ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಮೂಡುಗೂರು ಶ್ರೀ ಉದ್ದಾನೇಶ್ವರ ವಿರಕ್ತ ಮಠ ಟ್ರಸ್ಟ್ ಆಯೋಜಿಸಿದ್ದ ಮರ ಬೆಳಸಿ ಧರೆ ಉಳಿಸಿ ಅಭಿಯಾನದ ಪ್ರಥಮ ಚರಣದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪರಿಸರ, ಪ್ರಕೃತಿ ಉಳಿಸುವುದಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.
ಮೂಡುಗೂರು ಶ್ರೀಗಳು ಜಾಗತಿಕ ತಾಪಮಾನ ತಡೆಯುವ ಸದುದ್ದೇಶದಿಂದ ಪಡಗೂರು, ಕಬ್ಬಹಳ್ಳಿ ಮಠದ ಶ್ರೀಗಳು ಸ್ಥಳೀಯರ ಸಹಕಾರದೊಂದಿಗೆ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ. ಈ ಅಭಿಯಾನಕ್ಕೆ ಯಶಸ್ಸು ಸಿಗಲಿ ಎಂದು ಆಶಿಸಿದರು. ಸಸಿ ನೆಟ್ಟು ಬೆಳೆಸುವ ಮೂಲಕ ಪರಿಸರ, ಅರಣ್ಯದ ಜೊತೆಗೆ ಜನರ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯ ಕೆಲಸವಾಗಿದೆ. ಗಿಡ ಮರವಾಗುವ ತನಕ ಪೋಷಿಸುವ ಕೆಲಸ ಆಗಬೇಕಿದೆ ಎಂದು ಪ್ರತಿಪಾದಿಸಿದರು.ಶುದ್ಧ ಗಾಳಿ ನಗರ ಪ್ರದೇಶಗಳಲ್ಲಿ ಸಿಗುತ್ತಿಲ್ಲ. ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವವರು ಆಕ್ಸಿಜನ್ ಬಾರ್ಗೆ ಹೋಗಿ ಹಣ ಕೊಟ್ಟು ಶುದ್ಧ ಗಾಳಿ ಕುಡಿಯುತ್ತಿದ್ದಾರೆ. ಹಾಗಾಗಿ ಜಾಗತಿಕ ತಾಪಮಾನ ತಡೆಯುವ ಕೆಲಸವಲ್ಲ ಅದು ನಮ್ಮೆಲ್ಲರ ಜವಬ್ದಾರಿ ಎಂದರು.
ವಿವೇಕ ಸಿರಿ ಸೌಹರ್ದ ಸಹಕಾರಿ ಸಂಘದ ಅಧ್ಯಕ್ಷ ಸ್ವಾಮಿ ಮರಳಾಪುರ ಮಾತನಾಡಿ, ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ಸುತ್ತಲೂ ಕಾಡಿದ್ದರೂ ನೀರಿನ ಬರ ತಪ್ಪಿಲ್ಲ ಕಾರಣ ಜಾಗತೀಕರಣದ ಪರಿಣಾಮದಿಂದ ಹಳ್ಳಿಗಳಲ್ಲಿ ರೆಸಾರ್ಟ್ಗಳ ತಲೆ ಎತ್ತುತ್ತಿವೆ ಇದು ದುಸ್ಥಿತಿಯಲ್ಲವೆ ಎಂದರು.
ಪರಿಸರ ರಕ್ಷಕ ಪ್ರಶಸ್ತಿ
ಸಮಾರಂಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಕೆ.ಸಿ.ಮಧು, ವೀರಶೈವ ಮಹಾಸಭಾ ತಾಲೂಕು ನಿರ್ದೇಶಕ ಬಿ.ಸಿ.ಮಹದೇವಸ್ವಾಮಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನ, ಗ್ರಾಪಂ ಸದಸ್ಯ ಅಭಿಷೇಕ್ ಇಂಗಲವಾಡಿ ಹಾಗೂ ಹೂರದಹಳ್ಳಿ ಪ್ರಸಾದ್, ಮೂಡುಗೂರು ರೇವಣ್ಣ, ಸ್ಕೌಟ್ ಆ್ಯಂಡ್ ಗೈಡ್ಸ್ನ ಅನ್ನಪೂರ್ಣ ಇದ್ದರು. ಹಾರ, ಶಾಲಿನ ಬದಲು
ಮರ ಬೆಳಸಿ, ಧರೆ ಉಳಿಸಿ ಅಭಿಯಾನದ ಪ್ರಥಮ ಚರಣದ ಸಮಾರೋಪ ಸಮಾರಂಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಸನ್ಮಾನಿತರಿಗೆ ಹಾರ, ಶಾಲಿನ ಬದಲು ಸಸಿ ಹಾಗೂ ಪುಸ್ತಕ ನೀಡಿದರು. ಮೂಡುಗೂರು ವಿರಕ್ತ ಮಠ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂಡುಗೂರು ಶ್ರೀಗಳು ಗಣ್ಯರು, ಸನ್ಮಾನಿತರಿಗೆ ಟ್ರಸ್ಟ್ ಹೆಸರಿನಲ್ಲಿ ಸಸಿ ಕೊಟ್ಟು, ಪುಸ್ತಕ ನೀಡಿ ಗೌರವಿಸುವ ಮೂಲಕ ಸಮಾರಂಭಕ್ಕೆ ಹೊಸ ಕಳೆ ತಂದರು.