ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೋಮವಾರ ಆಯೋಜಿಸಿದ್ದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿ ನಾಡನ್ನು ಕಟ್ಟುವ ಹಾಗೂ ಸಾಮ್ರಾಜ್ಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅವರು ಅಳವಡಿಸಿಕೊಂಡಿದ್ದ ಆದರ್ಶಗಳು, ಸಂಸ್ಕೃತಿ, ಆಚರಣೆಗಳನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ಅಂತವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಾವು ಉತ್ತಮ ಸಮಾಜ ಕಟ್ಟಲು ಮುಂದಾಗಬೇಕು ಎಂದರು.
ಬಾಸುದೇವ ಸೋಮಾನಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಬಿ. ರಮೇಶ್ ಮಾತನಾಡಿ, ಶಿವಾಜಿ ಅವರು ಒಬ್ಬ ಆದರ್ಶ ಪುರುಷ, ಸರ್ವಧರ್ಮವನ್ನು ಸಮಾನವಾಗಿ ಕಾಣುತ್ತಿದ್ದ ಸರ್ವಗುಣ ಸಂಪನ್ನ, ಇಂತಹ ಮಹಾನ್ ವ್ಯಕ್ತಿಯ ಜಯಂತಿಯಂದು ಮಹಾರಾಷ್ಟ್ರದಲ್ಲಿ ಸಾರ್ವಜನಿಕ ರಜೆಯನ್ನು ನೀಡುವುದರ ಮೂಲಕ ದೊಡ್ಡ ಹಬ್ಬದ ರೀತಿ ಆಚರಿಸುತ್ತಾರೆ ಎಂದರು.ಈ ದೇಶವನ್ನು ಸಾವಿರಾರು ರಾಜರು ಆಳಿ ಮರೆಯಾಗಿದ್ದಾರೆ. ಆದರೆ, ಶಿವಾಜಿಯವರು ತಮ್ಮ ಮರಣದ ನಂತರವೂ ಪ್ರತಿಯೊಬ್ಬರ ಮನಸಿನಲ್ಲಿಯೂ ಮಹಾರಾಜರಾಗಿ ಇಂದಿಗೂ ಸಂಭ್ರಮಿಸುತ್ತಿದ್ದಾರೆ. ಇದು ಅವರು ಅವರ ವ್ಯಕ್ತಿತ್ವದಿಂದ ಗಳಿಸಿರುವ ಗೌರವ. ಇವರ ಸಾಲಿಗೆ ಇನ್ನೂ ಹಲವಾರು ಮಹಾಪುರುಷರು ಸೇರುತ್ತಾರೆ. ಅಂತಹ ವ್ಯಕ್ತಿಗಳ ಸಾಧನೆ, ಆದರ್ಶ ಗುಣಗಳನ್ನು ಇಂದಿನ ಯುವಜನರಿಗೆ ತಿಳಿಸುವ ಕೆಲಸವನ್ನು ಜಯಂತಿ ಮಾಡುತ್ತಿವೆ ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಕೆ. ನಾಗೇಂದ್ರ, ಪದಾಧಿಕಾರಿಗಳಾದ ಚಂದ್ರರಾವ್, ಮುಕುಂದರಾವ್, ಹರಿರಾವ್ ಸಿಂದೆ ಮೊದಲಾದವರು ಇದ್ದರು.
ಶಿವಾಜಿ ಭಾವಚಿತ್ರ ಮೆರವಣಿಗೆಇದಕ್ಕೂ ಮುನ್ನ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಜಾನಪದ ಕಲಾ ತಂಡಗಳೊಂದಿಗೆ ಶಿವಾಜಿ ಭಾವಚಿತ್ರ, ಪುತ್ಥಳಿ ಮೆರವಣಿಗೆಗೆ ಶಾಸಕ ಕೆ. ಹರೀಶ್ ಗೌಡ ಅವರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಚಾಲನೆ ನೀಡಿದರು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಿಂದ ಆರಂಭವಾದ ಮೆರವಣಿಗೆಯು ಕಲಾಮಂದಿರ ಆವರಣದಲ್ಲಿ ಅಂತ್ಯವಾಯಿತು. ಶಿವಾಜಿ ವೇಷಧಾರಿ ಮಕ್ಕಳು, ವಿವಿಧ ಜಾನಪದ ಕಲಾತಂಡಗಳು, ಸಮಾಜದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.