ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬಸವೇಶ್ವರರು ಹಿಂದಿನ ಗೊಡ್ಡುತನಗಳಿಗೆ ತಿಲಾಂಜಲಿ ನೀಡಲು ಮತ್ತು ಮನುಷ್ಯರ ನಡುವಿನ, ಸ್ತ್ರೀ-ಪುರುಷ ಬೇಧಭಾವಗಳ ಖಂಡಿಸಿ ಅಂತರಂಗ ಮತ್ತು ಬಹಿರಂಗ ಜೀವನ ಕ್ರಮ ಒಂದೇ ಆಗಿರಬೇಕೆಂದು ಸರಳವಾಗಿ ಬದುಕಿ ತೋರಿದ ಮಹಾನ್ ಮಾನವತಾವಾದಿ. ಕ್ಷುಲ್ಲಕತೆಗೆ ಇಂಬು ಕೊಡದೇ ವಿಶಾಲವಾಗಿ ಯೋಚಿಸಿ, ಸಣ್ಣತನಗಳ ಮೆಟ್ಟಿ ನಿಂತು ವೈಭೋಗದ ಬದುಕು ಧಿಕ್ಕರಿಸಿ ಕಾಯಕಕ್ಕೆ ಆದ್ಯತೆ ನೀಡಿದ ಮೊದಲ ಅರ್ಥಶಾಸ್ತ್ರಜ್ಞ ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ಬಸವಣ್ಣ ಸುಮಾರು ಒಂಭತ್ತು ಶತಮಾನಗಳ ಹಿಂದೆಯೇ ಬಲಾಢ್ಯವಾಗಿದ್ದ ಮೌಢ್ಯಗಳನ್ನು ಧಿಕ್ಕರಿಸಿ ವಿಶ್ವದ ಮನುಕುಲಕ್ಕೆ ಸಮಾನತೆ ಬೋಧಿಸಿದ ಮಹಾನ್ ಚೇತನವಾಗಿದ್ದರು. ದುಡಿಮೆಗೆ ಆದ್ಯತೆ ನೀಡುವ ಮೂಲಕ ಆರ್ಥಿಕತೆ ಹೆಚ್ಚಿಸಲು ಮತ್ತು ದಾಸೋಹಕ್ಕೆ ಪ್ರಾಶಸ್ತ್ಯ ನೀಡಿ ಆರ್ಥಿಕವಾಗಿಯೂ ಸಮಾನತೆ ತರುವಲ್ಲಿ ಶ್ರಮಿಸಿದರು. ಜಾತಿಗಳ, ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿ ಮನುಕುಲ ಒಂದೇ ಎಂದು ಸಾರಿದರು ಎಂದರು.ಧುರೀಣರಾದ ಸಂಜಯ ತೆಗ್ಗಿ, ಮಹಾದೇವ ದುಪದಾಳ, ಮಹಾದೇವ ಕೋಟ್ಯಾಳ, ಬಸವರಾಜ ತೆಗ್ಗಿ, ರಾಮಣ್ಣಾ ಹುಲಕುಂದ, ಮಲ್ಲಣ್ಣ ಕುಚನೂರ, ಸೋಮಶೇಖರ ಕೊಟ್ರಶೆಟ್ಟಿ, ಚಿದಾನಂದ ಸೊಲ್ಲಾಪುರ, ನೀಲಕಂಠ ಮುತ್ತೂರ, ಗುರುಪಾದಯ್ಯಾ ಅಮ್ಮಣಗಿಮಠ, ಈರಣ್ಣ ಗುಣಕಿ, ಸಂಜಯ ತೇಲಿ, ರವಿ ಗಡಾದ, ಸುಭಾಷ್ ಮಧುರಖಂಡಿ, ಬಸವರಾಜ ಅಮ್ಮಣಗಿಮಠ, ಬಾಬು ಕೆಳಗಿನಮನಿ, ಆನಂದ ಜುಗಳಿ, ವಿಜಯಕುಮಾರ ಹಲಕುರ್ಕಿ ಮೊದಲಾದವರು ಮೆರವಣಿಗೆಯಲ್ಲಿದ್ದರು