ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.98ರಷ್ಟು ಮುಸ್ಲಿಂ ಮುತುವಲ್ಲಿಗಳ ಮಧ್ಯೆ ಈ ವ್ಯಾಜ್ಯ ಇದೆ. ಇದಕ್ಕೂ ಹಿಂದೂಗಳಿಗೂ ಯಾವುದೇ ಸಂಬಂಧವಿಲ್ಲ. ವಿಜಯಪುರಕ್ಕೆ ಮುಸ್ಲಿಂ ಮಂತ್ರಿ ಬಂದಿದ್ದಾರೆ ಎಂದು ಯತ್ನಾಳ ಅವರಿಗೆ ಹೊಟ್ಟೆ ಉರಿಯುತ್ತಿದೆ. ಹೀಗಾಗಿ ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಮನಸಿಗೆ ಬಂದಂತೆ ರೈತರ ಭೂಮಿಯನ್ನು ವಕ್ಫ್ಗೆ ತೆಗೆದುಕೊಳ್ಳಲು ಬರುವುದಿಲ್ಲ, ಆ ಹಕ್ಕು ಯಾರಿಗೂ ಇಲ್ಲ. ಹಾಗೇನಾದರೂ ತೆಗೆದುಕೊಂಡರೆ ನಾವೇ ರೈತರ ಜೊತೆ ಹೋಗಿ ನಿಲ್ಲುತ್ತೇವೆ. ಯತ್ನಾಳ ಅವರು ರೈತರ ಜಮೀನು ಕಸಿದುಕೊಳ್ಳುತ್ತಿದ್ದಾರೆ ಎಂದು ಜನರನ್ನು ಒಕ್ಕಲೆಬ್ಬಿಸಿ ಒಣ ರಾಜಕೀಯ ಮಾಡುತ್ತಿದ್ದಾರೆ. ಚುನಾವಣೆ ಇನ್ನೂ ಎರಡೂವರೇ ವರ್ಷ ಇರುವಾಗಲೇ ಇವರು ಓಟಿಂಗ್ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಅಪ್ಪಟ ಹಿಂದೂವಾದಿಯಂತೆ ಮಾತನಾಡುವ ಶಾಸಕ ಯತ್ನಾಳ ಈ ಹಿಂದೆ ಈದ್ ಮಿಲಾದ್ ಕಾರ್ಯಕ್ರಮದಲ್ಲಿ, ಟಿಪ್ಪುಸುಲ್ತಾನ್ ಜಯಂತಿಯಲ್ಲಿ, ಬಕ್ರೀದ್ ಹಾಗೂ ರಂಜಾನ್ ಹಬ್ಬಗಳಲ್ಲಿ ಮುಸ್ಲಿಂ ಟೋಪಿ ಹಾಕಿಕೊಂಡು ಪಾಲ್ಗೊಂಡಿರುವ ಪೋಟೊಗಳನ್ನು ಬಿಡುಗಡೆ ಮಾಡಿದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರಿಗೆ ಅವಹೇಳನಕಾರಿಯಾಗಿ ಮಾತನಾಡುತ್ತಾನೆ. ಅವರ ಬಗ್ಗೆ ಮಾತನಾಡಲು ಇವ ಯಾರು ಎಂದು ಯತ್ನಾಳ ಮೇಲೆ ಹರಿಹಾಯ್ದರು.
ಯತ್ನಾಳ ಅವರು ಬ್ರಿಟಿಷರಂತೆ ಹಿಂದೂ ಮುಸ್ಲಿಮರನ್ನು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಇದಕ್ಕೆ ಹಿಂದೂಗಳು ಕಿವಿಗೊಡಬಾರದು. ಎಲ್ಲರೂ ಒಗ್ಗಟ್ಟಾಗಿ ಅವರ ಕುತಂತ್ರ ಅರಿಯಬೇಕು. ಹಿಂದುತ್ವ ಹಿಂದುತ್ವ ಎನ್ನುವ ನೀವು ನಿಮ್ಮ ಮನೆಗೆ ದಲಿತರ ಸಂಬಂಧ ಬೆಳೆಸಿ ನೊಡೋಣ ಎಂದು ಸವಾಲು ಹಾಕಿದರು. ಜಗತ್ತು ಹುಟ್ಟಿದಾಗಿನಿಂದಲೇ ಇಸ್ಲಾಂ ಧರ್ಮವಿದೆ. ಮೊದಲು ಸರಿಯಾಗಿ ಓದು ಎಂದು ಚಕ್ರವರ್ತಿ ಸೂಲಿಬೆಲೆಗೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾದೇವ ರವಜಿ, ಫಯಾಜ್ ಕಲಾದಗಿ, ಆನಂದ ಜಾಧವ್, ಮಹಾದೇವಿ ಗೋಕಾಕ, ಸಂತೋಷ ಪವಾರ, ಭಾರತಿ ಹೊಸಮನಿ, ಕಾಶೀಬಾಯಿ ಹಡಪದ, ಪರಶುರಾಮ ಹೊಸಮನಿ, ಮಂಜುನಾಥ ನಿಡೋಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.----------