ಶಿರಹಟ್ಟಿ: ನಿರಂತರ ಅಧ್ಯಯನದಿಂದ ಶ್ರೇಷ್ಠತ್ವ ಸಾಧಿಸಬಹುದು. ಬಡತನಕ್ಕೂ ಮತ್ತು ಶಿಕ್ಷಣಕ್ಕೂ ಸಂಬಂಧವಿಲ್ಲ. ಆತ್ಮವಿಶ್ವಾಸ ಇದ್ದಿದ್ದೇ ಆದರೆ ಏನನ್ನಾದರೂ ಸಾಧಿಸಬಹುದು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ ಹೇಳಿದರು.
ಪಪಂ ಸದಸ್ಯ ಸಂದೀಪ ಕಪ್ಪತ್ತನವರ ಮಾತನಾಡಿ, ಯಾವುದೇ ಕಾರ್ಯಗಳನ್ನು ಇಷ್ಟಪಟ್ಟು ಮಾಡಬೇಕು. ಕಷ್ಟ ಪಟ್ಟು ಅಲ್ಲ. ಸಮಸ್ಯೆಗಳು ಇಲ್ಲದ ಜೀವನವೇ ಇಲ್ಲ. ಅದನ್ನು ಎದುರಿಸಿ ನಿಲ್ಲುವ ಛಲ, ಕಾರ್ಯ ನಮ್ಮದಾಗಬೇಕು. ಮನುಷ್ಯನು ಜೀವನದಲ್ಲಿ ಸಾಧಿಸುವ ಛಲ ಹೊಂದಿರಬೇಕು. ಗುರಿ ಇಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.
ಪಪಂ ಸದಸ್ಯ ಮಂಜುನಾಥ ಘಂಟಿ, ಗಂಧದ ಗುಡಿ ಬಳಗದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಹಸನ್ ತಹಶೀಲ್ದಾರ, ತಾಪಂ ಮಾಜಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಪಪಂ ಮಾಜಿ ಅಧ್ಯಕ್ಷ ಬುಡನಶ್ಯಾ ಮಕಾನದಾರ, ರವಿ ಗುಡಿಮನಿ, ಶಿಕ್ಷಣ ಸಂಯೋಜಕ ಹರೀಶ, ರಾಜಶೇಖರ ಅಕ್ಕಿ, ಅಕ್ಬರಸಾಬ್ ಯಾದಗಿರಿ, ಪ್ರವೀಣ ಹಡಪದ, ಮಾಬುಸಾಬ ಲಕ್ಷ್ಮೇಶ್ವರ, ಸಂಜೀವ ಪೋತರಾಜ, ರಿಯಾಜ್ ತಹಶೀಲ್ದಾರ, ಶ್ರೀನಿವಾಸ ಬಾರಬಾರ, ಆನಂದ ಕೊಡ್ಲಿ, ಶರೀಫ ಗುಡಿಮನಿ, ಶಿದ್ದಪ್ಪ ಶಿರಹಟ್ಟಿ, ಈರಣ್ಣ ಚಿಕ್ಕತೋಟದ, ಸತೀಶ ನರಗುಂದ, ಅನಿಲ ಗುಡಿಮನಿ ಇತರರಿದ್ದರು.