ಚಳ್ಳಕೆರೆ ತಾಲೂಕಿನಾದ್ಯಂತ ಮತ್ತೆ ಮಳೆ ಆರ್ಭಟ

KannadaprabhaNewsNetwork |  
Published : Aug 19, 2024, 12:52 AM IST
ಪೋಟೋ೧೮ಸಿಎಲ್‌ಕೆ೦೩ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕಾಲುವೇಹಳ್ಳಿ ಗ್ರಾಮದಲ್ಲಿ ಬಾಲಣ್ಣ ಎಂಬುವವರ ಮೂರು ಎಕರೆ ಮೆಕ್ಕೆಜೋಳ ನೀರಿನಿಂದ ಆವೃತ್ತವಾಗಿರುವುದು.  | Kannada Prabha

ಸಾರಾಂಶ

It is raining again across Challakere taluk

-ನನ್ನಿವಾಳ, ಕಾಲುವೇಹಳ್ಳಿ, ಹಿರೇಹಳ್ಳಿ ವ್ಯಾಪ್ತಿಯಲ್ಲಿ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿ, ಲಕ್ಷಾಂತರ ನಷ್ಟ.

---

ಕನ್ನಡಪ್ರಭವಾರ್ತೆ ಚಳ್ಳಕೆರೆತಾಲೂಕಿನಾದ್ಯಂತ ಶನಿವಾರ ರಾತ್ರಿ ಸುರಿದ ಮಳೆಗೆ ಕೆಲವು ಜಮೀನುಗಳಲ್ಲಿ ನೀರು ನುಗ್ಗಿ ಲಕ್ಷಾಂತರ ರುಪಾಯಿ ಬೆಳೆ ನಷ್ಟವಾಗಿದೆ. ಮಳೆಯಿಂದ ಗ್ರಾಮೀಣ ಭಾಗದ ಬಹುತೇಕ ಜಮೀನುಗಳಲ್ಲಿ ನೀರು ನುಗ್ಗಿ ಅಪಾರಹಾನಿ ಹಾಗೂ ನಷ್ಟವನ್ನು ಉಂಟುಮಾಡಿದೆ.

ತಾಲೂಕಿನ ತಳಕು ಕಾಲುವೇಹಳ್ಳಿಯಲ್ಲಿ ಬಾಲಣ್ಣ ಎಂಬವರಿಗೆ ಸೇರಿದ ರಿ ಸರ್ವೆ ನಂ. ೧೧/೨ರಲ್ಲಿ ಮೂರು ಎಕರೆ ಪ್ರದೇಶದಲ್ಲಿದ್ದ ಮೆಕ್ಕೆಜೋಳ ಬೆಳೆ ನೀರಿನಿಂದ ಆವೃತ್ತವಾಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ತಾಲೂಕಿನಲ್ಲಿ ಕಸಬಾ ಹೋಬಳಿಯ ನನ್ನಿವಾಳ ಗ್ರಾಮದ ಓಬಮ್ಮ ಎಂಬುವವರಿಗೆ ಸೇರಿದ ರಿ ಸರ್ವೆ, ನಂ. ೧೪೧/೪ರಲ್ಲಿದ್ದ ಎರಡು ಎಕರೆ ಈರುಳ್ಳಿ ಬೆಳೆ ನೀರಿನಿಂದ ಕೊಚ್ಚಿಹೋಗಿದೆ.

ಓಬಯ್ಯನಹಟ್ಟಿಯ ರಿ.ಸರ್ವೆ, ನಂ. ೨೬ ಮತ್ತು ೨೭ರಲ್ಲಿ ನಾಗಭೂಷಣ್ ಎಂಬುವವರಿಗೆ ಸೇರಿದ ಎರಡು ಎಕರೆ ಈರುಳ್ಳಿಬೆಳೆ ನೀರಿನಿಂದ ಆವೃತ್ತವಾಗಿ ೫೦ ಸಾವಿರ ನಷ್ಟ ಸಂಭವಿಸಿದೆ. ಇದೇ ಗ್ರಾಮದ ರಿ.ಸರ್ವೆ, ನಂ ೨೩/೩ರ ತಿಪ್ಪಮ್ಮ ಎಂಬವರಿಗೆ ಸೇರಿದ ಎರಡು ಎಕರೆ ಪ್ರದೇಶದ ಶೇಂಗಾ ಸಂಪೂರ್ಣ ಮಳೆಯ ನೀರಿಗೆ ಕೊಚ್ಚಿಹೋಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.

ತಾಲೂಕಿನ ಹಿರೇಹಳ್ಳಿ ಗ್ರಾಮದ ರಿ.ಸರ್ವೆ,ನಂ.೫೯ ಕೆಂಗಯ್ಯ ಎಂಬುವವರ ಒಂದು ಎಕರೆ ಪ್ರದೇಶದ ಈರುಳ್ಳಿ ಬೆಳೆ ನೀರಿನಲ್ಲಿ ಮುಳುಗಿದೆ. ಇದೇ ಗ್ರಾಮದ ಕೆಂಚಮ್ಮ ಎಂಬುವವರ ಒಂದು ಕೆರೆ ಪ್ರದೇಶದ ಈರುಳ್ಳಿ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ೫೦ ಸಾವಿರ ನಷ್ಟ ಸಂಭವಿಸಿದೆ. ಇದೇ ಗ್ರಾಮದ ಎಂ.ವಿ.ರುದ್ರಯ್ಯ ಎಂಬುವವರ ರಿ.ಸರ್ವೆ,ನಂ ೯೩ರ ಎರಡು ಎಕರೆ ಪ್ರದೇಶದ ಈರುಳ್ಳಿ ಬೆಳೆ ನೀರಿನಲ್ಲಿ ಮುಳುಗಿ ಲಕ್ಷಾಂತರ ರು. ನಷ್ಟವಾಗಿದೆ.

--

ಪೋಟೋ: ೧೮ಸಿಎಲ್‌ಕೆ೩

ಚಳ್ಳಕೆರೆ ತಾಲೂಕಿನ ಓಬಯ್ಯನಹಟ್ಟಿಯಲ್ಲಿ ಹಿರೇಕಾಯಿ ಬೆಳೆ ಗಾಳಿ, ಮಳೆಗೆ ಸಂಪೂರ್ಣ ನೆಲಕಚ್ಚಿರುವುದು.

---

ಪೋಟೋ:೧೮ಸಿಎಲ್‌ಕೆ೦೩

ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಕಾಲುವೇಹಳ್ಳಿ ಗ್ರಾಮದಲ್ಲಿ ಬಾಲಣ್ಣ ಎಂಬುವವರ ಮೂರು ಎಕರೆ ಮೆಕ್ಕೆಜೋಳ ನೀರಿನಿಂದ ಆವೃತ್ತವಾಗಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಮೋಟ್‌ ಕೇಸ್‌ ದಾಖಲಿಸಲು ಲೋಕಾಯುಕ್ತ ಸೂಚನೆ
ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರಕ್ಕೆ ಸಂಪುಟ ಅಸ್ತು