿನ್ನತೆ ಕಾರಣವಾಗಿದೆ ಎಂದರು.ಗಿಡಕ್ಕೆ ನೀರೆರದು ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ದತ್ತಿ ಯೋಜನೆ ಅನೇಕ ಮಹನೀಯರ ಸ್ಮರಣೆ ಮಾಡುತ್ತಲೆ ಸಮಸಮಾಜಕ್ಕೆ ಮೌಲ್ಯಯುತ ವಿಚಾರಗಳನ್ನು ಮತ್ತೆ ನೆನಪು ಮಾಡಿಕೊಳ್ಳಲು ನೆರವಾಗುತ್ತಿದೆ.
ಡಿಎಸ್ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕು. ಸಂವಿಧಾನ ನೀಡಿದ ಸೌಲಭ್ಯ ಪಡೆದು ಉತ್ತಮ ಶಿಕ್ಷಣ ಪಡೆದು ಪ್ರಜ್ಞಾವಂತ ಪ್ರಜೆಗಳಾಗಬೇಕು. ಶೋಷಣೆ, ಮೌಢ್ಯದ ವಿರುದ್ಧ ಧ್ವನಿಎತ್ತಬೇಕು ಎಂದು ವಿವರಿಸಿದರು.