ಕನ್ನಡಪ್ರಭ ವಾರ್ತೆ ಮಂಡ್ಯ
ಮಹೇಶ್ ಗಣಿಗ ಎಂಬುವವರು (ಹಾಲಿವಾಸ ಬೆಂಗಳೂರು ಪೋನ್ ನಂಬರ್: ೯೦೦೮೦೪೧೬೯೯) ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ಮತ್ತು ಅವರ ಸಹೋದರರ ವಿರುದ್ಧ ಅವಹೇಳನಕಾರಿ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಇವರಿಗೆ ಚಪ್ಪಲಿಯಿಂದ ಹೊಡೆಯುತ್ತೇವೆ ಎಂದು ಸಹ ಪ್ರಾಣ ಬೆದರಿಕೆ ಹಾಕಿರುತ್ತಾನೆ. ಜೆಡಿಎಸ್ ಪಕ್ಷದ ಬಗ್ಗೆಯೂ ತುಚ್ಛವಾಗಿ ಮಾತನಾಡಿದ್ದಾರೆ. ಇದರಿಂದ ಪಕ್ಷದ ನಾಯಕರು ಮತ್ತು ಬಿ.ಆರ್.ರಾಮಚಂದ್ರ ಗೌರವಕ್ಕೆ ಧಕ್ಕೆ ಬರುವಂತೆ ತೇಜೋವಧೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಮಹೇಶ್ ಗಣಿಗ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ನಾಗೇಶ್, ಜೆಡಿಎಸ್ ಮುಖಂಡರಾದ ಬಿ.ಆರ್.ಸುರೇಶ್, ಮಹೇಶ್, ಭಾನು ಪ್ರಕಾಶ್, ಇತರರಿದ್ದರು.
ಜು.26ರಂದು ರಾಜ್ಯಮಟ್ಟದ ರಂಗೋಲಿ, ಗಾಳಿಪಟ ಸ್ಪರ್ಧೆಕನ್ನಡಪ್ರಭ ವಾರ್ತೆ ಮಂಡ್ಯಪಾಂಡವಪುರ ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಗ್ರಾಮದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ರಾಜ್ಯ ಮಟ್ಟದ ರಂಗೋಲಿ, ಗುಂಡು ಎತ್ತುವ ಮತ್ತು ಗಾಳಿಪಟ ಸ್ಪರ್ಧೆಯನ್ನು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿ ಆಯೋಜಿಸಲಾಗಿದೆ ಎಂದು ಗ್ರಾಮದ ಮುಖಂಡ ಸಂತೋಷ್ ಹೇಳಿದರು.
ಇನ್ನು ರಂಗೋಲಿ ಸ್ಪರ್ಧೆ ಗ್ರಾಮದ ಕಲ್ಯಾಣಮಂದಿರದಲ್ಲಿ ನಡೆಯಲಿದೆ. ರಾತ್ರಿ ರಾಜಸುಯೋಧನ ನಾಟಕವನ್ನು ಏರ್ಪಡಿಸಲಾಗಿದೆ. ಜೊತೆಗೆ ಜೀವಧಾರೆ ಟ್ರಸ್ಟ್ನಿಂದ ರಕ್ತದಾನ ಕಾರ್ಯಕ್ರಮವನ್ನು ಏರ್ಪಡಿಸಿರುವುದಾಗಿ ಹೇಳಿದರು.ಗೋಷ್ಠಿಯಲ್ಲಿ ಆನಂದ್, ಮನೋಜ್, ರಾಜು ಇದ್ದರು.