ಮಹದಾಯಿ ಜಾರಿಗೊಳಿಸಿ ಇಲ್ಲವೇ ದಯಾಮರಣ ನೀಡಿ!

KannadaprabhaNewsNetwork |  
Published : Jul 22, 2025, 01:15 AM IST
21ಎಚ್‌ಯುಬಿ23ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರೈತರು ನಾನಾ ಬೇಡಿಕೆ ಈಡೇಸುವಂತೆ ಆಗ್ರಹಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಚಕ್ಕಡಿ ಮೆರವಣೆಗೆ ನಡೆಸಿದರು. | Kannada Prabha

ಸಾರಾಂಶ

ರೈತ ಹೋರಾಟಗಾರ ಮೈಲಾರಪ್ಪ ವೈದ್ಯ ರಕ್ತದಲ್ಲಿ ಪತ್ರ ಬರೆದು ಮಹದಾಯಿ ಯೋಜನೆ ಜಾರಿಗೊಳಿಸದಿದ್ದರೆ ದಯಾಮರಣಕ್ಕೆ ಅವಕಾಶ ಕೊಡಬೇಕು ಎಂದು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದು ವಿಶೇಷವಾಗಿತ್ತು.

ನವಲಗುಂದ: ರೈತ ಹುತಾತ್ಮ ದಿನವನ್ನು ಪಟ್ಟಣದಲ್ಲಿ ವಿವಿಧ ರೈತ ಸಂಘಟನೆಗಳು ಆಚರಿಸಿದವು. ಹುತಾತ್ಮ ರೈತರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ ರೈತ ಮುಖಂಡರು, ಮಹದಾಯಿ ಯೋಜನೆ ಜಾರಿಗೊಳಿಸದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ರೈತ ಹೋರಾಟಗಾರ ಮೈಲಾರಪ್ಪ ವೈದ್ಯ ರಕ್ತದಲ್ಲಿ ಪತ್ರ ಬರೆದು ಮಹದಾಯಿ ಯೋಜನೆ ಜಾರಿಗೊಳಿಸದಿದ್ದರೆ ದಯಾಮರಣಕ್ಕೆ ಅವಕಾಶ ಕೊಡಬೇಕು ಎಂದು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದು ವಿಶೇಷವಾಗಿತ್ತು.

ರೈತ ಹುತಾತ್ಮ ದಿನದ ಅಗಂವಾಗಿ ಸೋಮವಾರ ನೂರಾರು ರೈತರೊಂದಿಗೆ ಪಟ್ಟಣದ ಗಣಪತಿ ದೇವಸ್ಥಾನದಿಂದ ರೈತ ಭವನದ ವರೆಗೆ ಚಕ್ಕಡಿ ರ್‍ಯಾಲಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ರೈತ ಮುಖಂಡ ಲೋಕನಾಥ ಹೆಬಸೂರ, ತಾಲೂಕಿನಲ್ಲಿ ಸಾಕಷ್ಟು ಮಳೆಯಿಂದ ಬೆಳೆ ಹಾನಿಯಾಗಿದೆ. ಆದರೆ, ಶಿರಗುಪ್ಪಿ ಹೋಬಳಿಗೆ ಸೀಮಿತವಾಗಿ ಬೆಳೆವಿಮೆ ಬಿಡುಗಡೆ ಮಾಡಿಸಲಾಗಿದೆ. ಈ ಮೂಲಕ ತಾಲೂಕಿನ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಕಳಸಾ- ಬಂಡೂರಿ ಯೋಜನೆಯನ್ನು ಬರುವ ಮೂರು ತಿಂಗಳಲ್ಲಿ ಅನುಷ್ಠಾನಗೊಳಿಸದಿದ್ದಲ್ಲಿ ಕೇಂದ್ರ ಸಚಿವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ ಮಾತನಾಡಿ, ಬೆಳೆಹಾನಿ, ವಿಮೆ ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಅನ್ಯಾಯ ಮಾಡುತ್ತಿವೆ. ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ನಮ್ಮ ಬೇಡಿಕೆಗಳು ಈಡೇರುತ್ತವೆ ಹಾಗೆಯೇ ಕಳಸಾ ಬಂಡೂರಿ ನಾಲಾ ಜೋಡಣೆ ವಿಚಾರದಲ್ಲಿ ಸದಾಕಾಲ ಈ ಭಾಗದ ರೈತರ ಹೋರಾಟಕ್ಕೆ ಬೆಂಬಲಕ್ಕೆ ಸಿದ್ಧನಿರುವೆ ಎಂದರು.

ಗವಿಮಠದ ಬಸವಲಿಂಗಸ್ವಾಮೀಜಿ, ಅಜಾತನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಶ್ರೀಗಳು ಮಾತನಾಡಿ, ಸರ್ಕಾರಗಳು ರೈತರ ತಾಳ್ಮೆ ಪರೀಕ್ಷಿಸದೇ ಕೂಡಲೇ ಕಳಸಾ ಬಂಡೂರಿ ಸೇರಿದಂತೆ ರೈತರ ಬೇಡಿಕೆ ಈಡೇರಿಸಬೇಕು ಎಂದರು.

ರೈತ ಬಡಗಲಪುರ ನಾಗೇಂದ್ರ, ಚಾಮರಸ ಮಾಲಿಪಾಟೀಲ್, ಮುಖಂಡರಾದ ನಾಗಪ್ಪ ಉಂಡಿ, ಸಿದ್ದನಗೌಡ ಪಾಟೀಲ, ಎನ್. ಡಿ. ವಸಂತಕುಮಾರ, ಪ್ರಕಾಶ ಗೊಂದಳೇ, ದ್ಯಾಮನಗೌಡ ಪಾಟೀಲ, ರವಿರಾಜ ಕಂಬಳಿ, ಶ್ರೀಶೈಲ ಮೂಲಿಮನಿ, ಶಿರಾಜ ಧಾರವಾಡ, ವಿಕ್ರಮ ಕುರಿ, ನಿಂಗಪ್ಪ ಕೆಳಗೇರಿ ಸೇರಿ ರೈತಹೋರಾಟಗಾರರು ಇದ್ದರು.

ರೈತ ಚಳುವಳಿಗೆ ಬಂಡಾಯ ನೆಲ ಪ್ರೇರಣೆ: ಯರಗುಪ್ಪಿ

ನವಲಗುಂದ:

ರೈತರ ಚಳುವಳಿಗೆ ಪ್ರೇರಣೆಯಾಗಿ ನಿಲ್ಲುವಂತಹ ಹೋರಾಟದ ಸ್ಥಳವೆಂದರೆ ಅದು ಬಂಡಾಯದ ನೆಲವಾಗಿದೆ. ಇಲ್ಲಿ ನಡೆದಂತಹ ರೈತ ಚಳುವಳಿ ರೈತ ಸಂಘ ಕಟ್ಟಲು ಪ್ರೇರಣೆಯಾಗಿದೆ ಎಂದು ಉತ್ತರ ಕರ್ನಾಟಕ ಪರಿವರ್ತನ ಸಮುದಾಯದ ಅಧ್ಯಕ್ಷ ಮಾಬುಸಾಬ ಯರಗುಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಪಟ್ಟಣದ ರೈತ ಭವನ ಬಳಿ ಇರುವ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ರೈತ ಮುಖಂಡ ಮಲ್ಲಿಕಾರ್ಜುನಸ್ವಾಮಿ ಮಠಪತಿ ಮಾತನಾಡಿದರು. ಈ ಸಂದರ್ಭದಲ್ಲಿ ಸುಭಾಷಚಂದ್ರಗೌಡ ಪಾಟೀಲ್, ಸುಭಾಷ ಕಿತ್ತಲಿ, ಮಲ್ಲೇಶ ಉಪ್ಪಾರ, ಮಾಬುಸಾಬ ಕೆರೂರ, ಮಹಮ್ಮದಲಿ ಮಿರ್ಜಿ, ರಿಯಾಜಅಹ್ಮದ ನಾಶಿಪುಡಿ, ಮಹಾಂತೇಶ ಉಕಲಿ, ರವಿ ತೋಟದ, ಅಕ್ಬರ ಮುಲ್ಲಾ, ಕರಿಯಪ್ಪ ಹರ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ
ಎಸ್ಸೆಸ್ಸೆಲ್ಸಿ ಪಾಸ್‌ಗೆ 33% ಅಂಕ: ಮಿಶ್ರ ಪ್ರತಿಕ್ರಿಯೆ