ಮುಂಡರಗಿ:ನಮ್ಮ ಭಾರತದ ಸಂವಿಧಾನದ ಅಡಿಯಲ್ಲಿ ಭಾರತ ಸರ್ಕಾರ ರೂಪಿಸಿರುವ ಕಾನೂನಿನ ನಿಯಮದ ಅಡಿಯಲ್ಲಿ ಇಲ್ಲದೇ ಇರುವಂತಹ ಜಾತಿಗಳ ಪಟ್ಟಿ ಮಾಡಿ ಆ ಮುಖಾಂತರ ಹಿಂದುಗಳು ಅಲ್ಲದೇ ಇರುವಂತಹ ಅನೇಕ ಜಾತಿ ಜನಾಂಗಗಳನ್ನು ಪ್ರತ್ಯೇಕಿಸುವಂತಹ ಹುನ್ನಾರವನ್ನು ರಾಜ್ಯ ಸರ್ಕಾರ ಹಿಂದುಳಿದ ಆಯೋಗ ಮೂಲಕ ಮಾಡಲು ಹೊರಟಿರುವುದು ಅತ್ಯಂತ ನೀಚ ಕೃತ್ಯವಾಗಿದ್ದು, ಅದನ್ನು ನಾವು ಖಂಡಿಸುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಯೋಗದ ಈ ಪಟ್ಟಿ ಜನರಲ್ಲಿ, ಅದರಲ್ಲೂ ವಿಶೇಷವಾಗಿ ಹಿಂದುಳಿದ ವರ್ಗಗಳಲ್ಲಿ ಸಂಶಯಕ್ಕೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ಇದನ್ನು ಹಿಂದು ಸಮಾಜದ ಜಾತಿಗಳೊಂದಿಗೆ ಅಂಟಿಸಲಾದ ಕ್ರೈಸ್ತ ಹಣೆಪಟ್ಟಿಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಹಿರಿಯರಾದ ಎಸ್.ಆರ್. ರಿತ್ತಿ ಮಾತನಾಡಿ, ಸರ್ಕಾರ ಎಲ್ಲ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂಬುದನ್ನು ಬಳಕೆ ಮಾಡಿರುವುದು ಮತಾಂತರಕ್ಕೆ ಪ್ರಚೋದನೆ ನೀಡುವಂತದ್ದಾಗಿದೆ ಎಂದು ಆರೋಪಿಸಿ, ಸರ್ಕಾರ ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುವಂತಹ ಕೆಲಸವನ್ನು ಮಾಡಬೇಕೇ ಹೊರತು ವಿಘಟನೆ ಮಾಡುವ ಕಾರ್ಯಕ್ಕೆ ಮುಂದಾಗಬಾರದು. ನಿಜವಾಗಿ ಆರ್ಥಿಕವಾಗಿ ಹಿಂದುಳಿದವರ ಗಣತಿ ಮಾತ್ರ ಆಗಬೇಕು ಎಂದರು.
ದೇವು ಹಡಪದ ಮನವಿ ಓದಿದರು. ಗ್ರೇಡ್ 2 ತಹಸೀಲ್ದಾರ್ ಕೆ. ರಾಧಾ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀನಿವಾಸ ಕಟ್ಟಿಮನಿ ಯಲ್ಲಪ್ಪ ಗಣಾಚಾರಿ, ಮಂಜುನಾಥ ಮುಧೋಳ, ಕುಮಾರಸ್ವಾಮಿ ಹಿರೇಮಠ, ನಾಗರಾಜ ಹೊಸಮನಿ, ರಮೇಶ ಹುಳಕಣ್ಣವರ, ಮುತ್ತು ಹಳ್ಳಿಕೇರಿ, ಜಿ.ಜ. ಕೊಳ್ಳಿಮಠ, ದೇವಪ್ಪ ಇಟಗಿ, ಅಶೋಕ ಹೀಗೆನಹಳ್ಳಿ, ಗುರುರಾಜ ಜೋಶಿ, ಮಹೇಶ ಜಂತ್ಲಿ, ಮಾರುತಿ ಭಜಂತ್ರಿ, ಪ್ರಶಾಂತ ಗೌಡ ಗುಡದಪ್ಪನವರ, ಅಶೋಕ ಚೂರಿ, ರವೀಂದ್ರಗೌಡ ಪಾಟೀಲ, ಸುಭಾಸ ಗುಡಿಮನಿ, ಭೀಮರಡ್ಡಿ ರಾಜೂರ, ಶ್ರೀನಿವಾಸ ಅಬ್ಬೀಗೇರಿ, ಸುರೇಶ ಬಂಡಿವಡ್ಡರ, ಗುಡದೀರಪ್ಪ ಲಿಂಬಿಕಾಯಿ, ವಿ.ಜೆ.ಹಿರೇಮಠ, ಪ್ರಶಾಂತ ಹಿರೇಮಠ, ಆರ್.ವೈ.ಪಾಟೀಲ, ಮಹೇಶ ದೇಸಾಯಿ, ಶಿವಕುಮಾರ ಕುರಿ, ಪವನ್ ಲೇಂಡ್ವೆ ಸೇರಿ ಅನೇಕರು ಉಪಸ್ಥಿತರಿದ್ದರು.