ಬುದ್ದಿಮಾಂದ್ಯ ಬಾಲಕನ ಮೇಲೆ ಅಮಾನವೀಯ ಹಲ್ಲೆ

KannadaprabhaNewsNetwork |  
Published : Dec 21, 2025, 03:45 AM IST
ಬುದ್ಧಿಮಾಂದ್ಯ ಬಾಲಕನ ಮೇಲೆ ರಾಕ್ಷಸಿ ಕೃತ್ಯ - ಬಾಗಲಕೋಟೆಯ ನವನಗರದದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ   ಘಟನೆ | Kannada Prabha

ಸಾರಾಂಶ

ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಅಮಾನವೀಯ ಘಟನೆ ಬಾಗಲಕೋಟೆಯ ನವನಗರದ ದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ನಡೆದಿದೆ.ಈ ಕುರಿತು ನವನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶಿಕ್ಷಕ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಅಮಾನವೀಯ ಘಟನೆ ಬಾಗಲಕೋಟೆಯ ನವನಗರದ ದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ನಡೆದಿದೆ.ಈ ಕುರಿತು ನವನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶಿಕ್ಷಕ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮುಧೋಳ ತಾಲೂಕಿನ ಮಂಟೂರು ಗ್ರಾಮದ ಬುದ್ದಿಮಾಂದ್ಯ ಬಾಲಕ ದೀಪಕ್ ರಾಠೋಡ (16) ಹಲ್ಲೆಗೊಳಗಾದ ಯುವಕ. ಶಾಲೆಯ ಮುಖ್ಯಶಿಕ್ಷಕ ಅಕ್ಷಯ ಹಾಗೂ ಶಿಕ್ಷಕಿ ಮಾಲಿನಿ ಬೆಲ್ಟ್ ಮತ್ತು ಪ್ಲಾಸ್ಟಿಕ್ ಪೈಪ್‌ನಿಂದ ಮನಬಂದಂತೆ ಬುದ್ದಿಮಾಂದ್ಯ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ನೆಲಕ್ಕೆ ಬಿದ್ದು ಹೊರಳಾಡಿದರೂ ಬಿಡದೇ ಶಿಕ್ಷಕ ಅಕ್ಷಯ ಹಲ್ಲೆ ಮಾಡಿರುವ ವಿಡಿಯೋ ಲಭ್ಯವಾಗಿದೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ನವನಗರ ಪೋಲಿಸರ ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಹಲ್ಲೆ ಮಾಡಿರುವುದು ಅದೇ ಶಾಲೆಯ ಮುಖ್ಯಸ್ಥ ಅಕ್ಷಯ್ ಎಂದು ತಿಳಿದು ಬಂದಿದ್ದು ಆತನನ್ನು ವಿಚಾರಣೆಗೆ ನವನಗರ ಪೋಲಿಸರು ಕರೆದೊಯ್ದಿದ್ದಾರೆ. ಶಿಕ್ಷಕರ ವಿರುದ್ಧ ಪಾಲಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ವಶಕ್ಕೆ ಪಡೆದು ವಿಚಾರಣೆ: ಎಸ್ಪಿ ಗೋಯಲ್‌

ದಿವ್ಯ ಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲ ಹಲ್ಲೆ ನಡೆಸಿದ ಅಮಾನವೀಯ ಘಟನೆ ಕುರಿತು ಬಾಗಲಕೋಟೆಯಲ್ಲಿ ಎಸ್.ಪಿ. ಸಿದ್ದಾರ್ಥ ಗೋಯಲ್ ಸ್ಪಷ್ಟನೆ ನೀಡಿದ್ದು, ಈಗಾಗಲೇ ಅಕ್ಷಯ ಹಾಗೂ ಪತ್ನಿ ಆನಂದಿ ಉರ್ಫ ಮಾಲಿನಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಪತಿ-ಪತ್ನಿ ಸೇರಿ ಒಂದು ಎನ್‌ಜಿಒ ಮೂಲಕ ಶಾಲೆ ನಡೆಸುತ್ತಿದ್ದಾರೆ. ಅಕ್ಷಯ ಇಂದುಲ್ಕರ್ ಹಾಗೂ ಮಾಲಿನಿ ಉರ್ಫ ಆನಂದಿ ಹಾಗೂ ಅವರು 16 ವರ್ಷದ ಮಗ ಸೇರಿ ಹಲ್ಲೆ ಮಾಡಿದ್ದಾರೆ. ಈಗ ಹಲ್ಲೆಗೆ ಒಳಗಾದ ಮಕ್ಕಳ ಪೋಷಕರು ಕಂಪ್ಲೇಂಟ್ ಕೊಟ್ಟಿದ್ದಾರೆ. ಎಫ್.ಐ.ಆರ್ ರಜಿಸ್ಟರ್ ಮಾಡ್ತಿದ್ದೇವೆ. ಆರೋಪಿ ಪತಿ-ಪತ್ನಿಯನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

ಇದು ಮೂರು ತಿಂಗಳ ಹಿಂದೆ ಆಗಿರುವ ಘಟನೆಯ ವಿಡಿಯೋ ಕ್ಲಿಪ್. ಕೆಲಸ ಮಾಡುವ ಮಹಿಳೆ ವಿಡಿಯೋ ಮಾಡಿಕೊಂಡಿದ್ದು, ಪೋಷಕರಿಗೆ ವಿಡಿಯೋ ಈಗ ಸಿಕ್ಕಿದೆ. ಸಿಡಿಪಿಒ ಹಾಗೂ ಮಕ್ಕಳ ಹಕ್ಕು ರಕ್ಷಣಾ ಆಧಿಕಾರಿ ಸಹ ಬಂದಿದ್ದಾರೆ. ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ. ಇಂತಹ ಕೃತ್ಯದಿಂದ ನಾಗರಿಕ ಸಮಾಜ ತಲೆತಗ್ಗಿಸುವಬ ಕೆಲಸವಾಗಿದೆ ಎಂದು ವಿಷಾದಿಸಿದ್ದಾರೆ.

ಶಾಲಾಗೆ ಪರವಾನಿಗೆ ಪಡೆದುಕೊಂಡಿಲ್ಲ:

ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಡಿ 24-4-2025ರಂದು ಸಿದ್ಧಸಿರಿ ಶಿಕ್ಷಣ ಸಂಸ್ಥೆ ರೆಜಿಸ್ಟರ್ ಮಾಡಿದ್ದಾರೆ. ಡಿಸೇಬಲ್ ಆಕ್ಟ್ 2016ರ ಪ್ರಕಾರ ವಿಕಲಚೇತನ ಮಕ್ಕಳ ಜತೆಗೆ ಕೆಲಸ ಮಾಡುತ್ತೇವೆ ಎಂದು ರೆಜಿಸ್ಟರ್ ಆಗಿದೆ. ದಿವ್ಯಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಶಾಲೆ ನಡೆಸುತ್ತೇವೆ ಎಂದು ಪರವಾನಗಿ ಪಡೆದುಕೊಂಡಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಪ್ರಭಾಕರ ಹೇಳಿದ್ದಾರೆ. ಬುದ್ದಿಮಾಂದ್ಯ ಮಕ್ಕಳ ಶಾಲೆ ನಡೆಸಬೇಕಾದರೆ ಕಟ್ಟಡ ಸೇರಿ ಮೂಲ ಸೌಲಭ್ಯ ಬಗ್ಗೆ ವಿಕಲಚೇತನ ಅಧಿಕಾರಿಗಳು ವರದಿ ಕೊಟ್ಟ ಮೇಲೆ ಶಾಲೆ ಪರವಾನಗಿ ಸಿಗುತ್ತದೆ. ದಿವ್ಯ ಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿರುವ ಅವರು, ಬುದ್ದಿಮಾಂದ್ಯ ಮಗವಿನ ಮೇಲೆ ಈ ಸಂಸ್ಥೆ ನಡೆಸಿರುವ ಕ್ರೌರ್ಯ ಸಮಾಜಕ್ಕೆ ಒಂದು ಕೆಟ್ಟ ಸಂದೇಶವಾಗಿದೆ, ಅದನ್ನ ನೋಡಿದರೆ ಪ್ರತಿಯೊಬ್ಬರ ಮನಸ್ಸು ಮಿಡಿಯುತ್ತದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''