ಬಸ್ ಘಟಕದ ಅಭಿವೃದ್ಧಿಗೆ ಕರವೇ ಸ್ವಾಭಿಮಾನಿ ಸೇನೆ ಒತ್ತಾಯ

KannadaprabhaNewsNetwork |  
Published : Dec 31, 2025, 02:45 AM IST
ಮುಂಡಗೋಡ: ಮುಂಡಗೋಡ ಕೆ.ಎಸ್.ಆರ್.ಟಿ.ಸಿ ಬಸ್ ಘಟಕ ಉದ್ಘಾಟನೆಗೊಂಡು ೨ ವರ್ಷ ಕಳೆದರೂ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಅಭಿವೃದ್ದಿಪಡಿಸದೆ ಇರುವ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಸೋಮವಾರ ಮುಂಡಗೋಡ ಗ್ರೇಡ್ ೨ ತಹಸೀಲ್ದಾರ ಜಿ.ಬಿ ಭಟ್ ಅವರ ಮೂಲಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಮುಂಡಗೋಡ ಕೆಎಸ್‌ಆರ್‌ಟಿಸಿ ಬಸ್ ಘಟಕ ಉದ್ಘಾಟನೆಗೊಂಡು ೨ ವರ್ಷ ಕಳೆದರೂ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಅಭಿವೃದ್ಧಿಪಡಿಸದೆ ಇರುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯಿಂದ ಮುಂಡಗೋಡ ಗ್ರೇಡ್-೨ ತಹಸೀಲ್ದಾರ ಮೂಲಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮುಂಡಗೋಡ

ಮುಂಡಗೋಡ ಕೆಎಸ್‌ಆರ್‌ಟಿಸಿ ಬಸ್ ಘಟಕ ಉದ್ಘಾಟನೆಗೊಂಡು ೨ ವರ್ಷ ಕಳೆದರೂ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಅಭಿವೃದ್ಧಿಪಡಿಸದೆ ಇರುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯಿಂದ ಮುಂಡಗೋಡ ಗ್ರೇಡ್-೨ ತಹಸೀಲ್ದಾರ ಮೂಲಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಸುಮಾರು ೨ ವರ್ಷಗಳ ಹಿಂದೆ ಉದ್ಘಾಟನೆಗೊಂಡ ಮುಂಡಗೋಡ ಬಸ್ ಘಟಕ ಇಲಾಖೆಯ ಅಧಿಕಾರಿಗಳ ಸ್ಪಂದನೆ ಸರಿಯಾಗಿ ದೊರಕದೆ ವ್ಯವಸ್ಥಿತ ಸೇವೆ ನೀಡಲು ವಿಫಲವಾಗಿದ್ದು, ಇದರಿಂದ ನೆಪ ಮಾತ್ರಕ್ಕೆ ಬಸ್ ಘಟಕ ನಿರ್ಮಾಣ ಮಾಡಿ ಸರ್ಕಾರಕ್ಕೆ ಹೊರೆ ಹಾಕಿದಂತಾಗಿದೆ. ತಕ್ಷಣ ಘಟಕಕ್ಕೆ ತ್ವರಿತವಾಗಿ ಅಗತ್ಯ ಸೌಲಭ್ಯ ಒದಗಿಸಲು ಮುಂದಾಗಬೇಕಿದೆ.

ಬಸ್ ಘಟಕದ ಆವರಣ ಕಾಂಕ್ರೀಟಿಕರಣಗೊಳ್ಳದೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆಗಾಲದಲ್ಲಂತೂ ಕೊಳಚೆ ಗುಂಡಿಯಂತಾಗುತ್ತದೆ. ಕ್ರೇನ್ ಮೂಲಕ ವಾಹನಗಳನ್ನು ಘಟಕದಿಂದ ಹೊರತರುವ ಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆ ಇಲ್ಲಿಯ ಅವರಣವನ್ನು ಸಂಪೂರ್ಣವಾಗಿ ಕಾಂಕ್ರೀಟಿಕರಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು.

ಘಟಕದಿಂದ ಈಗ ಹಲವು ಮಾರ್ಗಗಳಲ್ಲಿ ಸಂಚರಿಸಲು ಯಲ್ಲಾಪುರ, ಹಾನಗಲ್, ಸಿರಸಿ ಸೇರಿದಂತೆ ಸುತ್ತಮುತ್ತಲ ಘಟಕದ ಸುಮಾರು ೧೧ ಹಳೆಯ ಬಸ್‌ ಒದಗಿಸಲಾಗಿದ್ದು, ಈ ಹಳೆಯ ಬಸ್‌ಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿದ್ದು, ದುರಸ್ತಿಗೆ ಒಳಗಾಗುತ್ತಿವೆ. ಇದರಿಂದ ಪ್ರಯಾಣಿಕರ ಸಂಚಾರ ದುಸ್ತರವಾಗುತ್ತಿದೆ. ಕನಿಷ್ಠ ೨೦ ಹೊಸ ಬಸ್‌ಗಳನ್ನು ಮುಂಡಗೋಡ ಘಟಕಕ್ಕೆ ಒದಗಿಸಬೇಕು.

ಪಟ್ಟಣದ ಬಸ್ ನಿಲ್ದಾಣಕ್ಕೆ ಅವಶ್ಯವಿರುವ ನಿಲ್ದಾಣಾಧಿಕಾರಿ ನೇಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಲ್ಲದೆ, ಬಸ್ ಘಟಕಕ್ಕೆ ಅತೀ ಅವಶ್ಯವಿರುವ ವಾಹನ ನಿರೀಕ್ಷಕರನ್ನು ವಿಳಂಬಕ್ಕೆ ಅವಕಾಶವಿಲ್ಲದಂತೆ ಹುದ್ದೆ ಮಂಜೂರಾತಿಗೆ ಅನುಗುಣವಾಗಿ ನೇಮಿಸಬೇಕು. ಅಲ್ಲದೇ ಮುಂಡಗೋಡ ವಾಹನ ನಿಲ್ದಾಣದಲ್ಲಿರುವ ಶೌಚಾಲಯಗಳ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಗಬ್ಬೆದ್ದು ನಾರುತ್ತಿವೆ. ಹೊಸದಾಗಿ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿರುವ ಮುಂಡಗೋಡ ಸಾರಿಗೆ ಬಸ್ ಘಟಕಕ್ಕೆ ಅಗತ್ಯವಾದ ಅನೂಕೂಲತೆಗಳನ್ನು ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ತಾಲೂಕಿನ ಜನತೆಗೆ ಹಾಗೂ ಪ್ರಯಾಣಿಕರ ನೆರವಿಗೆ ಧಾವಿಸುವಂತೆ ವಿನಂತಿಸಲಾಗಿದೆ.

ಈ ಸಂದರ್ಭ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಜಗದೀಶ ದೈವಜ್ಞ, ಎ.ಎಸ್. ವಾದಿರಾಜ, ರಾಮು ಗೌಳಿ, ವಿರುಪಾಕ್ಷಿ ಸಾಗರ, ಬಸವರಾಜ ಕಾಳೆ, ಈರಪ್ಪ ಕುರುಬರ, ದುರ್ಗಪ್ಪ ಬೋವಿ, ಮಾರುತಿ ಬೋವಿ, ರಾಜೇಶ ಸುಣಗಾರ, ಮಲ್ಲಪ್ಪ ಮಿಶ್ರಿಕೋಟಿ, ಪ್ರಕಾಶ ಕೆರೆಹೊಲ್ದವರ, ಅರುಣ, ಹಜರತಖಾನ ಪಠಾಣ, ರಾಜೇಸಾಬ ಕಾಪೆಂಟರ್ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ