ಯುವಜನತೆಗೆ ಉದ್ಯೋಗ ಆವಿಷ್ಕಾರ, ಕೌಶಲ್ಯ ತರಬೇತಿಗೆ ಅಣಿ

KannadaprabhaNewsNetwork |  
Published : Sep 18, 2026, 03:15 AM IST
17ಕೆಪಿಆರ್‌ಸಿಆರ್‌ 02: ಡಾ.ಅಜಯ್‌ ಧರ್ಮಸಿಂಗ್, ಎನ್‌.ಎಸ್‌.ಭೋಸರಾಜು | Kannada Prabha

ಸಾರಾಂಶ

ರಾಜ್ಯದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರನ್ನು ಹೊಂದಿರುವ ಜಿಲ್ಲೆಗಳಲ್ಲಿ ರಾಯಚೂರು ಮೊದಲನೆಯದ್ದಾಗಿದ್ದು, ಇಂತಹ ಯುವಜನತೆಗೆ ಉದ್ಯೋಗ ಆವಿಷ್ಕಾರ, ಕೌಶಲ್ಯ ತರಬೇತಿ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರಂ ಸಿಂಗ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರನ್ನು ಹೊಂದಿರುವ ಜಿಲ್ಲೆಗಳಲ್ಲಿ ರಾಯಚೂರು ಮೊದಲನೆಯದ್ದಾಗಿದ್ದು, ಇಂತಹ ಯುವಜನತೆಗೆ ಉದ್ಯೋಗ ಆವಿಷ್ಕಾರ, ಕೌಶಲ್ಯ ತರಬೇತಿ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರಂ ಸಿಂಗ್ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಪ್ರಕಾರ ರಾಯಚೂರು ಜಿಲ್ಲೆಯಲ್ಲಿ ಶೇ.27.8ರಷ್ಟು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಜನರಿದ್ದಾರೆ. ಈ ಯುವಜನತೆಗಾಗಿ ಉದ್ಯೋಗ ಆವಿಷ್ಕಾರ ಮತ್ತು ಕಲಿಕ ಜೊತೆ ಕೌಶಲ್ಯ ಕಾರ್ಯಕ್ರಮಗಳಡಿ ಸುಮಾರು 25,000 ಯುವಕರಿಗೆ ಹಾಗೂ ಸಿಡಾಕ್ ಮೂಲಕ 1,000 ಜನರಿಗೆ ವೃತ್ತಿಪರ ಕೌಶಲ್ಯ ತರಬೇತಿ ನೀಡಲಾಗುವುದು ಎಂದರು.

ಸರ್ಕಾರವು ಮೇ 23ರವರೆಗೆ ಜೋಳ ಖರೀದಿಗೆ ಈಗಾಗಲೇ 358 ಕೋಟಿ ರು. ಪಾವತಿಸಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ 1,000 ಕೋಟಿ ಬಾಕಿ ಅನುದಾನ ಬಿಡುಗಡೆಯಾಗದಿರುವುದರಿಂದ ಇಡೀ ರಾಜ್ಯ ಮಟ್ಟದಲ್ಲಿ ₹109 ಕೋಟಿ ಪಾವತಿ ಬಾಕಿಯಾಗಿದೆ. ಆಹಾರ ಸಚಿವರು ದೆಹಲಿಗೆ ತೆರಳಿ ಕೇಂದ್ರ ದೊಂದಿಗೆ ಮಾತುಕತೆ ನಡೆಸುತ್ತಿದ್ದು, ರಾಜ್ಯ ಸರ್ಕಾರದಿಂದಲೂ ರೈತರ ಬಾಕಿ ಹಣವನ್ನು ಶೀಘ್ರ ಪಾವತಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಏಮ್ಸ್‌ ಮಂಜೂರು ವಿಚಾರದಲ್ಲಿಯೂ ಶೀಘ್ರದಲ್ಲಿಯೇ ಕೇಂದ್ರಕ್ಕೆ ನಿಯೋಗವನ್ನು ಕರೆದುಕೊಂಡು ಹೋಗಿ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.

ಅಕ್ರಮ ನೀರಾವರಿ ಕಡಿವಾಣಕ್ಕೆ ವಿಶೇಷ ಮಸೂದೆ: ಭೋಸರಾಜು

ರಾಯಚೂರು: ತುಂಗಭದ್ರ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ನೀರಾವರಿಗೆ ಕಡಿವಾಣ ಹಾಕಲು ಮಸೂದೆಯನ್ನು ರೂಪಿಸಿದ್ದು, ಶೀಘ್ರ ದಲ್ಲಿಯೇ ಅದನ್ನು ಜಾರಿಗೊಳಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಹಾಲಿ ಎಂಎಲ್ಸಿ ಎನ್‌.ಎಸ್‌.ಭೋಸರಾಜು ತಿಳಿಸಿದರು.

ಕೊನೆಭಾಗದ ರೈತರಿಗೆ ನಿರೋಧಗಿಸಲು ನಿರಂತರ ಮುನ್ನಚ್ಚರಿಕೆ ಕ್ರಮವಹಿಸುತ್ತಿದ್ದರೂ ಸಹ ಅಕ್ರಮ ನೀರಾವರಿಯಿಂದಾಗಿ ಯಾವುದೇ ಪ್ರಯೋಜನವಾಗುತ್ತಿಲ್ಲ, ಟಿಎಲ್‌ಬಿಸಿ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶವನ್ನು ಅಕ್ರಮ ನೀರಾವರಿ ಮಾಡಿಕೊಂಡು ಬಲಭಾಗಕ್ಕೂ ವಿಸ್ತರಿಸಲಾಗಿದೆ, ಅನಧಿಕೃತವಾಗಿ ಕೆರೆಗಳ ನಿರ್ಮಾಣ, ಪೈಪ್‌ಲೈನ್‌, ಪಂಪ್‌ಸೆಟ್‌ಗಳ ಮುಖಾಂತರ ಲಕ್ಷಾಂತರ ಎಕರೆಯಲ್ಲಿ ಅಕ್ರಮ ನೀರಾವರಿ ಪ್ರದೇಶವನ್ನಾಗಿಸಲಾಗಿದೆ ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಅಕ್ರಮ ತಡೆಯುವ ಮಸೂದೆಯನ್ನು ರೂಪಿಸಿ ಜಾರಿಗೊಳಿಸುವುದರ ಕುರಿತು ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಮಾಡಲಾಗಿದ್ದು, ಅಕ್ರಮ ನೀರಾವರಿಯಿಂದ ನೀರು ಸಮರ್ಪಕ ತಲುಪಿಸಲು ಸಾಧ್ಯವಾಗದಕ್ಕೆ ವಿಶೇಷ ಕಾಯ್ದೆ ರೂಪಿಸಿ ತಡೆಯಲು ಸಿಎಂಗೆ ಮನವಿ ಮಾಡಲಾಗಿದೆ ಎಂದದು ಹೇಳಿದರು.

ಟಿಎಲ್‌ಬಿಸಿಗೆ ನಿಗದಿತ ಗೇಜ್ ನಿರ್ವಹಣೆ ಮಾಡಲು ಕೊಪ್ಪಳ ಮತ್ತು ರಾಯಚೂರು ಜಿಲ್ಲಾಧಿಕಾರಿಗಳು ಗಮನಹರಿಸುತ್ತಿದ್ದು ಗೇಜ್ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಾದೇಶಿಕ ಆಯುಕ್ತ ಅಧ್ಯಕ್ಷತೆಯಲ್ಲಿ ನೀರು ನಿರ್ವಹಣೆ ಮೇಲುಸ್ತುವಾರಿ ಮಾಡಲಾಗುತ್ತಿದೆ. ಕಾಲುವೆಯಲ್ಲಿ ನೀರು ಹರಿಯದೇ ವರ್ಷಗಳೇ ಉರು ಳಿದ್ದರಿಂದ ಹರಿಸಿದ ನೀರು ಇಂಗಿ ಹೋಗುತ್ತಿದೆ. ಐದು ಎಕರೆಗೆ ತಲುಪಬೇಕಾದ ನೀರು ಒಂದು ಎಕರೆ ಮಾತ್ರ ಬಳಕೆಯಾಗುತ್ತಿದೆ .ಕಾಲುವೆಯಲಿ ಪೂರ್ಣ ಪ್ರಮಾಣದ ನೀರು ಹರಿಸಿದರೆ ಅನೇಕ ಕಡೆ ಪ್ರತಿಭಟನೆಗಳು ನಡೆದಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಶಿಕ್ಷಣವೇ ಅಡಿಪಾಯ: ಶಾಸಕ ತುರ್ವಿಹಾಳ ಅಭಿಮತ
ಕಲ್ಯಾಣ ಭಾಗದ ಸರ್ವತೋಮುಖ ಅಭಿವೃದ್ಧಿ ಬದ್ಧ: ಸಚಿವ ಡಾ.ಅಜಯ್ ಧರಂ ಸಿಂಗ್‌