ಕನ್ನಡಪ್ರಭ ವಾರ್ತೆ ಕೋಲಾರ
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿದರು.
ಕೋಲಾರ-ವೈಟ್ ಫೀಲ್ಡ್ ನೇರ ರೈಲು ಯೋಜನೆಗೆ ರಾಜ್ಯ ಸರ್ಕಾರ ಭೂಮಿ ನೀಡಲು ಸಿದ್ಧವಿದೆ. ಯೋಜನೆಯ ಪೂರ್ಣ ವೆಚ್ಚ ಕೇಂದ್ರ ಸರ್ಕಾರವೇ ಭರಿಸಬೇಕು. ಈ ಕುರಿತು ಸಿಎಂ ಮಟ್ಟದಲ್ಲಿ ಚರ್ಚೆ ನಡೆದಿದೆ. ಕಾಂತರಾಜ್ ಸರ್ಕಲ್ನಲ್ಲಿ ಇಲಾಖೆಯ ಜಾಗದಲ್ಲಿ ರೇಷ್ಮೆ ಪಾರ್ಕ್ ನಿರ್ಮಿಸಲು ಅವಕಾಶವಿದೆ. ರೈತರಿಗೆ ನೆರವು ನೀಡಲಾಗುವುದು, ಬಸ್ ಮಾರ್ಗವನ್ನೂ ಸರಿಪಡಿಸಲಾಗುವುದು ಎಂದು ಹೇಳಿದರು.ನಿವೇಶನ, ಭೂಸ್ವಾಧೀನ: ಕೋಲಾರದ ಕೋಲಾರಮ್ಮ ಕೆರೆ ಸುತ್ತಲಿನ ಜಾಗ ಭೂಸ್ವಾಧೀನಪಡಿಸಲು ನಿರ್ಧರಿಸಲಾಗಿದೆ. ರೈತರು ಮಾರಾಟ ಮಾಡಿದರೆ ಖರೀದಿಸಲಾಗುವುದು, ಇಲ್ಲದಿದ್ದರೆ ೫೦:೫೦ ಅನುಪಾತದಲ್ಲಿ ಅಭಿವೃದ್ಧಿಪಡಿಸಿ ನೀಡಲಾಗುವುದು. ಇಲ್ಲಿಯೂ ಪತ್ರಕರ್ತರಿಗೆ ನಿವೇಶನ ನೀಡಲಾಗುವುದು. ಪತ್ರಕರ್ತರ ಸಂಘಕ್ಕೆ ೨ ಎಕರೆ ಜಾಗ ನೀಡಲು ಸಿದ್ಧವಿದ್ದು, ಸ್ಥಳವನ್ನು ಈಗಾಗಲೇ ನಿಗದಿಪಡಿಸಿದ್ದು ಪರಿಶೀಲನೆ ನಡೆಸಬೇಕಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಯ ಕಾಂತರಾಜ್ ಸರ್ಕಲ್ ಬಳಿ ರೇಷ್ಮೆ ಪಾರ್ಕ್ಗೆ ೧೧ ಎಕರೆ ಜಮೀನು ಲಭ್ಯವಿದೆ. ಮಾವು ಶಿಥಲೀಕರಣ ಘಟಕ ಸ್ಥಾಪನೆ ಕಷ್ಟದ ಕೆಲಸ. ಅದಕ್ಕೆ ಮಾರುಕಟ್ಟೆ ವ್ಯವಸ್ಥೆಬೇಕು. ಮಧ್ಯಾಹ್ನದ ಬಿಸಿಯೂಟದಲ್ಲಿ ಮಾವಿನ ಉತ್ಪನ್ನಗಳನ್ನು ನೀಡುವ ಬಗ್ಗೆ ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಪೆನ್ ಖಡ್ಗಕ್ಕಿಂತ ಹರಿತವಾದದ್ದು. ಕೋವಿಡ್ ಸಮಯದಲ್ಲಿ ಮಾಧ್ಯಮದವರು ಅದ್ಭುತವಾಗಿ ಕೆಲಸ ಮಾಡಿದರು. ಆದರೆ ಸುದ್ದಿ ವಾಹಿನಿಗಳು ತಮ್ಮ ಧೋರಣೆ ಬದಲಿಸಿಕೊಳ್ಳಬೇಕು ಎಂದು ಸಂಸದರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್ ಮಾತನಾಡಿ, ಪತ್ರಕರ್ತರು ಇಂದು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಸಂಘದಿಂದಲೇ ೧೫ ಲಕ್ಷದವರೆಗೆ ಅಂಚೆ ವಿಮೆ ಮಾಡಿಸಲಾಗಿದೆ. ೨೦೩೨ರಲ್ಲಿ ಸಂಘದ ಶತಮಾನೋತ್ಸವ ಜಿಲ್ಲೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ಸಂಘದ ಸಂಸ್ಥಾಪಕ ಡಿ.ವಿ. ಗುಂಡಪ್ಪ ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯ ಎಂದರು.
ಪತ್ರಕರ್ತರ ಧ್ವನಿ:
ಕೋಲಾರ-ಚಿಕ್ಕಬಳ್ಳಾಪುರ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ. ಸುರೇಶ್ ಕುಮಾರ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಸುರೇಶ್ ಇದ್ದರು. ಕೆ.ವಿ.ನಾಗರಾಜ್ ಪ್ರಾರ್ಥಿಸಿ, ಖಜಾಂಚಿ ಬಿ.ಎಲ್. ರಾಜೇಂದ್ರಸಿಂಹ ಸ್ವಾಗತಿಸಿ, ಕಾರ್ಯದರ್ಶಿ ಜೆ.ಜಿ. ಶ್ರೀನಿವಾಸಮೂರ್ತಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ದಿಗ್ಗಜ ಪತ್ರಕರ್ತರ ಹೆಸರಿನಲ್ಲಿ ನೀಡುವ ವಾರ್ಷಿಕ ಪ್ರಶಸ್ತಿಗಳನ್ನು ಹಿರಿಯ ಪತ್ರಕರ್ತರಿಗೆ ನೀಡಿ ಗೌರವಿಸಲಾಯಿತು. ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು.
ವಾರ್ಷಿಕ ಪ್ರಶಸ್ತಿ ಪುರಸ್ಕೃತರು
ಜಿ. ನಾರಾಯಣಸ್ವಾಮಿ ನೆನಪಿನ ಪ್ರಶಸ್ತಿ: ಕೆ.ಎಸ್.ಗಣೇಶ್. ಕೆ.ಆರ್. ಕೃಷ್ಣಸ್ವಾಮಿ ನೆನಪಿನ ಪ್ರಶಸ್ತಿ: ಅಬ್ಬಣಿಶಂಕರ್. ಬಿ.ವಿ.ನರಸಿಂಹಮೂರ್ತಿ ನೆನಪಿನ ಪ್ರಶಸ್ತಿ: ಎ.ಸದಾನಂದ. ಕೆ.ಪ್ರಹ್ಲಾದರಾವ್ ನೆನಪಿನ ಪ್ರಶಸ್ತಿ: ಎಸ್.ನಾರಾಯಣಸ್ವಾಮಿ. ಬಿ.ಆರ್ಮುಗಂ ನೆನಪಿನ ಪ್ರಶಸ್ತಿ: ಎಚ್.ದೊರೈ ಅರಸು. ಬಿ.ಎನ್.ಗುರುಪ್ರಸಾದ್ ನೆನಪಿನ ಪ್ರಶಸ್ತಿ: ಎನ್.ಮುನಿವೆಂಕಟೇಗೌಡ. ಎಂ.ಮಲ್ಲೇಶ್ ನೆನಪಿನ ಪ್ರಶಸ್ತಿ: ಎನ್.ರಾಮು. ಎಂ.ಜಿ.ಪ್ರಭಾಕರ ನೆನಪಿನ ಪ್ರಶಸ್ತಿ: ಎಂ.ಸುಬ್ರಮಣಿ. ಸಿ.ಎಂ.ರಂಗಾರೆಡ್ಡಿ ನೆನಪಿನ ಪ್ರಶಸ್ತಿ: ಕೆ.ಎನ್.ಮಹೇಶ್. ವಿ.ಎಂ.ನಾಗಪ್ಪ ನೆನಪಿನ ಪ್ರಶಸ್ತಿ: ಜಮ್ಮನಹಳ್ಳಿ ಕೃಷ್ಣಪ್ಪ. ಎಚ್.ಎನ್.ಸೋಮಶೇಖರಗೌಡ ನೆನಪಿನ ಪ್ರಶಸ್ತಿ: ಎಸ್.ವೇಣುಗೋಪಾಲ್.