ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಹಮಿಕೊಂಡಿದ್ದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಈ ಚಿತ್ರಕಲೆಯ ಧ್ಯೇಯ ಕರ್ನಾಟಕ ಅರಣ್ಯ ಅಥವಾ ಕರ್ನಾಟಕ ವನ್ಯ ಜೀವಿಗಳ ಸಂರಕ್ಷಣೆ ಕೇವಲ ಚಿತ್ರಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.ಅರಣ್ಯ ಇಲಾಖೆಯು ಸಾಮಾಜಿಕ ಬದ್ಧತೆ ಇರುವ ವ್ಯಕ್ತಿಗಳನ್ನು ಪ್ರಶ್ನಿಸುವಂತಾಬೇಕಿದೆ. 1947ರ ಇತಿಹಾಸ ಪುಟ ತಿರುವಿದಾಗ ನಮ್ಮ ದೇಶದಿಂದ ಸಾಗವಾನಿ, ಗಂಧ, ತೇಗ ವಿದೇಶಗಳಿಗೆ ರಪ್ತು ಆಗುತ್ತಿತ್ತು. ಜಿಡಿಪಿ ದರ ಸಹ ಜಾಸ್ತಿ ಇತ್ತು. ಇಂದು ನಾವು ಭಾರತವು ವಿಶ್ವಗುರುವಾಗಲು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಾವೆಲ್ಲರೂ ಸಾಮಾಜಿಕ ಬದ್ಧತೆ ಮೆರೆದಾಗ ಮಾತ್ರ ಸಾಧ್ಯ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ವೀರಯ್ಯ ಸಾಲಿಮಠ ಅವರು ಮಾತನಾಡಿ, ಮನುಷ್ಯ ಭಾವಜೀವಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಚಿತ್ರಕಲೆ ಒಳ್ಳೆಯ ವೇದಿಕೆಯಾಗಿದೆ. ಅವಕಾಶ ಬಳಸಿಕೊಂಡು ಸತತ ಪ್ರಯತ್ನದಿಂದ ನೀವು ಸಾಧನೆ ಮಾಡಲು ಸಾಧ್ಯ. ಅನಾದಿ ಕಾಲದಿಂದಲೂ ಅಜಂತಾ ಎಲ್ಲೋರಾ ಹಾಗೂ ಅಶೋಕ ಸಾಮ್ರಾಟನ ಕಾಲದಲ್ಲಿ ಚಿತ್ರಕಲೆ ಬಿಡಿಸುವ ಮೂಲಕ ದೇಶದ ಕಿರ್ತಿ ಹೆಚ್ಚಿಸಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಬಿ.ಕುಸನಾಳ ಮಾತನಾಡಿ, ಇಂತಹ ಚಿತ್ರಕಲಾ ಸ್ಪರ್ಧೆ ಶೈಕ್ಷಣಿಕ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯಲು ಪ್ರೇರಣೆ, ಪ್ರೋತ್ಸಾಹ ಸಿಗಲು ಅವಕಾಶ ನೀಡುತ್ತದೆ. ಸ್ಪರ್ಧಿಗಳಿಗೆ ಪ್ರೇರಣೆ ನೀಡುವುದು ಬಹಳ ಮುಖ್ಯ. ಸುದ್ದಿ ಸಂಸ್ಥೆಗಳು ಇಂತಹ ಕೆಲಸಗಳನ್ನು ಮಾಡಿದರೆ ಹೆಚ್ಚು ಪ್ರಚಾರ ಸಿಗಲು ಸಾಧ್ಯ. ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಮಕ್ಕಳಿಂದ ಚಿತ್ರಕಲೆ ತೆಗೆಸಿ ಅವರ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಚಾಣಕ್ಯ ಕೋಚಿಂಗ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಎನ್.ಎಂ.ಬಿರಾದಾರ ಮಾತನಾಡಿ, ಇಂತಹ ಸ್ಪರ್ಧೆಗಳು ನೈಜ ಪ್ರತಿಭೆಗಳು ಹೊರಬರಲು ಕಾರಣವಾಗಬಲ್ಲವು. ಇಂದು ಗಣಿತ, ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕ ಗಳಿಸುವುದೇ ಬುದ್ಧಿವಂತ ಎಂಬ ತಪ್ಪು ಕಲ್ಪನೆಯಿದೆ. ಮನೋವಿಜ್ಞಾನಿಗಳ ಪ್ರಕಾರ ಎಂಟು ಪ್ರಕಾರದ ಸಾಮರ್ಥ್ಯ ಹೊಂದಿದ್ದವರು ಮಾತ್ರ ಬುದ್ಧಿವಂತ ಎಂದು ಹೇಳುತ್ತಾರೆ. ಅವರ ಪ್ರಕಾರ ಭಾಷಾ ಸಾಮರ್ಥ್ಯ, ತಾರ್ಕಿಕ ಸಾಮರ್ಥ್ಯ, ಅಂತರ ಸಂಬಂಧ ಸಾಮರ್ಥ್ಯ, ಅಂತರ ಸಾಮರ್ಥ್ಯ, ದೃಶ್ಯ ಬುದ್ಧಿ ಸಾಮರ್ಥ್ಯ ಹೀಗೆ ವಿವಿಧ ಸಾಮರ್ಥ್ಯ ಮೈಗೂಡಿಸಿಕೊಂಡರೆ ಅವರು ಒಂದಿಲ್ಲೊಂದು ಕ್ಷೇತ್ರದಲ್ಲಿ ಸಾಧನೆ ಮಾಡಬಲ್ಲರು ಎಂದರು.ಚಿತ್ರಕಲೆಯನ್ನು ವಿಶ್ಲೇಷಣೆ ಮಾಡಿದಾಗ ಮಾತ್ರ ತಮ್ಮ ತಮ್ಮ ಅರಿವು ಆಗುತ್ತದೆ. ಜಗತ್ತಿನಲ್ಲಿರುವ ಎಲ್ಲ ಕಲೆಗಳಲ್ಲಿ ಚಿತ್ರಕಲೆಯೂ ಶ್ರೇಷ್ಠ. ಜಗತ್ತಿನಲ್ಲಿ ಒಂದೊಂದು ಚಿತ್ರಕಲೆ ಬಹುದೊಡ್ಡ ಬೆಲೆ ಮಾರಾಟ ಆಗಿರುವುದನ್ನು ನೋಡುತ್ತೇವೆ. ಲಿಯೋರ್ಡಾ ವಿಂಚಿ ಬರೆದ ಚಿತ್ರ 2017 ರಲ್ಲಿ ₹3,700 ಕೋಟಿ ಮಾರಾಟ ಆಗಿರುವುದನ್ನು ನೋಡಿದರೆ ಚಿತ್ರಕಲೆ ಎಷ್ಟು ಬೆಲೆ ಇದೆ ಅರಿತುಕೊಳ್ಳಬಹುದು. ಭಾರತದಲ್ಲಿ ಎಂ.ಎಫ್.ಹುಸೇನ ಅವರ ಬರೆದ ಚಿತ್ರ ₹118 ಕೋಟಿಗೆ, ಅಮೃತ್ ಶೌರ ಅವರ ಚಿತ್ರ ₹61 ಕೋಟಿಗೆ ಮಾರಾಟ ಆಗಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಡಾ.ಅಶೋಕಕುಮಾರ ಜಾಧವ ಮಾತನಾಡಿ, ಕನ್ನಡಪ್ರಭ ಹಮ್ಮಿಕೊಂಡಿರುವ ಈ ಚಿತ್ರಕಲಾ ಸ್ಪರ್ಧೆಯು ಮಕ್ಕಳಲ್ಲಿ ಚೈತನ್ಯ, ಲವಲವಿಕೆ ಉಂಟು ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಈ ಕಾರ್ಯಕ್ರಮ ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿ ಆಗಿದೆ. ಇದು ಮಕ್ಕಳ ಜೀವನದಲ್ಲಿ ತಿರುವು ನೀಡಲು ಅವಕಾಶ ನೀಡಬಹುದು. ಮುಂದೆ ಶ್ರೇಷ್ಠ ಚಿತ್ರಕಲಾವಿದರಾಗಿ ಹೊರಹೊಮ್ಮಬಹುದು ಎಂದರು.ಹಲವಾರು ಕನಸುಗಳನ್ನು ಕಾಣುತ್ತಿರುವ ವಿದ್ಯಾರ್ಥಿಗಳ ಜೀವನದಲ್ಲಿ ಯಾವಾಗ ಯಾವ ಬದಲಾವಣೆ ಆಗುತ್ತದೆ ಎಂಬುದು ಗೊತ್ತಿಲ್ಲ. ಸತತ ಪ್ರಯತ್ನ ಮಾಡಿದರೆ ಏನಾದರೂ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಮ್ಮ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದ ರಾಜೇಶ್ವರಿ ಗಾಯಕವಾಡ ಸಾಕ್ಷಿಯಾಗಿ ನಮ್ಮ ಮುಂದೆ ನಿಲ್ಲುತ್ತಾಳೆ ಎಂದರು. ತಮ್ಮ ಮಕ್ಕಳ ಕನಸು ನನಸು ಮಾಡಬೇಕಾದರೆ ಪಾಲಕರು ತಮ್ಮ ಜವಾಬ್ದಾರಿ ಮೀರಿ ಅವರ ಕನಸು ಈಡೇರಿಸಲು ಮುಂದಾಗಬೇಕು. ಅವರಲ್ಲಿರುವ ಕೌಶಲ್ಯ ಗುರುತಿಸಿ ಪ್ರೋತ್ಸಾಹ ನೀಡಬೇಕು. ತಮಗೆ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡರೆ ತಮ್ಮ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ಕನ್ನಡಪ್ರಭ ಬೆಳಗಾವಿ ಆವೃತ್ತಿಯ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡಪ್ರಭ ದಿನಪತ್ರಿಕೆ ಸದಾ ಸಮಾಜಮುಖಿ ಕಾರ್ಯ ಮಾಡಲು ನಿರಂತರ ಶ್ರಮ ಪಡುತ್ತದೆ. ಕೇವಲ ನಮ್ಮ ಕಾರ್ಯ ಸುದ್ದಿಗಾಗಿ ಅಲ್ಲ ಸಮಾಜಕ್ಕಾಗಿ ಅನ್ನುವ ನಿಟ್ಟಿನಲ್ಲಿ ಕನ್ನಡಪ್ರಭ ಕಾರ್ಯ ಪ್ರಯುಕ್ತವಾಗಿದೆ. ನೆರೆ ಪ್ರವಾಹ ಬಂದಾಗ ಸಾಮಾಜಿಕ ಜವಾಬ್ದಾರಿಯನ್ನು ಕನ್ನಡಪ್ರಭ ಮೂಡಿಸಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಗುರುತಿಸಿ ಅವರ ಪ್ರತಿಭೆ ಮತ್ತು ಅವರ ವ್ಯಕ್ತಿತ್ವವನ್ನು ಸಮಾಜಕ್ಕೆ ತೋರಿಸುವಲ್ಲಿ ಈ ಪತ್ರಿಕೆಯ ಪಾತ್ರ ಬಹುಮುಖ್ಯವಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹಜನಪ್ಪ ಅಂತಹ ವ್ಯಕ್ತಿಯನ್ನು ಗುರುತಿಸಿ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿದ್ದು ನಮ್ಮ ಕಾರ್ಯವಾದರೆ ಪದ್ಮಶ್ರೀ ಅನ್ನುವ ಶ್ರೇಷ್ಠ ಪ್ರಶಸ್ತಿಗೆ ಅವರು ಭಾಜನರಾಗಲು ಕನ್ನಡಪ್ರಭ ಮುಖ್ಯ ಸ್ಥಾನವನ್ನ ವಹಿಸಿಕೊಳ್ಳುತ್ತದೆ ಎಂದರು.ಯಾವುದೇ ಒಳ್ಳೆಯ ವಿಷಯ ಕೇವಲ ಭಾಷಣದಲ್ಲಿ ಹೇಳದೇ ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅದಕ್ಕೆ ಒಂದು ಅರ್ಥ ಬರಲು ಸಾಧ್ಯ. ಈ ಚಿತ್ರಕಲೆ ಕೇವಲ ಸ್ಪರ್ಧೆ ಆಗಿಲ್ಲ. ಇದೊಂದು ಸಾಮಾಜಿಕ ಬದ್ಧತೆಯಿಂದ ಕೂಡಿದೆ. ಇದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ.ಡಾ.ಬಾಬುರಾಜೇಂದ್ರ ನಾಯಿಕ, ಖ್ಯಾತ ಮಧುಮೇಹ ತಜ್ಞಜಿಲ್ಲೆಯ ವಿವಿಧ ತಾಲೂಕುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಆ ತಾಲೂಕಿಗೆ ಅಗ್ರಗಣ್ಯರು ನೀವು. ಚಿತ್ರಕಲೆ ಒಂದು ಮಾಧ್ಯಮವಾಗಿ ತೆಗೆದುಕೊಳ್ಳುವ ಮೂಲಕ ನಿಮ್ಮ ಪ್ರತಿಭೆ ಅನಾವರಣಗೊಳಿಸಿದ್ದು ಈ ನಿಟ್ಟಿನಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ವಾಹಿನಿ ಮಾಡುತ್ತಿದೆ.
ವೀರಯ್ಯ ಸಾಲಿಮಠ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ)ಸುದ್ದಿ ಮಾಧ್ಯಮಗಳು ಕೇವಲ ರಾಜಕೀಯ, ದುರ್ಘಟನೆಗಳನ್ನು ಮಾತ್ರ ವರದಿ ಮಾಡುತ್ತೇವೆ ಎಂದು ತಿಳಿದುಕೊಂಡಿದ್ದೆ. ಆದರೆ ಇಂತಹ ಜನಪರ ಕಾರ್ಯ ಕನ್ನಡಪ್ರಭ ದಿನಪತ್ರಿಕೆ ಮಾಡುತ್ತಿರುವುದು ಶ್ಲಾಘನೀಯ.ಎಂ.ಬಿ.ಕುಸನಾಳ, ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಮಕ್ಕಳಲ್ಲಿರುವ ಸೃಜನಶೀಲತೆ ಗುರುತಿಸಬೇಕು. ಮಕ್ಕಳು ಚಿತ್ರಕಲೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು. ಅವರಲ್ಲಿ ಕ್ರಿಯಾಶೀಲತೆ ಇರಬೇಕು. ಒಳಮನಸ್ಸು ಇರಬೇಕು. ಚಿತ್ರ ಭಾವನೆಗಳನ್ನು ತಟ್ಟುವಂತೆ ಇರಬೇಕು. ಚಿತ್ರ ಬರೆಯಲು ತಾಳ್ಮೆಗುಣ ಅಳವಡಿಸಿಕೊಳ್ಳು ವಂತಾಗಬೇಕು. ಅಂದಾಗ ಒಳ್ಳೆಯ ಕಲಾವಿದರಾಗಲು ಸಾಧ್ಯ.
ಎನ್.ಎಂ.ಬಿರಾದಾರ, ಚಾಣಕ್ಯ ಕೋಚಿಂಗ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ ತಮ್ಮ ಪಾಲಕರಿಗೆ, ಶಿಕ್ಷಕರಿಗೆ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಬೇಕು. ಶಿಸ್ತು ಬದ್ಧವಾಗಿ ಇಂತಹ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದಕ್ಕೆ ಪತ್ರಿಕೆಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದ ಅವರು, ಮುಂದೆ ನಮ್ಮ ರೋಟರಿ ಕ್ಲಬ್ ಇಂತಹ ಅವಕಾಶ ನೀಡಿದರೆ ನಮ್ಮ ಸಹಯೋಗ ನೀಡಲು ಸದಾ ಸಿದ್ಧ.ಡಾ.ಅಶೋಕಕುಮಾರ ಜಾಧವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಮತ್ತು ಸಮಾಜಕ್ಕೆ ತೋರಿಸುವ ಕಾರ್ಯ ಪತ್ರಿಕೆಯಿಂದ ನಡೆಯುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್ಲಾ ಮಕ್ಕಳು ಚೆನ್ನಾಗಿ ತಮ್ಮ ಕಲ್ಪನಾ ಶಕ್ತಿಯನ್ನು ಸೃಜನಾತ್ಮಕವಾಗಿ ಬಳಸಿಕೊಂಡಿದ್ದಾರೆ ಆ ಮಕ್ಕಳಿಗೆ ಶುಭವಾಗಲಿ.
ಬ್ರಹ್ಮಾನಂದ ಹಡಗಲಿ ಕನ್ನಡಪ್ರಭ ಬೆಳಗಾವಿ ಆವೃತ್ತಿಯ ಸ್ಥಾನಿಕ ಸಂಪಾದಕ