ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ರೋಟರಿ ಸಂಸ್ಥೆಯ ಹಿಂದಿನ ಎಲ್ಲ ಸೇವಾ ಕಾರ್ಯಕ್ರಮವನ್ನು ಮುಂದುವರಿಸುವುದು, ಕೃತಕಕಾಲು, ಮುಂಗೈ ಜೋಡಣೆ ಬೃಹತ್ ಕಾರ್ಯಕ್ರಮ, ಸುವರ್ಣ ಮಹೋತ್ಸವ ಆಚರಣೆ ಸಂಬಂಧ ಬಾಕಿಯಿರುವ ಮತ್ತೊಂದು ಸಾರ್ವಜನಿಕ ಬಸ್ ತಂಗುದಾಣ ನಿರ್ಮಾಣ, ಮುಕ್ತಿಧಾಮದಲ್ಲಿ ಶವಗಳನ್ನು ಸುಡುವ ವಿದ್ಯುತ್ ಯಂತ್ರ ಸ್ಥಾಪನೆ, ಮುಕ್ತಿಧಾಮಕ್ಕೆ ಶವಸಾಗಿಸುವ ವಾಹನ ಖರೀದಿಸಿ ತಾಲೂಕಿನಾದ್ಯಂತ ನೀಡುವುದು, ಉದ್ಯೋಗ ಮೇಳ, ಪ್ರವೇಶ ಪರೀಕ್ಷೆ, ಸ್ವಯಂ ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಕ್ರಮ ಆಯೋಜನೆ, ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ, ಪರಿಸರ ನೈರ್ಮಲ್ಯ ಕಾರ್ಯಕ್ರಮ, ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ, ಹಿರಿಯ ನಾಗರಿಕ ಸಾಂತ್ವನ ಕಾರ್ಯಕ್ರಮ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ, ಎರಡು ನೂತನ ರೋಟರ್ಯಾಕ್ಟ್ ಪ್ರಾರಂಭಿಸುವುದು ನಮ್ಮ ಗುರಿ ಎಂದರು. ತಮ್ಮನ್ನು ಅವಿರೋಧವಾಗಿ ರೋಟರಿ ಸಂಸ್ಥೆಯ 55ನೇ ಅಧ್ಯಕ್ಷರಾಗಿ ಆಯ್ಕೆ ಮಾಡಿದ ತಮಗೆಲ್ಲರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ರೋಟರಿ ಸಂಸ್ಥೆಯೂ ಕಳೆದ 54 ವರ್ಷಗಳಿಂದಲೂ ಸಮಾಜದಲ್ಲಿ ಉತ್ತಮ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮುಂದೆಯೂ ಕೂಡ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸಂಸ್ಥೆಯ ಘನತೆಗೆ ಚ್ಯುತಿಯಾಗದ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುವುದು ಎಂದರು.