ಭಟ್ಕಳ ಗುರು ಸುಧೀಂದ್ರ ಕಾಲೇಜಿನಲ್ಲಿ ಬಿಎಸ್ಸಿ ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ ತರಗತಿಗೆ ಚಾಲನೆಕನ್ನಡಪ್ರಭ ವಾರ್ತೆ ಭಟ್ಕಳ
ನಂತರ ಮಾತನಾಡಿದ ಅವರು, ದೇಶದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಹೆಚ್ಚು ಹೆಚ್ಚು ಶಿಕ್ಷಿತರೇ ಬಲಿಯಾಗುತ್ತಿರುವುದು ಖೇದಕರ. ಹಿಂದಿನ ಅಪರಾಧಕ್ಕೂ ಇಂದಿನ ಅಪರಾಧಕ್ಕೂ ಬಹಳ ವ್ಯತ್ಯಾಸವಿದೆ. ಇಂದು ಫಿಂಗರ್ ಪ್ರಿಂಟ್ ತೆಗೆಯುವುದು, ಅಪರಾಧಿಗಳು ಬಿಟ್ಟು ಹೋದ ಕುರುಹುಗಳನ್ನು ಪತ್ತೆಹಚ್ಚುವುದು ಬಹಳ ಕಷ್ಟಕರವಾಗಿದೆ. ದೇಶದಲ್ಲಿಯೇ ಪೊಲೀಸ್ ಇಲಾಖೆ ಬಹಳ ಬದಲಾವಣೆಯಾಗುತ್ತಿದೆ. ಇಂದು ಒಂದು ಪ್ರಕರಣ ಸಂಭವಿಸಿದರೆ ಅದನ್ನು ಅನೇಕ ರೀತಿಯ ತಾಂತ್ರಿಕ ವಿಚಾರಗಳಿಂದ ತನಿಖೆ ಮಾಡಬೇಕಾಗುತ್ತದೆ. ಕೇವಲ ತನಿಖೆ ಮಾಡುವುದಷ್ಟೇ ಅಲ್ಲ, ತನಿಖೆ ಮಾಡಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯದಲ್ಲಿ ಅಪರಾಧಿಗೆ ಶಿಕ್ಷೆಯಾಗುವುದು ಮುಖ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಸಾಕ್ಷಿ ಸಂಗ್ರಹ ಮಾಡುವುದೂ ಕೂಡಾ ಕಷ್ಟಕರವಾಗಿದೆ. ಅಪರಾಧಿಗಳೂ ಕೂಡಾ ಬೇರೆ ಬೇರೆ ವಿಧಾನಗಳನ್ನು ಬಳಸುತ್ತಾರೆ ಎಂದರು.
ಫೋರೆನ್ಸಿಕ್ ಸೈನ್ಸ್ನಲ್ಲಿ ಇಂದು ಬಹಳಷ್ಟು ಬದಲಾವಣೆಗಳಾಗಿವೆ. ಯಾವುದೇ ಒಂದು ವಸ್ತು ದೊರೆತರೆ ಅದರ ಸಂಪೂರ್ಣ ಮಾಹಿತಿ ಕಲೆ ಹಾಕಬಹುದು, ಒಂದು ಅಕ್ಷರ, ಸಹಿ, ಪತ್ರ ಇದ್ದರೆ ಅವುಗಳ ಕಾಲ ಕೂಡಾ ಹೇಳಬಹುದು ಎಂದರು.ಇಂದಿನ ಎಐ ಯುಗದಲ್ಲಿ ಯಾವುದು ಸತ್ಯವಾದದ್ದು, ಯಾವುದು ಕೃತಕ ಎನ್ನುವುದನ್ನು ಕಂಡು ಹಿಡಿಯುವುದೇ ಕಷ್ಟಕರವಾಗಿದೆ ಎಂದ ಅವರು ವಿಜ್ಞಾನ ಮುಂದುವರಿದಿದೆ. ಯಾವುದೇ ಕಂಪ್ಯೂಟರ್ಗೆ ಮನುಷ್ಯನ ಮೆದುಳು ಸಾಟಿಯಲ್ಲ, ಕಂಪ್ಯೂಟರ್ಗಿಂತ ಹಲವು ಪಟ್ಟು ಮೆದುಳು ಚುರುಕು ಎಂದರು.
ಎಸ್.ಜಿ.ಎಸ್. ಸಪ್ತಸ್ವರ ತಂಡ ಪ್ರಾರ್ಥನೆ ಹಾಡಿದರು. ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಮೆನೇಜಿಂಗ್ ಟ್ರಸ್ಟಿ ರಾಜೇಶ ನಾಯಕ ಸ್ವಾಗತಿಸಿದರು. ಉಪಾಧ್ಯಕ್ಷ ರವೀಂದ್ರ ಕೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿರಿಯ ಪಿಂಟೋ ಹಾಗೂ ದೇವೆಂದ್ರ ಕಿಣಿ ನಿರ್ವಹಿಸಿದರು. ಪ್ರಾಂಶುಪಾಲ ಶ್ರೀನಾಥ ಪೈ ವಂದಿಸಿದರು.