ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯ ಖಾಸಗಿ ಶಾಲೆಗಳಲ್ಲಿ ಓದಲು ಲಕ್ಷಾಂತರ ರೂಪಾಯಿ ಹಣ ಖರ್ಚಾಗುತ್ತದೆ, ಆದರೆ ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಉಚಿತ ಮಧ್ಯಾಹ್ನ ಬಿಸಿಯೂಟ,ಬಟ್ಟೆ, ಪುಸ್ತಕ,ಪ್ರತಿದಿನ ಮೊಟ್ಟೆ, ಬಾಳೆಹಣ್ಣು, ಹಾಗೂ ಮಕ್ಕಳಿಗೆ ಪಾಠ ಮಾಡಲು ಉನ್ನತ ಮಟ್ಟದ ಶಿಕ್ಷಕರನ್ನು ನೀಡುತ್ತೇವೆ, ಅದಕ್ಕೆ ವಿದ್ಯಾರ್ಥಿಗಳು ಸಹ ತಮ್ಮ ಅಕ್ಕಪಕ್ಕದ ಮನೆಗಳಲ್ಲಿ ಖಾಸಗಿ ಶಾಲೆಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ತಿಳಿಹೇಳಿ ಸರ್ಕಾರಿ ಶಾಲೆಗೆ ದಾಖಲಾಗುವಂತೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ತೆರೆಯಲು ಸರ್ಕಾರ ಸಿದ್ದವಾಗಿದೆ,ಗ್ರಾಪಂಃ ಸ್ಥಳ ನೀಡಿದರೆ 3ಕೋಟಿ ವೆಚ್ಚದಲ್ಲಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಮಾದರಿ ಸರ್ಕಾರಿ ಶಾಲೆಯನ್ನು ತೆರೆಯಲಾಗುವುದು, ಆಗ ಯಾವ ಮಗುವೂ ಖಾಸಗಿ ಶಾಲೆ ಕಡೆ ಮುಖ ಮಾಡುವುದಿಲ್ಲವೆಂದರು.
ಈ ವೇಳೆ ಅಧ್ಯಕ್ಷರು ಗ್ರಾ.ಪಂ ಆದಿನಾರಾಯಣ, ಪುರಸಭೆ ಅಧ್ಯಕ್ಷ ಗೋವಿಂದ,ಮಾಜಿ ತಾ.ಪಂ.ಸದಸ್ಯ ಜೆಸಿಬಿ ನಾರಾಯಣಪ್ಪ,ಪುರಸಭೆ ಸದಸ್ಯ ವೆಂಕಟೇಶ್, ಐನೋರಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ, ದೋಣಿಮಡಗು ಗ್ರಾ.ಪಂ ಅಧ್ಯಕ್ಷೆ ಮಂಜುಳ ಎಸ್.ಕೆ.ಜಯಣ್ಣ,ಕೇತಗಾನಹಳ್ಳಿ ಮಂಜುಳ ಕೆ.ಜಿ.ಶ್ರೀನಿವಾಸ,.ತೊಪ್ಪನಹಳ್ಳಿ ಅಧ್ಯಕ್ಷರು ಗ್ರಾ.ಪಂ ಪ್ರಭಾಕರ ರೆಡ್ಡಿ, ಕೆ.ಟಿ.ರಂಗನಾಥನಾಯ್ಡು,ಬಲಮಂದೆ ಅಧ್ಯಕ್ಷೆ ಸರಸ್ವತಿ ರಾಮಶೆಟ್ಟಿ, ಪಿ.ಡಿ.ಓ ವಾಣಿ.ಸಿ.ಎಂ, ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯಗೌಡ , ಸಮನ್ವಯ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ,ಉಪಾಧ್ಯಕ್ಷೆ ಗುಲ್ವಾಜ್ ಮುನೀರ್ ಮುಖ್ಯೋಪಾಧ್ಯಾಯ ಕೆ ಜಿ ಶ್ರೀನಿವಾಸ್,ಮುನಿನಾರಾಯಣ,