ಕುಕನೂರು: ಶ್ರೀರಾಮ ಮಂದಿರ ಉದ್ಘಾಟನೆ ಆಗಿರುವುದು ಭಾರತದ ಭವ್ಯತೆಯ ಪ್ರತೀಕವಾಗಿದೆ. ಕೋಟಿ ಕೋಟಿ ಭಾರತೀಯರ ಹೃದಯಾಳದಿಂದ ಮಂದಿರ ಮೂಡಿದೆ. ಇದು ಭಾರತದ ದಿವ್ಯ ಹಂದರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಯಜಮಾನತ್ವದಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡಿರುವುದು ಹೆಮ್ಮೆಯ ಸಂಗತಿ. ಇದೊಂದು ಭಾರತದ ಅಭೂತಪೂರ್ವ ಸಮಯವೂ ಹೌದು. ಭಾರತೀಯರ ನೂರಾರು ವರ್ಷಗಳ ಹೋರಾಟದ ಫಲ ಸಿಕ್ಕಿದೆ. ಶ್ರೀರಾಮ ಮಂದಿರ ಇಡೀ ವಿಶ್ವಕ್ಕೆ ಭವ್ಯ ಮಂದಿರ ಆಗಲಿದೆ. ಭಾರತದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಶ್ರೀರಾಮನ ಗುಣ, ಆತನ ಜನರ ಪ್ರೀತಿ, ಸ್ವಭಾಗಳನ್ನು ನಾವು ಪಾಲಿಸಬೇಕು. ಅಂತಹ ದಿವ್ಯ ಚೇತನನಿಗೆ ಮಂದಿರ ನಿರ್ಮಿಸಲು ಕಾರಣೀಭೂತರಾದ ರಾಷ್ಟ್ರದ ಪ್ರತಿಯೊಬ್ಬ ಜನತೆಯ ಸಹಕಾರ ಅತ್ಯಂತ ಶ್ರೇಷ್ಠ ಆದದ್ದು ಎಂದರು.ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌರಾ ಬಸವರಾಜ ಮಾತನಾಡಿ, ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನೂರಾರು ವರ್ಷಗಳಿಂದ ಸಾವಿರಾರು ಜನರು ಹೋರಾಟ ಮಾಡುತ್ತಾ ಬಂದಿದ್ದಾರೆ. ಆ ಹೋರಾಟದ ಫಲ ಮಂದಿರ ನಿರ್ಮಾಣವಾಗಿದೆ. ಭಾರತೀಯರ ಅಭಿಲಾಷೆ ಈಡೇರಿದೆ. ಮಂದಿರ ನಿರ್ಮಾಣಕ್ಕೆ ಶತಕಗಳೇ ಉರುಳಿವೆ. ಮಂದಿರ ಉದ್ಘಾಟನೆಯಿಂದ ಶತಮಾನಗಳ ಕನಸು ನೆರವೇರಿದೆ ಎಂದರು.ಮಾಹಾಮಾಯಾ ದೇವಸ್ಥಾನದಲ್ಲಿ ನವೀನ ಗುಳಗಣ್ಣನವರ್ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರನ್ನು ಬ್ರಾಹ್ಮಣ ಸಮಾಜದಿಂದ ಸನ್ಮಾನಿಸಲಾಯಿತು.ಪ್ರಮುಖರಾದ ಶಿವಕುಮಾರ ನಾಗಲಾಪುರಮಠ, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಶಂಭು ಜೋಳದ, ಪ್ರಕಾಶ ಬೋರಣ್ಣನವರ್, ವೀರೇಶ ಸಬರದ, ಶಿವರಾಜಗೌಡ ಯಲ್ಲಪ್ಪಗೌಡ್ರು, ಮಾರುತಿ ಗಾವರಾಳ, ಕರಬಸಯ್ಯ ಬಿನ್ನಾಳ, ರಾಜು ದ್ಯಾಂಪೂರ, ಮಹಾಂತೇಶ ಹೂಗಾರ, ಬಸವರಾಜ ಹಾಳಕೇರಿ, ರವಿ ಜಕ್ಕಾ, ಮಂಜುನಾಥ ಮಾಲಗಿತ್ತಿ, ಬಸವರಾಜ ಉಮಚಗಿ, ಮಂಜುನಾಥ, ಶಶಿ ಭಜಂತ್ರಿ ಇದ್ದರು.