ಕನ್ನಡಪ್ರಭ ವಾರ್ತೆ, ತುಮಕೂರು
ಧ್ವನಿ ಇಲ್ಲದವರ ಬಗ್ಗೆ ಮಾಧ್ಯಮ ಧ್ವನಿ ಆಗಬೇಕು ಅನ್ಯಾಯದಿಂದ ತುಳಿತಕ್ಕೊಳಗಾದವರ ಪರವಾಗಿ ಪತ್ರಕರ್ತರು ನಿಲ್ಲಬೇಕು. ಇಂತಹ ಗುರುತರವಾದ ಜವಾಬ್ದಾರಿ ನಿಮ್ಮ ಮೇಲಿದ್ದು ಇದರ ಬಗ್ಗೆ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.ಪತ್ರಕರ್ತರು ಮೂಢನಂಬಿಕೆಗಳನ್ನು ನಂಬಬಾರದು. ನಮ್ಮ ಸಮಾಜದಲ್ಲಿ ಎಂದಿಗೂ ಮೌಢ್ಯ, ಕಂದಾಚಾರ ಮೌಢ್ಯತೆಗಳು ಜಾರಿಯಲ್ಲಿದ್ದು, ಸಮಾಜವನ್ನು ತಿದ್ದುವ ಪತ್ರಕರ್ತರು ಇಂತಹವುಗಳನ್ನು ನಂಬಬಾರದು, ಇದಕ್ಕೆ ಪೂರಕವಾದ ಸುದ್ದಿಗಳನ್ನು ಪರಿಶೀಲಿಸಬೇಕು ನನಗೂ ಕೂಡ ಈ ತರಹದ ಅನುಭವವಾಗಿದ್ದು ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಸ್ಥಾನ ಕಳೆದು ಹೋಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ ನಾನು 15 ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ. ಆದರೆ ಏನು ಆಗಲಿಲ್ಲ, ನನ್ನ ಕಾರಿನ ಮೇಲೆ ಕಾಗೆ ಕೂಳಿತುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಉಂಟಾಗುತ್ತದೆ ಎಂದು ಜ್ಯೋತಿಷಿಗಳು ಹೇಳಿದರು ಅದು ಯಾವುದು ನಡೆಯಲಿಲ್ಲ. ಇದನ್ನ ನಂಬದ ನಾನು ಇವರಿಗೂ ಸುಮಾರು 18 ಬಜೆಟ್ ಗಳನ್ನು ಮಂಡಿಸಿದ್ದೇನೆ ಎಂದರು. ಪತ್ರಕರ್ತರಿಗೆ ವೈಚಾರಿಕತೆ ಇರಬೇಕು. ವೈಜ್ಞಾನಿಕತೆಯ ಅಧ್ಯಯನವಾಗಬೇಕು. ಪತ್ರಕರ್ತರು ಅಧ್ಯಯನಶೀಲರಾಗಿ ಸಂಶೋಧನಾತ್ಮಕವಾಗಿ ವರದಿಗಳನ್ನು ನೀಡಬೇಕು. ನಿಷ್ಟುರವಾದ ಸುದ್ದಿಗಳನ್ನು ಪತ್ರಕರ್ತರು ಪ್ರಕಟಿಸಬೇಕು. ಈ ನಿಟ್ಟಿನಲ್ಲಿ ನಾನು ಕೂಡ ಇದಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಂದು ತಿಳಿಸಿದರು.
ಪತ್ರಕರ್ತರು ಅನೇಕ ಒತ್ತಾಯಗಳು ಮತ್ತು ಬೇಡಿಕೆಗಳನ್ನು ನಮ್ಮ ಮುಂದೆ ಇಟ್ಟಿದ್ದು ಕಳೆದ ಸಮ್ಮೇಳನದಲ್ಲಿ ತಿಳಿಸಿದ ಹಾಗೆ ಬಸ್ ಪಾಸ್ ಪ್ರಕರ್ತರಿಗೆ ವಿತರಣೆ ಮಾಡಲು ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಶೀಘ್ರದಲ್ಲಿ ಪಾಸ್ ಗಳು ಪತ್ರಕರ್ತರ ಕೈ ಸೇರಲಿದೆ ಎಂದರು.ಈಗಾಗಲೇ ಪತ್ರಕರ್ತರಿಗೆ 12,000 ಮಾಶಾಸನ ನೀಡುತ್ತಿದ್ದು ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಸುಮಾರು ಹತ್ತುಕೋಟಿರೂ ವೆಚ್ಚದಲ್ಲಿ ಆರೋಗ್ಯ ವಿಮೆಯನ್ನು ಮಾಡಿಸುವ ಹೊಣೆಗಾರಿಕೆಯನ್ನು ಸರ್ಕಾರ ಹೊಂದಿದೆ ಪತ್ರಕರ್ತರು ಯಾವುದೇ ರೀತಿಯ ನ್ಯಾಯಯುತವಾದ ಬೇಡಿಕೆಗಳನ್ನು ಇಟ್ಟಲ್ಲಿ ಸರ್ಕಾರ ಅದಕ್ಕೆ ಕಟ್ಟಿಬದ್ಧವಾಗಿ ಈಡೇರಿಸುವ ಪ್ರಯತ್ನವನ್ನು ಮಾಡುತ್ತದೆ ಎಂದು ಭರವಸೆ ನೀಡಿದರು.