ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಡಾ.ಅನ್ನದಾನಿ ಅವರು 4 ಸಾವಿರ ಕೋಟಿ ರು. ಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆಂದು ಜೆಡಿಎಸ್ ಮುಖಂಡರು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಂದಿದ್ದ ಯೋಜನೆಗಳನ್ನು ಅಂತಿಮಗೊಳಿಸಲು ಸಾಧ್ಯವಾಗದವರು ತಾವು ತಂದಿರುವ ಸಾವಿರಾರು ಕೋಟಿ ರು. ಹಣದ ಯೋಜನೆಯ ಸಾಕ್ಷಿ ಗುಡ್ಡೆಗಳು ಕಣ್ಣಿಗೆ ಕಾಣುತ್ತಿಲ್ಲ ಎಂದು ಟೀಕಿಸಿದರು.ಟಿಎಪಿಸಿಎಂಎಸ್ ನಿರ್ದೇಶಕ ಲಿಂಗರಾಜು ಮಾತನಾಡಿ, ಭೂ ಅಕ್ರಮದ ವಿಚಾರದಲ್ಲಿ ಭೂಮಿ ವಾಪಸ್ ಪಡೆವ ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವುದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ಆಶಯವಾಗಿದೆ. ಜೆಡಿಎಸ್ ಮುಖಂಡರು ತಪ್ಪುಗಳನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಸುದ್ದಿಗೋಷ್ಠಿ ನಡೆಸಿ ಸುಳ್ಳು ದಾಖಲೆಗಳನ್ನು ಮುಂದಿಟ್ಟಿಕೊಂಡು ಮಾತನಾಡಿದ್ದಾರೆ ಎಂದು ದೂರಿದರು.
ಪುರಸಭೆ ಮಾಜಿ ಸದಸ್ಯ ಕಿರಣ್ಶಂಕರ್ ಮಾತನಾಡಿ, ಬಸವ, ಕನಕ, ಸೇರಿದಂತೆ ಇತರೆ ಭವನಗಳ ನಿರ್ಮಾಣಕ್ಕೆ ಅಂದಾಜು ವೆಚ್ಚ ತಯಾರಿಸಿ ಸರ್ಕಾರದಿಂದ ಅನುದಾನ ತಂದು ಕಾಮಗಾರಿ ಆರಂಭಿಸುವ ಬದಲು ಸಮುದಾಯದ ಒಲೈಕೆಗಾಗಿ ಸರ್ಕಾರ ಕೊಟ್ಟ ಸ್ವಲ್ಪ ಅನುದಾನದಲ್ಲಿ ಕಾಮಗಾರಿ ಅರಂಭಿಸಿ ಪ್ರಯೋಜನಕ್ಕೆ ಬಾರದ ಸ್ಥಿತಿಗೆ ಮಾಜಿ ಶಾಸಕರು ತಲುಪಿಸಿದ್ದಾರೆ. ಭವನಗಳ ಅವ್ಯವಸ್ಥೆಗೆ ಮಾಜಿ ಶಾಸಕರೇ ಕಾರಣರಾಗಿದ್ದಾರೆಂದು ದೂರಿದರು.
ಪಿಎಲ್ಡಿ ಬ್ಯಾಂಕ್ ನಿರ್ದೇಶಕ ವಿಶ್ವ ಮಾತನಾಡಿ, ಗ್ರಾಪಂನಲ್ಲಿ ಸೋತ ವ್ಯಕ್ತಿಯನ್ನು ಜಿಪಂ ಚುನಾವಣೆಯಲ್ಲಿ ಗೆಲ್ಲಿಸಿ ನಾಯಕತ್ವ ಕೊಡಿಸಿರುವುದನ್ನು ಮರೆತು ನರೇಂದ್ರಸ್ವಾಮಿ ಅವರು ದರ್ಪ ದೌರ್ಜನ್ಯ ಮಾಡುತ್ತಾರೆ ಎಂದು ದೂರಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.