ಕನ್ನಡಪ್ರಭ ವಾರ್ತೆ ತುರುವೇಕೆರೆ
ಯೋಗಶಕ್ತಿಯಿಂದ ಜನರು ಹೆಚ್ಚು ಆರೋಗ್ಯವಂತರಾಗಿ ಹೆಚ್ಚು ವರ್ಷಗಳ ಕಾಲ ನಿರೋಗಿಯಾಗಿ ಬದುಕಬಹುದು. ಯಾರು ಯೋಗದೊಂದಿಗೆ ಪರಮಾತ್ಮನ ಸೇವೆ ಮಾಡುವನೇ ಅವನೇ ಸುಖೀಜೀವಿ. ಲಿಂಗ ಪೂಜೆ ಮಾಡುವವನು ಜಗತ್ತೇ ನನ್ನದು. ಎಲ್ಲರೂ ಸುಖ ಸಂತೋಷದಿಂದ ಇರಲಿ ಎಂದು ಆಶಿಸುವವನು ಆಗಿರುತ್ತಾನೆ. ದೇವಾನು ದೇವತೆಗಳೇ ಲಿಂಗಪೂಜೆ ಮಾಡುತ್ತಿದ್ದರು. ಮೊದಲ ಪೂಜೆಯೇ ಲಿಂಗಪೂಜೆಯಾಗಿತ್ತು. ಲಿಂಗಪೂಜೆ ಮಾಡುವವನಿಗೆ ನಾಶ ಎಂಬುದೇ ಇರುವುದಿಲ್ಲ ಎಂದರು. ನಾವು ಏನೇ ಕಾಯಕ ಮಾಡಿದರೂ ಸಹ ಬಹಳ ಶ್ರದ್ಧಾ ಭಕ್ತಿಯಿಂದ ಮಾಡಬೇಕು. ಏಕಾಗ್ರತೆ ಇರಬೇಕು. ವ್ಯವಸಾಯ ಎಂಬುದು ಭೂತಾಯಿಯ ಸೇವೆಯಂತೆ. ಆದರೆ ಈಗ ಭೂತಾಯಿಯ ಸೇವೆ ಮಾಡುವವರಿಗೆ ಬೆಲೆಯೇ ಇಲ್ಲದಂತೆ ಆಗಿದೆ. ಇಡೀ ಜೀವಸಂಕುಲಕ್ಕೆ ಜೀವನಾಧಾರವಾಗಿರುವ ರೈತರ ಬೆಲೆ ಇನ್ನು ಕೆಲವೇ ದಿನಗಳಲ್ಲಿ ಪ್ರಪಂಚದ ಅರಿವಿಗೆ ಬರಲಿದೆ. ಎಷ್ಠೇ ಹಣ, ಚಿನ್ನ, ಬೆಳ್ಳಿ ಸಂಪಾದಿಸಿದರೂ ಸಹ ಎಲ್ಲರೂ ರೈತರು ಬೆಳೆಯುವ ಆಹಾರವನ್ನೇ ತಿನ್ನಬೇಕು. ಮುಂಬರುವ ದಿನಗಳಲ್ಲಿ ಆಹಾರದ ಬೆಲೆ ಏನು ಎಂಬುದು ಅರಿವಿಗೆ ಬರಲಿದೆ ಎಂದರು.
ಪ್ರಶಸ್ತಿ: ಶಿವಗಂಗಾ ಮೇಲಣಗವಿ ಮಠದಿಂದ ಕೊಡ ಮಾಡುವ ಶಿವಗಂಗಾ ಪ್ರಶಸ್ತಿಯನ್ನು ಮುಂಬರುವ ವರ್ಷದಲ್ಲಿ ಕಾಡ ಸಿದ್ದೇಶ್ವರ ಮಠವನ್ನು ಜನ ಸಾಮಾನ್ಯರ ಹತ್ತಿರಕ್ಕೆ ತಂದು ಎಲ್ಲರ ಬದುಕಿಗೆ ದಾರಿ ದೀಪವಾಗಿ ಸೇವೆ ಮಾಡುತ್ತಿರುವ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶೀಕೇಂದ್ರ ಮಹಾಸ್ವಾಮಿಗಳಿಗೆ ಪ್ರದಾನ ಮಾಡಲಾಗುವುದು.ಭಕ್ತರಿಗೆ ಆಶೀರ್ವಚನ ನೀಡಿದ ಡಾ.ಕರಿವೃಷಭ ದೇಶೀಕೇಂದ್ರ ಮಹಾಸ್ವಾಮಿಗಳು ವೀರಶೈವ ಧರ್ಮ ಆಲದ ಮರವಿದ್ದಂತೆ. ನಾಲ್ಕು ಸಾವಿರ ವರ್ಷಗಳ ಇತಿಹಾಸವಿರುವ ವೀರಶೈವ ಧರ್ಮ ಸರ್ವರ ಹಿತ ಕಾಯುವ ಧರ್ಮವಾಗಿದೆ ಎಂದರು.ಈ ವೇಳೆ ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮಿಜಿ, ಸಮಾಜದ ಮುಖಂಡರಾದ ಗುರುಚನ್ನಬಸವಾರಾಧ್ಯ, ಎಸ್.ಎಂ.ಕುಮಾರಸ್ವಾಮಿ, ಮುಖ್ಯ ಶಿಕ್ಷಕ ನಟೇಶ್, ಚಂದ್ರಶೇಖರ್, ಸುನಿಲ್ ಬಾಬು, ಡಾ.ರುದ್ರಯ್ಯ ಹಿರೇಮಠ್, ಅಂಬಿಕಮ್ಮ, ನಿರ್ಮಲಾ, ಗಣೇಶ್, ಚಿದಾನಂದ್, ರೇಣುಕೇಶ್, ವಿಶ್ವನಾಥ್, ವಕೀಲ ಧನಪಾಲ್, ಮಲ್ಲಿಕಾರ್ಜುನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ನಟೇಶ್ ಸ್ವಾಗತಿಸಿದರು. ಸುನಿಲ್ ಬಾಬು ಕಾರ್ಯಕ್ರಮ ನಿರೂಪಿಸಿದರು.