ಕೆ.ಆರ್‌. ನಗರ ಪುರಸಭೆ ಚುನಾಯಿತ ಆಡಳಿತ ಸದಸ್ಯರ ಅಧಿಕಾರಾವಧಿ ಇಂದು ಕೊನೆ

KannadaprabhaNewsNetwork |  
Published : Nov 06, 2025, 01:15 AM IST
53 | Kannada Prabha

ಸಾರಾಂಶ

ಕೆ.ಆರ್‌.ನಗರ ಪಟ್ಟಣದ ಪುರಸಭೆಯ ಚುನಾಯಿತ ಆಡಳಿತ ಸದಸ್ಯರ ಅಧಿಕಾರವಧಿ ನ. 6 ರಂದು ಗುರುವಾರ ಕೊನೆಗೊಳ್ಳಲಿದೆ. 2019ರ ಮೇ 31ರಂದು ಪುರಸಭೆಯ 23 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ -14, ಜೆಡಿಎಸ್ - 8, ಬಿಜೆಪಿ -1 ಸ್ಥಾನವನ್ನು ಗಳಿಸಿತ್ತು, ಜೆಡಿಎಸ್ ತೆಕ್ಕೆಯಲ್ಲಿದ್ದ ಆಡಳಿತವನ್ನು ಕಾಂಗ್ರೆಸ್ ಕೈ ವಶ ಮಾಡಿಕೊಂಡಿತ್ತು.

ಕುಪ್ಪೆ ಮಹದೇವಸ್ವಾಮಿ

ಕನ್ನಡಪ್ರಭ ವಾರ್ತೆ ಕೆ.ಆರ್‌.ನಗರ

ಪಟ್ಟಣದ ಪುರಸಭೆಯ ಚುನಾಯಿತ ಆಡಳಿತ ಸದಸ್ಯರ ಅಧಿಕಾರವಧಿ ನ. 6 ರಂದು ಗುರುವಾರ ಕೊನೆಗೊಳ್ಳಲಿದೆ.

2019ರ ಮೇ 31ರಂದು ಪುರಸಭೆಯ 23 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ -14, ಜೆಡಿಎಸ್ - 8, ಬಿಜೆಪಿ -1 ಸ್ಥಾನವನ್ನು ಗಳಿಸಿತ್ತು, ಜೆಡಿಎಸ್ ತೆಕ್ಕೆಯಲ್ಲಿದ್ದ ಆಡಳಿತವನ್ನು ಕಾಂಗ್ರೆಸ್ ಕೈ ವಶ ಮಾಡಿಕೊಂಡಿತ್ತು.

ಚುನಾವಣೆ ನಡೆದ 18 ತಿಂಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿ ಮಾಡಿರಲಿಲ್ಲ, ವಿಳಂಬವಾಗಿ ಆನಂತರ ಮೀಸಲಾತಿ ನಿಗದಿಯಾಗಿ 2020ರ ನ. 6 ರಂದು ಅಧ್ಯಕ್ಷರಾಗಿ ಕೆ.ಜಿ. ಸುಬ್ರಮಣ್ಯ ಮತ್ತು ಉಪಾಧ್ಯಕ್ಷೆಯಾಗಿ ಸೌಮ್ಯ ಲೋಕೇಶ್ ಅವಿರೋಧ ಆಯ್ಕೆಯಾದರು.

ಕಾಂಗ್ರೆಸ್ ಆಂತರಿಕಒಪ್ಪಂದದಂತೆ ಕೆ.ಜಿ. ಸುಬ್ರಮಣ್ಯ ರಾಜೀನಾಮೆ ನೀಡಿದ ನಂತರ 2022ರ ಏ. 8ರಂದು ಕೋಳಿ ಪ್ರಕಾಶ್, 2023ರ ಜ. 4ರಂದು ಸೈಯದ್ ಸಿದ್ದಿಕ್ ಅಧ್ಯಕ್ಷರಾಗುವ ಮೂಲಕ ಮೊದಲ ಅವಧಿಯ 30 ತಿಂಗಳನ್ನು ಪೂರೈಸಿದರು.

ಎರಡನೇ ಅವಧಿಯ‌30 ತಿಂಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟಗೊಳಿಸಲು ವಿಳಂಬ ಮಾಡಿದ್ದರಿಂದ ಹುಣಸೂರು ಉಪವಿಭಾಗಾಧಿಕಾರಿಗಳು 19 ತಿಂಗಳ ಕಾಲ ಪುರಸಭೆಯ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.

ಈ ಸಂದರ್ಭದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ ಸದಸ್ಯರು ಮೀಸಲಾತಿ ಪ್ರಕಟವಾಗುವಂತೆ ನೋಡಿಕೊಂಡಿದ್ದ ಪರಿಣಾಮ 2025ರ ಮೇ 13ರಂದು ಡಿ. ಶಿವಕುಮಾರ್ ಕೊನೆಯ 11 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು, ಈಗ ಸಂವಿಧಾನ ಬದ್ದವಾಗಿ ಪುರಸಭೆಯ ಚುನಾಯಿತಸದಸ್ಯರ ಅವಧಿ ಮುಕ್ತಾಯಗೊಂಡಿದೆ.

ಚುನಾಯಿತ ಸದಸ್ಯರ ಅವಧಿ ಪೂರ್ಣಗೊಂಡಿರುವ ಹಿನ್ನೆಲೆ ಮತ್ತೆ ಹುಣಸೂರು ಉಪ ವಿಭಾಗಾಧಿಕಾರಿಗಳು ಆಡಳಿತಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ.

ಸ್ಪರ್ಧೆಗೆ ನೂರಾರು ಮಂದಿ ಸಿದ್ಧ:

ಪುರಸಭೆಯ ಆಡಳಿತದ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಹೊಸ ಆಡಳಿತ ಮಂಡಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ 23 ವಾರ್ಡ್ ಗಳಿಗೆ ಸದಸ್ಯ ಸ್ಥಾನ ಸ್ಥಾನಕ್ಕೆ ಸ್ಪರ್ಧಿಸಲು ನೂರಾರು ಮಂದಿ ಸಿದ್ದರಾಗಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಗಳಿಂದ 3 ರಿಂದ 4ಕ್ಕೂ ಅಧಿಕ ಮಂದಿ ಸ್ಪರ್ಧಾಕಾಂಕ್ಷಿಗಳಾಗಿದ್ದು, ಈಗಾಗಲೇ ಅವರು ಮತದಾರರನ್ನು ಭೇಟಿ ಮಾಡಿ ತಮ್ಮ ಮನದಿಂಗಿತ ವ್ಯಕ್ತಪಡಿಸುವುದರೊಂದಿಗೆ ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಪಕ್ಷಗಳ ಮುಖಂಡರಿಗೆ ದುಂಬಾಲು ಬಿದ್ದಿದ್ದಾರೆ.ಪಟ್ಡಣದ 8ನೇ ವಾರ್ಡಿನ ಸದಸ್ಯನಾಗಿನಾನು ಆಯ್ಕೆಯಾಗಲು ಕಾಂಗ್ರೆಸ್ ಮುಖಂಡರಿಗೆ ಮತ್ತುವಾರ್ಡಿನ ಮತದಾರರಿಗೆ ಹಾಗೂ 23 ವಾರ್ಡಿನ ಸದಸ್ಯರಿಗೆ ನಾನು ಕೃತಜ್ಞನಾಗಿದ್ದು, ಇದರೊಂದಿಗೆ ಅಧ್ಯಕ್ಷನಾಗಿ ಆಯ್ಕೆಯಾಗಲು ಕಾರಣರಾದಶಾಸಕರಾದ ಡಿ. ರವಿಶಂಕರ್, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಮತ್ತು ಪಕ್ಷಕ್ಕೆ ಹೃತ್ಪೂವಕ ಅಭಿನಂದನೆ ಸಲ್ಲಿಸುತ್ತೇನೆ.

- ಡಿ.ಶಿವಕುಮಾರ್, ಪುರಸಭೆ ಅಧ್ಯಕ್ಷರುಕಳೆದ ಚುನಾವಣೆಯಲ್ಲಿ 10 ನೇ ವಾರ್ಡಿನಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಎರಡನೇ ಬಾರಿ ಪುರಸಭೆಗೆ ಜೆಡಿಎಸ್ ಪಕ್ಷದ ವತಿಯಿಂದ ಸ್ಪರ್ದಿಸಿದ್ದ ನನಗೆ ವಾರ್ಡಿನ ಮತದಾರರು ಆರ್ಶಿವಾದ ಮಾಡಿ ಅಭೂತಪೂರ್ವ ಗೆಲುವು ತಂದಿಕೊಟ್ಟಿದ್ದರು, ಈಗ ಸದಸ್ಯತ್ವ ಅವಧಿ ಮುಗಿದಿದ್ದು ನಾನು ಸಂತಸದಿಂದ ಮಾಜಿ ಸದಸ್ಯನಾಗುತ್ತಿದ್ದು ಸರ್ಕಾರ ವಿಳಂಭ ಮಾಡದೆ ಸಕಾಲದಲ್ಲಿ ಪುರಸಭೆಗೆ ಸದಸ್ಯಸ್ಥಾನಗಳಿಗೆ ಚುನಾವಣೆ ನಡೆಸಿ ಅಭಿವೃದ್ಧಿಗೆ ಕುಂಠಿತವಾಗದಂತೆ ನೋಡಿಕೊಳ್ಳಬೇಕು.

- ಉಮೇಶ್, ಪುರಸಭೆ ಸದಸ್ಯರುಸತತವಾಗಿ ಮೂರು ಬಾರಿ ನಾನು ಕಾಂಗ್ರೆಸ್ ಪಕ್ಷದಿಂದ ಸದಸ್ಯನಾಗಿ ಆಯ್ಕೆಯಾಗಲು ಆರ್ಶಿವಾದ ಮಾಡಿದ ವಾರ್ಡಿನ ಮತದಾರರು ಮತ್ತು ಪಕ್ಷದ ಮುಖಂಡರಿಗೆ ಅಭಾರಿಯಾಗಿದ್ದು, ಮುಂದಿನ ಚುನಾವಣೆಯಲ್ಲಿಯು ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವಂತೆ ದುಡಿಯುತ್ತೇನೆ.

- ಕೆ.ಜಿ. ಸುಬ್ರಮಣ್ಯ, ಪುರಸಭೆ ಸದಸ್ಯರುಪುರಸಭೆ ಸದಸ್ಯರ ಆಡಳಿತ ಅವಧಿ ಮುಕ್ತಾಯಗೊಂಡಿದ್ದು, ಗುರುವಾರ ಈ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ಜತೆ ಚರ್ಚಿಸಿ ಅವರ ಆದೇಶದಂತೆ ನಡೆದುಕೊಳ್ಳುತ್ತೇನೆ.

- ಜಿ.ಎಸ್. ರಮೇಶ್, ಪ್ರಭಾರ ಮುಖ್ಯಾಧಿಕಾರಿ

PREV

Recommended Stories

ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ನಿಂದ ರಸಪ್ರಶ್ನೆ ಸ್ಪರ್ಧೆ
ಕುತಂತ್ರ-ಅಸೂಯೆಯಿಂದ ಟನಲ್‌ ರಸ್ತೆಗೆ ಬಿಜೆಪಿ ವಿರೋಧ : ಡಿ.ಕೆ.ಸು