ಮುಂಡರಗಿ: ಜಾತ್ರೆ ಎಂದರೆ ಕೇವಲ ತೇರು ಎಳೆದು ಬೆಂಡು-ಬತ್ತಾಸು ತಿಂದು ಹೋಗುವುದಲ್ಲ. ಅನೇಕ ಪುಣ್ಯ ಪುರುಷರ ಜೀವನದ ಚರಿತ್ರೆಗಳನ್ನು ಕೇಳುವ ಮೂಲಕ ಜ್ಞಾನವೆಂಬ ಜಾತ್ರೆಯನ್ನು ಮಾಡಬೇಕು ಎಂದು ಬಳೂಟಗಿ ಶಿವಕುಮಾರ ದೇವರು ಹೇಳಿದರು.
ಪ್ರವಚನ ಕಾರ್ಯಕ್ರಮವನ್ನು ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಉದ್ಘಾಟಿಸಿದರು. ನೇತೃತ್ವ ವಹಿಸಿದ್ದ ಹೂವಿನಹಡಗಲಿ ಗವಿಮಠದ ಶಿವಶಾಂತವೀರ ಸ್ವಾಮೀಜಿ ಮಾತನಾಡಿ, ನಾಡಿನ ಮಠಾಧೀಶರದಲ್ಲಿ ಮುಂಡರಗಿ ಶ್ರೀಗಳು ಹಿರಿಯರಾಗಿದ್ದು, ತ್ರಿಕಾಲ ಲಿಂಗಪೂಜಾ ನಿಷ್ಠರಾಗಿದ್ದಾರೆ. ನಮ್ಮಂತಹ ಅನೇಕ ಸ್ವಾಮೀಜಿಯವರಿಗೆ ಮಾರ್ಗದರ್ಶನ ಮಾಡುವ ಮೂಲಕ ನಮ್ಮನ್ನೆಲ್ಲ ಪ್ರೋತ್ಸಾಹಿಸಿ ಬೆಳೆಸುತ್ತಿದ್ದಾರೆ. ಸಾಹಿತ್ಯ ರಚನೆ ಹಾಗೂ ಸಾಹಿತ್ಯ ಪ್ರಕಟಣೆಯಲ್ಲಿ ಮುಂಡರಗಿ ಶ್ರೀಗಳು ಮೇರು ಪರ್ವತವಾಗಿದ್ದಾರೆ. ಪ್ರತಿ ವರ್ಷ ಈ ಯಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದೇ ಒಂದು ಸೌಭಾಗ್ಯವಾಗಿದೆ ಎಂದರು.
ಶ್ರೀಮಠದ ಉತ್ತರಾಧಿಕಾರಿ ಜ. ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಚನ್ನಬಸವ ದೇವರು, ಶಿವಾನಂದ ದೇವರು, ಯಾತ್ರಾ ಕಮಿಟಿ ಅಧ್ಯಕ್ಷ ನಾಗೇಶ ಹುಬ್ಬಳ್ಳಿ, ಡಾ. ಬಿ.ಜಿ. ಜವಳಿ, ದೇವೀಂದ್ರಪ್ಪ ರಾಮೇನಹಳ್ಳಿ, ಎಂ.ಜಿ. ಗಚ್ಚಣ್ಣವರ, ಸಂತೋಷ ಹಿರೇಮಠ, ವೀರನಗೌಡ ಗುಡದಪ್ಪನವರ, ಎಂ.ಎಸ್. ಶಿವಶೆಟ್ಟರ, ಮಂಜುನಾಥ ಮುಧೋಳ, ಎ.ಎಂ. ಶಿವಶೆಟ್ಟರ, ಅಜ್ಜಪ್ಪ ಲಿಂಬಿಕಾಯಿ, ವೀರೇಶ ಸಜ್ಜನರ, ರವೀಂದ್ರಗೌಡ ಪಾಟೀಲ, ಕುಮಾರ ಬನ್ನಿಕೊಪ್ಪ, ಹಾಲಯ್ಯ ಹಿರೇಮಠ ಉಪಸ್ಥಿತರಿದ್ದರು. ಎಸ್.ಎಸ್. ಇನಾಮತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.