- ಇಲಾಖೆ ಮೈಸೂರು ವಿಭಾಗಕ್ಕೆ ಪತ್ರ ಬರೆದು ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ ಒತ್ತಾಯ - - - * ಆಗ್ರಹಗಳೇನು? - ಮಾಸಿಕ ₹2.5 ಕೋಟಿ ಆದಾಯ ತರುವ ನಿಲ್ದಾಣ ಕಡೆಗಣನೆ ಬೇಡ
- ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ಮಾರ್ಗ ಬೇಗ ಮುಗಿಸಿ
- - -
ರೈಲ್ವೆ ಇಲಾಖೆಗೆ ಮಾಸಿಕ ಸುಮಾರು ಕನಿಷ್ಠ ₹2.5 ಕೋಟಿ ಆದಾಯ ತರುವ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಮತ್ತಷ್ಟು ಹೆಚ್ಚಿಸುವಂತೆ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘವು ಇಲಾಖೆಯ ಮೈಸೂರು ವಿಭಾಗಕ್ಕೆ ಒತ್ತಾಯಿಸಿದೆ.
ರೈಲು ಸಂಚಾರದ ಸಂಖ್ಯೆ, ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನಿಲ್ದಾಣದಲ್ಲಿ ಮೂಲ ಸೌಕರ್ಯ ಅಷ್ಟಾಗಿ ಇಲ್ಲ. ನಿಲ್ದಾಣದಲ್ಲಿ ತುರ್ತಾಗಿ ಟ್ರೋಲಿ ಪಾಥ್, ವಿಶೇಷಚೇತನರು, ಹಿರಿಯ ನಾಗರಿಕರಿಗೆ ನಿಲ್ದಾಣದ ಮುಖ್ಯ ದ್ವಾರದಿಂದ ರೈಲ್ವೆ ಕೋಟ್ ಮುಟ್ಟಲು ಅನುಕೂಲವಾಗುವಂತೆ ಬ್ಯಾಟರಿ ಚಾಲಿತ ಕಾರಿನ ವ್ಯವಸ್ಥೆ ಮಾಡಬೇಕು. ನಿಲ್ದಾಣದ ಫ್ಲಾಟ್ ಫಾರಂ ಮೇಲೆ ವಿಕಲಚೇತನರು ತಾವು ಹತ್ತಬೇಕಾದ ಕೋಚ್ ತಲುಪಲು ಇದರಿಂದ ಅನುಕೂಲ ಆಗುತ್ತದೆ ಎಂದು ಹೇಳಿದ್ದಾರೆ.
ನಿತ್ಯವೂ ಬೆಳಗ್ಗೆ ವೇಳೆ ಬೆಂಗಳೂರು ಕಡೆ ಹೋಗುವ ರೈಲುಗಳ ಟಿಕೆಟ್ ಪಡೆಯಲು ಪ್ರಯಾಣಿಕರ ದಟ್ಟಣೆ ಯಥೇಚ್ಛವಾಗಿ ಇರುತ್ತದೆ. ಹರಸಾಹಸ ಮಾಡಿ, ಟಿಕೆಟ್ ಪಡೆಯಬೇಕಾದ ಪರಿಸ್ಥಿತಿ ಇಲ್ಲಿದೆ. ರೈಲ್ವೆ ಇಲಾಖೆಯು ಇಂಟರ್ ಸಿಟಿ ಮತ್ತು ಪ್ಯಾಸೆಂಜರ್ ರೈಲುಗಳು ಬರುವ ವೇಳೆ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಕೌಂಟರ್ಗಳನ್ನು ಸ್ಥಾಪಿಸಿ, ಟಿಕೆಟ್ ನೀಡುವ ವ್ಯವಸ್ಥೆ ಮಾಡಬೇಕು. ಇಡೀ ನಿಲ್ದಾಣದಲ್ಲಿ ಸಮರ್ಪಕವಾಗಿ ಬೆಂಚ್ಗಳ ವ್ಯವಸ್ಥೆ ಇಲ್ಲ. ಇದ್ದರೂ ಬಹುತೇಕ ಪ್ರಯಾಣಿಕರು ನಿಂತುಕೊಳ್ಳುವ ಸ್ಥಿತಿ ಇದೆ. ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತು ಕೊಳ್ಳಲು ಹೆಚ್ಚಿನ ಬೆಂಚಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗವು ಬೆಂಗಳೂರು-ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ ಮಧ್ಯೆ 65 ಕಿಮೀ ಅಂತರ ಕಡಿಮೆ ಮಾಡುತ್ತದೆ. ಆದಷ್ಟು ಬೇಗನೆ ಈ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ರೈಲ್ವೆ ಹಳಿ ಜೋಡಣೆ ಕಾಮಗಾರಿ ಕೈಗೊಳ್ಳಬೇಕು. ಹೊಸ ಮಾರ್ಗದ ಕಾಮಗಾರಿ ಸಮರೋಪಾದಿಯಲ್ಲಿ ಆಗಿ, ನೇರ ಮಾರ್ಗದಲ್ಲಿ ರೈಲು ಸಂಚಾರವಾದರೆ ದಾವಣರೆ- ಬೆಂಗಳೂರು ಅಂತರ 65 ಕಿಮೀ ಕಡಿಮೆಯಾಗಿ, ಜನರ ಅಮೂಲ್ಯ ಸಮಯ, ಇಂಧನ- ವಿದ್ಯುತ್- ಹಣ- ಸಮಯ ಎಲ್ಲವೂ ಉಳಿದು, ಹೊಸ ನಿಲ್ದಾಣಗಳೂ ತಲೆ ಎತ್ತಲು ಆಸರೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಕೋಟ್ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ಕೌಂಟರ್ ಇದೆ. ಆದರೆ, ಅಲ್ಲಿ ಅದು ಕಾರ್ಯರೂಪಕ್ಕೆ ಬಂದಿಲ್ಲ. ಆದಷ್ಟು ಬೇಗನೆ ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಆರಂಭಿಸಬೇಕು. ಈ ಬಗ್ಗೆ ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗ ಅಧಿಕಾರಿಗಳು ಪ್ರಥಮಾದ್ಯತೆ ಮೇಲೆ ಕ್ರಮ ಕೈಗೊಳ್ಳಲಿ
- - - -18ಕೆಡಿವಿಜಿ1, 2: ದಾವಣಗೆರೆ ರೈಲ್ವೆ ನಿಲ್ದಾಣದ ಸಂಗ್ರಹ ಚಿತ್ರ.
-ರೈಲ್ (ಸಾಂದರ್ಭಿಕ ಚಿತ್ರ)