ಮನೆ,ಮನೆಗೆ ಕುಡಿಯುವ ನೀರು । ಕಾಮಗಾರಿ ವೈಜ್ಞಾನಿಕವಾಗಿಲ್ಲ: ಗ್ರಾಮೀಣರ ಆರೋಪ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹ ಭಾಗಿತ್ವದಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆ ನಿರೀಕ್ಷೆಯಂತೆ ಗ್ರಾಮೀಣ ಭಾಗದ ಜನರಿಗೆ ತಲುಪುತ್ತಿಲ್ಲ ಎಂಬುದು ಗ್ರಾಮೀಣ ಭಾಗದ ಜನರ ಆರೋಪವಾಗಿದೆ.ನರಸಿಂಹರಾಜಪುರ ತಾಲೂಕಿನ ಒಟ್ಟು 14 ಗ್ರಾಮ ಪಂಚಾಯಿತಿಯ 58 ಹಳ್ಳಿಗಳ 13,079 ಮನೆಗಳಿಗೆ ನೀರು ನೀಡುವ ಯೋಜನೆಗೆ ಸೂಕ್ತವಾಗಿ ಅನುಷ್ಠಾನವಾಗದೆ ಇದುವರೆಗೆ 11,323 ಮನೆಗಳಿಗೆ ಮಾತ್ರ ನೀರಿನ ಸೌಲಭ್ಯ ಕಲ್ಪಿಸಲಾಗಿದ್ದು 1756 ಮನೆಗಳಿಗೆ ಇನ್ನೂ ನೀರು ಪೂರೈಸಿಲ್ಲ.
ವೈಜ್ಞಾನಿಕ ಕಾಮಗಾರಿ ಆಗಿಲ್ಲ
ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಪ್ ಲೈನ್, ಓವರ್ ಹೆಡ್ ಟ್ಯಾಂಕ್ ಆಗಿದೆ. ಆದರೆ, ಸಂಬಂಧಪಟ್ಟ ಬೋರ್ ವೆಲ್ ಗಳಲ್ಲಿ ನೀರಿಲ್ಲ. ಇದರಿಂದ ಆ ವ್ಯಾಪ್ತಿಯ ಮನೆಗಳ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪೈಪ್ ಲೈನ್, ಓವರ್ ಹೆಡ್ ಟ್ಯಾಂಕ್ ಆದ ಕೂಡಲೇ ಸಂಬಂಧಪಟ್ಟ ಗುತ್ತಿಗೆದಾರರು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದಾರೆ. ಈಗ ಗ್ರಾಮ ಪಂಚಾಯಿತಿಯವರೇ ಬೋರ್ ವೆಲ್ ತೆಗೆಸಿ ನೀರು ನೀಡಬೇಕಾಗಿದೆ. ಆದರೆ, ಹೊಸ ಬೋರ್ ವೆಲ್ ಗಳಲ್ಲೂ ನೀರು ಬರುತ್ತಿಲ್ಲ ಎಂಬುದು ಗ್ರಾಮ ಪಂಚಾಯಿತಿ ಆರೋಪವಾಗಿದೆ.
ಸರ್ಕಾರಗಳು ಗ್ರಾಮೀಣ ಭಾಗದ ಜನರಿಗೆ ಹಲವಾರು ಯೋಜನೆ ರೂಪಿಸಿ ಕೋಟ್ಯಂತರ ರು. ಖರ್ಚು ಮಾಡುತ್ತಿದೆ. ಆದರೆ, ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಚಿಂತನೆ, ಒಳ್ಳೆಯ ಉದ್ದೇಶವನ್ನು ಟೆಂಡರ್ ಹಿಡಿಯುವ ಗುತ್ತಿಗೆ ದಾರರು, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಒಂದು ತಂಡದಂತೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇಂತಹ ದೊಡ್ಡ ಯೋಜನೆಗಳು ಯಶಸ್ಸು ಕಾಣುತ್ತದೆ.
ಸೀತೂರು ಗ್ರಾಪಂನ ಹೆಮ್ಮೂರು, ಬೆಮ್ಮನೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪೈಪ್ ಲೈನ್, ಟ್ಯಾಂಕ್ ಇದೆ. ಆದರೆ, ಬೋರ್ ವೆಲ್ ನಲ್ಲಿ ನೀರಿಲ್ಲ. ಉಳಿದ ಭಾಗದಲ್ಲಿ ಮನೆ, ಮನೆಗಳಿಗೆ ನೀರು ನೀಡಲಾಗುತ್ತಿದೆ. ಬೇಸಿಗೆ ಬರುತ್ತಿರು ವುದರಿಂದ ನೀರಿನ ಸಮಸ್ಯೆ ಎದುರಾಗುತ್ತಿದ್ದು ಆದಷ್ಟು ಬೇಗ ಕ್ರಮವಹಿಸಲು ಮನವಿ ನೀಡಲಾಗಿದೆ.
-- ಕೋಟ್ --
ಸುನೀಲ್ ಕುಮಾರ್, ಉಪಾಧ್ಯಕ್ಷ, ಕಡಹಿನಬೈಲು ಗ್ರಾಪಂ
-- ಕೋಟ್--ಕಾನೂರು ಗ್ರಾಮ ಪಂಚಾಯಿತಿಯ ಜೋಗಿಮಕ್ಕಿಯಲ್ಲಿ ವಿದ್ಯುತ್ ಸಂಪರ್ಕ ಮಾಡಿಲ್ಲ.ಕೆರೆಮನೆ ಭಾಗದಲ್ಲಿ ಓವರ್ ಹೆಡ ಟ್ಯಾಂಕ್ ಮಾಡಿಲ್ಲ. ಗದ್ದೆ ಮನೆ ಭಾಗದಲ್ಲಿ ಬೋರ್ ವೆಲ್ ಫೇಲ್ ಆಗಿದೆ. ನಲ್ಲಿಗಳ ಫಿಟ್ಟಿಂಗ್ ಸರಿಯಾಗಿಲ್ಲ. ತಟ್ಟೆಸರ ಭಾಗದಲ್ಲಿ ಕಲೆಕ್ಷನ್ ನೀಡಿಲ್ಲ. ಇಲ್ಲಿ ಗುಣಮಟ್ಟದ ಕಾಮಗಾರಿ ಮಾಡಿಲ್ಲ.
ರತ್ನಾಕರ್, ಅಧ್ಯಕ್ಷರು, ಕಾನೂರು ಗ್ರಾಮ ಪಂಚಾಯಿತಿ