ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಯಲಿಯೂರು ಗ್ರಾಮದ ಅನಿಕೇತ ಪದವಿ ಪೂರ್ವ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು 14 ಕೆಎಆರ್ ಬಿಎನ್ ಎನ್ಸಿಸಿಯ ಸುಬೇದಾರ್ ಮೇಜರ್ ಸೆಬಾಸ್ಟಿನ್ ಡೇನಿಯಲ್ ಹಾಗೂ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಮತ್ತು ಪ್ರಾಂಶುಪಾಲ ಡಾ.ರಾಮಲಿಂಗಯ್ಯ ಉದ್ಘಾಟಿಸಿದರು.
ನಂತರ ಡೇನಿಯಲ್ ಅವರು ಆರ್ ಡಿಸಿ ಆಂಡ್ ಟಿಎಸ್ಸಿ ಸಾಧನೆ ಬಗ್ಗೆ ವಿವರಿಸಿ, ಇಂದಿನ ಎಲ್ಲಾ ಯುವಕರು ಸೇನೆ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಹಾಗೂ ಶಿಸ್ತಿನ ಜೀವನ ರೂಡಿಸಿಕೊಳ್ಳಲು ಎನ್ ಸಿಸಿ ಸೇರಬೇಕು ಎಂದರು.ಕಾರ್ಯಕ್ರಮದಲ್ಲಿ ಟಿಎಸ್ಸಿ ತಲ್ ಸೇನಾ ಕ್ಯಾಂಪ್ ನವದೆಹಲಿ ಭಾಗವಹಿಸಿದ ಸಂಜನಾ, ಭಾನುಪ್ರಿಯಾ ಹಾಗೂ ತೇಜಸ್ವಿನಿ ಅವರನ್ನು ಅಭಿನಂದಿಸಲಾಯಿತು. ದೆಹಲಿ ಕರ್ತವ್ಯ ಪಥ ಹಾಗೂ ರಾಜ್ ಪಥದಲ್ಲಿ ಭಾಗವಹಿಸಿದ ಸುಶಾಂತ್ ಮತ್ತು ಮನಿಷಾ ಡಿ ರಾಜ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್ ಸಿಸಿ ಅಧಿಕಾರಿ ಕೆ.ಆರ್.ರಾಜು, ದೈಹಿಕ ಶಿಕ್ಷಣ ನಿರ್ದೇಶಕ ಶಿವಕುಮಾರ್ , ಎನ್ ಸಿಸಿ ತರಬೇತುದಾರ ದರ್ಶನ್ ಸೇರಿದಂತೆ ಹಲವರು ಹಾಜರಿದ್ದರು.
ಪಾಂಡವಪುರ:
ಚುನಾವಣೆಗೂ ಮುನ್ನ ದರ್ಶನ್ ಪುಟ್ಟಣ್ಣಯ್ಯ ಅವರು, ಅಮೆರಿಕಾದಲ್ಲಿನ ತನ್ನ ಎಲ್ಲಾ ವ್ಯವಹಾರ ಮುಗಿಸಿ ಭಾರತಕ್ಕೆ ಕುಟುಂಬ ಸಮೇತವಾಗಿ ವಾಪಸ್ ಆಗುತ್ತೇನೆ ಎಂದು ಮತದಾರಿಗೆ ವಾಗ್ದಾನ ಮಾಡಿದ್ದರು. ಆದರೆ, ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕಯಾಗಿ ಎರಡು ವರ್ಷ ಕಳೆಯುತ್ತಿದ್ದರೂ ಸಹ ಶಾಸಕರು ತಮ್ಮ ಕುಟುಂಬವನ್ನು ಭಾರತಕ್ಕೆ ಕರೆದುಕೊಂಡು ಬರಲಿಲ್ಲ.
ಶಾಸಕ ದರ್ಶನ್ ಅಮೆರಿಕಾಗೆ ತೆರಳಿರುವುದರಿಂದ ಇದೇ ಫೆ.18ರಂದು ನಡೆಯುವ ಅವರ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೂ ಗೈರಾಗುವ ಸಾಧ್ಯತೆಗಳಿವೆ. ಕ್ಷೇತ್ರದ ಶಾಸಕರು ಪದೇಪದೇ ಅಮೆರಿಕಾ ತೆರಳುತ್ತಿರುವುದಕ್ಕೆ ರೈತಸಂಘದ ಕೆಲವು ಕಾರ್ಯಕರ್ತರಿಂದಲೇ ಅಸಮಾಧಾನ ವ್ಯಕ್ತವಾಗುತ್ತಿದೆ.