ಹುಬ್ಬಳ್ಳಿ:
ಅಂದು ನಡೆಯುವ ಕಾರ್ಯಕ್ರಮಕ್ಕೆ ರೋಟರಿ ಜಿಲ್ಲಾ ಗವರ್ನರ್ ನಾಸಿರ್ ಬೋರಸದವಾಲ್ ಮತ್ತು ಹಿಂದಿನ ಗವರ್ನರ್ ವೆಂಕಟೇಶ ದೇಶಪಾಂಡೆ, ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಸುರೇಂದ್ರ ಫೋರವಾಲ್, ಕಿಮ್ಸ್ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ್ ಸಿ, ಕಾರ್ಯದರ್ಶಿ ಶಿವಪ್ರಸಾದ್ ಲಕ್ಕಮನಹಳ್ಳಿ ಸೇರಿದಂತೆ ಮೊದಲಾದವರು ಆಗಮಿಸಲಿದ್ದಾರೆ ಎಂದರು.
ಸ್ತನ್ಯಪಾನವು ನವಜಾತ ಶಿಶುಗಳಿಗೆ ಮುಖ್ಯ ಆಹಾರ ನೀಡುವ ವಿಧಾನ. ಏಕೆಂದರೆ ತಾಯಿ ಹಾಲು ಅಮೃತ ಸಮಾನ. ಆದರೆ, ತಾಯಿ ಹಾಲು ಕೆಲವು ಕಾರಣಗಳಿಂದ ಸಿಗುವುದಿಲ್ಲ. ಇದರಿಂದಾಗಿ ಮಗು ಅನಾರೋಗ್ಯದಿಂದ ಬಳಲುವ ಸಾಧ್ಯತೆ ಇರಲಿದ್ದು, ತೂಕ ಇಳಿಕೆ, ಅಪೌಷ್ಟಿಕತೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ತಾಯಿಯ ಹಾಲು ಕೊಡುವುದಕ್ಕಾಗಿಯೇ ಕಿಮ್ಸ್ನಲ್ಲಿ ಜೀವಾಮೃತ ಹೆಸರಿನಲ್ಲಿ ಹ್ಯುಮನ್ ಮಿಲ್ಕ್ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ. ತಾಯಂದಿರು ಕೊಡುವ ಹಾಲು ಸಂಗ್ರಹಿಸಿ ಸಂಸ್ಕರಿಸಿದ ನಂತರ ಪಂಪ್ ಮಾಡಿ ಮಕ್ಕಳಿಗೆ ನೀಡಲಾಗುತ್ತಿದೆ. ಈ ವ್ಯವಸ್ಥೆ ಬೆಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಈಗ ಆರಂಭಿಸಲಾಗುತ್ತಿದೆ ಎಂದರು.ಈ ವೇಳೆ ಜೀವಾಮೃತ ಯೋಜನಾ ಸಂಚಾಲಕ ಡಾ. ಪ್ರಕಾಶ ವಾರಿ, ಲಿಂಗರಾಜ ಪಾಟೀಲ್, ವಾಸುಕಿ ಸಂಜಿ ಸೇರಿದಂತೆ ಹಲವರಿದ್ದರು.