ಭಾರತ ದೇಶದ ಧಾರ್ಮಿಕ ಸಂಸ್ಕೃತಿ ಶ್ರೀಮಂತವಾಗಿದ್ದು, ನಾವು ನಡೆದುಕೊಳ್ಳುವ ರೀತಿಯ ಮೇಲೆ ಭಗವಂತ ಒಲಿಯಲಿದ್ದಾನೆ. ಒಗ್ಗಟ್ಟಿಗೆ ಬಲವಿದೆ ಎಂಬುದಕ್ಕೆ ಎಲ್ಲರೂ ಒಗ್ಗೂಡಿ ಹೊಸಹಳ್ಳಿ ಗ್ರಾಮದಲ್ಲಿ ಮೂರು ಭವ್ಯ ದೇಗುಲಗಳ ನಿರ್ಮಾಣ ಮಾಡಿರುವುದೇ ಸಾಕ್ಷಿ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ರಾಮಕೃಷ್ಣ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳು ಆರ್ಶೀವಚನ ನೀಡಿ ಮನುಷ್ಯನ ದುರ್ನಡತೆ, ದುರ್ಗುಣಗಳಿಗೆ ವಿಜ್ಞಾನದಿಂದ ಪರಿಹಾರಕ್ಕೆ ಸಾಧ್ಯವಾಗಿಲ್ಲ. ಆಧ್ಯಾತ್ಮಿಕತೆ ಮತ್ತು ಧರ್ಮದ ಮೂಲದಿಂದ ನಿವಾರಿಸಲು ಸಾಧ್ಯವಾಗಿದೆ. ಹೊಸಹಳ್ಳಿ ಯಂತಹ ಗ್ರಾಮ ಇತರೆ ಗ್ರಾಮಗಳಿಗೆ ಮಾದರಿಯಾಗಲಿ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಮಾತನಾಡಿದರು. ಗ್ರಾಮೀಣ ಅಭಿವೃದ್ಧಿ ಇಲಾಖೆ ನಿವೃತ್ತ ನಿರ್ದೇಶಕ ಭುವನಹಳ್ಳಿ ನಾಗರಾಜ್ ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ, ತಿಮ್ಮರಾಯಪ್ಪ, ರಾಮಚಂದ್ರಪ್ಪ, ಲಕ್ಷ್ಮಣ್, ಕಾಂತರಾಜು, ನಾಗರಾಜು, ಹನುಮಂತರಾಯಪ್ಪ, ಸಣ್ಣ ನಿಂಗಪ್ಪ, ಸಿದ್ದಲಿಂಗಪ್ಪ, ಜಯಣ್ಣ, ರಾಮಕೃಷ್ಣಪ್ಪ, ಶಶಿಧರ, ಶೇಖರ್, ಕೆ.ಜಯಣ್ಣ, ಎಚ್. ಡಿ .ರಂಗನಾಥ್, ಮಲ್ಲಿಕಾರ್ಜುನ, ಎಚ್.ಎಸ್. ಚಂದ್ರಶೇಖರ್, ಕೆ ಈರಣ್ಣ, ನಾಗರಾಜು ಇದ್ದರು.