ಕರಡಿಗುಚ್ಚಮ್ಮ ಅದ್ಧೂರಿ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Mar 24, 2026, 01:15 AM IST
3.ಕರಡಿಗುಚ್ಚಮ್ಮನ ಜಾತೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಎತ್ತಿನಗಾಡಿಯ ಬುರುಜು ಓಡಿಸಿ ಸಂಭ್ರಮಿಸಿದರು. | Kannada Prabha

ಸಾರಾಂಶ

ಕುದೂರು: ಹದಿನಾರು ಹಳ್ಳಿಯ ಜನರು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಕರಡಿಗುಚ್ಚಮ್ಮ ಜಾತ್ರೆಗೆ ಆಗಮಿಸಿ ಸಂಭ್ರಮಿಸುತ್ರಾರೆ. ಊರಿಗೇ ಊರೇ ಉತ್ಸಾಹದಿಂದ ನೆರೆದು ತಮ್ಮ ಭಕ್ತಿ ಸಮರ್ಪಿಸುವ ಜನಸ್ತೋಮವನ್ನು ನೋಡುವುದೆ ಚಂದ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು

ಕುದೂರು: ಹದಿನಾರು ಹಳ್ಳಿಯ ಜನರು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಕರಡಿಗುಚ್ಚಮ್ಮ ಜಾತ್ರೆಗೆ ಆಗಮಿಸಿ ಸಂಭ್ರಮಿಸುತ್ರಾರೆ. ಊರಿಗೇ ಊರೇ ಉತ್ಸಾಹದಿಂದ ನೆರೆದು ತಮ್ಮ ಭಕ್ತಿ ಸಮರ್ಪಿಸುವ ಜನಸ್ತೋಮವನ್ನು ನೋಡುವುದೆ ಚಂದ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ರಾಷ್ಟ್ರೀಯ ಹೆದ್ದಾರಿ 75 ನಾರಸಂದ್ರದ ಕರಡಿಗುಚ್ಚಮ್ಮ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಜಾತ್ರೆಯಲ್ಲಿ ಜನರ ಮನಸುಗಳು ಬೆರೆತು ದ್ವೇಷ ಮರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ನಮ್ಮಗಳ ಜನಪದರು ಜಾತ್ರೆಗಳನ್ನು ಪರಿಚಯಿಸಿದರು. ಪ್ರತಿ ವರ್ಷವೂ ಕರಡಿಗುಚ್ಚಮ್ಮ ದೇವಿಯ ಜಾತ್ರೆ ತನ್ನ ವೈಭವವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದರು.

ಕಳ್ಳಿಪಾಳ್ಯದ ಮುನೇಶ್ವರ ಸ್ವಾಮಿ ದೇವಾಲಯದ ಶ್ರೀರಂಗನಾಥ ಸ್ವಾಮೀಜಿ ಮಾತನಾಡಿ, ಹೊರಗಡೆ ಆಡಂಬರ ಇದ್ದರೂ ಒಳಗೆ ಸರಳವಾಗಿರಬೇಕು. ಭಗವಂತ ಭಕ್ತಿ ಪ್ರಿಯನೇ ಹೊರತು ಹೊಗಳು ಭಟ್ಟಂಗಿಗಳ, ಸಿರಿವಂತಿಕೆ ದೌಲತ್ತಿಗೆ ಒಲಿಯುವವನಲ್ಲ. ಆದ್ದರಿಂದ ಜಾತ್ರೆ ಸಂಭ್ರಮದಿಂದ ಕೂಡಿರಬೇಕೆ ಹೊರತು ಅದು ನಮಗಳಿಗೆ ವಿಲಾಸದಂತೆ ಗೋಚರಿಸಬಾರದು ಎಂದು ಹೇಳಿದರು.

ಪಾಲನಹಳ್ಳೀ ಮಠದ ಶ್ರೀ ಸಿದ್ದರಾಜ ಸ್ವಾಮೀಜಿ ಮಾತನಾಡಿ, ಎತ್ತಿನ ಬಂಡಿಗಳಿಗೆ ಬಣ್ಣಗಳಿಂದ ಸಿಂಗಾರ ಮಾಡಿ ಬುರುಜು ಕಟ್ಟಿಕೊಂಡು ವಯಸ್ಸಿನ ಅಂತರವನ್ನು ಮರೆದು ಕುಣಿದು ಕುಪ್ಪಳಿಸಿ ಆನಂದಿಸುವ ಆನಂದಕ್ಕೆ ಎಷ್ಟು ಬೆಲೆ ಕಟ್ಟಲು ಸಾಧ್ಯವಾಗುತ್ತದೆ ಹೇಳಿ. ಮನುಷ್ಯ ಒಮ್ಮೊಮ್ಮೆ ಹೀಗೆ ಆನಂದದ ದಾರಿ ಹಿಡಿದು ಸಾಗಬೇಕು. ಅಂತಹ ಹಾದಿಗಳು ಜಾತ್ರೆ, ಸಂತೆ, ದೇವಾಲಯ, ಪ್ರಕೃತಿ ಮಡಿಲಿನಲ್ಲಿ ಸಿಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಬುರುಜು ಕಟ್ಟಿದ್ದ ಎತ್ತಿನ ಗಾಡಿಗಳನ್ನು ಓಡಿಸಿ ಸಂಭ್ರಮಿಸಿದರು.

23ಕೆಆರ್ ಎಂಎನ್ 3,4.ಜೆಪಿಜಿ

3.ಕರಡಿಗುಚ್ಚಮ್ಮನ ಜಾತೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಎತ್ತಿನಗಾಡಿಯ ಬುರುಜು ಓಡಿಸಿ ಸಂಭ್ರಮಿಸಿದರು.

4.ಕರಡಿಗುಚ್ಚಮ್ಮ ದೇವಿಯ ಸುಂದರ ಅಲಂಕಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಗಳಿಗೆ ಅನ್ಯಾಯ
ವಾಗಟ ಯೋಗಪುರಿ ವರದರಾಜಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ