ಹೈನುಗಾರಿಕೆಯಲ್ಲಿ ತಾಂತ್ರಿಕತೆಯಿರಲಿ

KannadaprabhaNewsNetwork |  
Published : Sep 17, 2026, 02:00 AM IST
೧೫ಶಿರಾ೨: ಶಿರಾ ತಾಲೂಕಿನ ಬುಕ್ಕಾಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿ ಡೇರಿಗೆ ಹಾಕಿದ ರೈತರಿಗೆ ಸನ್ಮಾನ ಹಾಗೂ ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.  ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ತಂತ್ರಜ್ಞಾನ ಆಧಾರಿತ ಹೈನುಗಾರಿಕೆ ಬದಲಾದ ಸಂದರ್ಭದಲ್ಲಿ ಅವಶ್ಯಕತೆ ಇದ್ದು ನವೀನ ತಂತ್ರಜ್ಞಾನಗಳ ಮೂಲಕ ರೈತರು ಹೈನುಗಾರಿಕೆಯನ್ನು ಮಾಡಿ ಹೆಚ್ಚು ಹೆಚ್ಚು ಲಾಭಗಳಿಸುವಂತಹಾಗಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ತಂತ್ರಜ್ಞಾನ ಆಧಾರಿತ ಹೈನುಗಾರಿಕೆ ಬದಲಾದ ಸಂದರ್ಭದಲ್ಲಿ ಅವಶ್ಯಕತೆ ಇದ್ದು ನವೀನ ತಂತ್ರಜ್ಞಾನಗಳ ಮೂಲಕ ರೈತರು ಹೈನುಗಾರಿಕೆಯನ್ನು ಮಾಡಿ ಹೆಚ್ಚು ಹೆಚ್ಚು ಲಾಭಗಳಿಸುವಂತಹಾಗಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.

ಶಿರಾ ತಾಲೂಕಿನ ಬುಕ್ಕಾಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಸಂಘದ ಆಡಳಿತ ಹಾಗೂ ಉತ್ಪಾದಕರ ಸ್ನೇಹಪೂರ್ವ ಸಮನ್ವಯತೆ ಸಂಘ ಅತಿ ಹೆಚ್ಚು ಲಾಭಾಂಶ ಪಡೆಯಲು ಸಾಧ್ಯವಾಗಿದೆ. ಪ್ರತಿ ಸದಸ್ಯರು ೫ ಲಕ್ಷ ಬೋನಸ್ ಪಡೆಯುವಷ್ಟು ಸಂಘ ಆರ್ಥಿಕ ಭದ್ರತೆಯನ್ನು ಹೊಂದಿದೆ. ಸಂಘ ಮತ್ತು ಒಕ್ಕೂಟ ಎಷ್ಟೇ ಲಾಭಗಳಿಸಿದರು ಅದು ರೈತರಿಗೆ ಸೇರುತ್ತದೆ ಎಂದರು.

ಬುಕ್ಕಾಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಜೆ. ಶಿವಕುಮಾರ್ ಮಾತನಾಡಿ, ಹಾಲು ಉತ್ಪಾದಕರ ಸಂಘದ ಸಿಬ್ಬಂದಿ ಹಾಗೂ ಹಾಲು ಉತ್ಪಾದಕರ ಪರಸ್ಪರ ಸಹಕಾರ, ಜನ ಸ್ನೇಹಿ ಆಡಳಿತದಿಂದ ಸಂಘ ಮತ್ತಷ್ಟು ಯಶಸ್ವಿ ಕಾಣಲಿದೆ. ನಿಷ್ಠೆ, ಪ್ರಾಮಾಣಿಕತೆ, ಶ್ರಮದಿಂದ ಹೈನುಗಾರಿಕೆ ಮಾಡಿದರೆ ಹೆಚ್ಚು ಲಾಭ ನಿಮ್ಮದಾಗಲಿದೆ ಎಂದರು.

ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಬಿ.ಗಿರೀಶ್, ಉಮೇಶ್, ಬಿ.ಕೆ. ಮಂಜುನಾಥ್, ವಿಶ್ವನಾಥ್, ಜೆ ವಿಜಯ್ ಲಿಂಗಪ್ಪ ,ರಹಮತ್ ಉಲ್ಲಾ ಬೇಗ್, ದ್ಯಾಮಣ್ಣ, ದಯಾನಂದ.ಬಿ.ಎಂ, ಬಿ.ಆರ್. ರಾಜಣ್ಣ, ಶಿವಣ್ಣ, ನೀಲಕಂಠಪ್ಪ, ನಾಗರತ್ನಮ್ಮ, ತೇಜಸ್ವಿನಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್‌ಎಸ್‌ಎಸ್‌ ಎಂದರೆ ಗೃಹಮಂತ್ರಿಗೆ ಚೇಳು ಕಡಿದಂಗಾಗುತ್ತೆ
ಮಳೆಗಾಲದಲ್ಲೇ ಬರಿದಾಗುತ್ತಿದೆ ಐತಿಹಾಸಿಕ ಭೀಷ್ಮ ಕೆರೆ!