ಕಾರ್ಕಳ: ಪೊಲೀಸ್‌ ಠಾಣೆ, ಸರ್ಕಾರಿ ಶಾಲೆಯಲ್ಲಿ ಪರಿಸರ ದಿನಾಚರಣೆ

KannadaprabhaNewsNetwork |  
Published : Jun 07, 2025, 02:02 AM IST
6ಕರವೇ | Kannada Prabha

ಸಾರಾಂಶ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ಕಾರ್ಕಳ ತಾಲೂಕು ಘಟಕದ ವತಿಯಿಂದ ಪರಿಸರ ದಿನಾಚರಣೆಯ ಆಚರಣೆ ಅಂಗವಾಗಿ ಕಾರ್ಕಳ ಪೊಲೀಸ್ ಠಾಣೆ ಹಾಗೂ ಸರ್ಕಾರಿ ಶಾಲೆಯ ಆವರಣದಲ್ಲಿ ಸಸಿ ಗಿಡಗಳನ್ನು ನೆಡಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ಕಾರ್ಕಳ ತಾಲೂಕು ಘಟಕದ ವತಿಯಿಂದ ಪರಿಸರ ದಿನಾಚರಣೆಯ ಆಚರಣೆ ಅಂಗವಾಗಿ ಕಾರ್ಕಳ ಪೊಲೀಸ್ ಠಾಣೆ ಹಾಗೂ ಸರ್ಕಾರಿ ಶಾಲೆಯ ಆವರಣದಲ್ಲಿ ಸಸಿ ಗಿಡಗಳನ್ನು ನೆಡಲಾಯಿತು. ಕಾರ್ಕಳ ಠಾಣೆಯ ವೃತ್ತ ನಿರೀಕ್ಷಕರು ಮಂಜಪ್ಪ ಹಾಗೂ ಉಪನಿರೀಕ್ಷಕ ಪ್ರಸನ್ನ ಅವರು ಠಾಣೆ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಗಿಡವನ್ನು ನೆಟ್ಟು ಮುಂದೊಂದು ದಿನ ಈ ಗಿಡ ಬೆಳೆದು ಸಾರ್ವಜನಿಕರಿಗೆ ನೆರಳು ಗಾಳಿ ಹಾಗೂ ತಂಪನ್ನು ನೀಡಲಿ ಎಂದು ಆಶಿಸಿದರು. ಸರ್ಕಾರಿ ಶಾಲೆಯ ಆಟದ ಮೈದಾನದ ಆವರಣದಲ್ಲಿ ಅಲ್ಲಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದಲೇ ಸಸಿಗಳನ್ನು ನೆಡುವ ಮೂಲಕ ಅವರಿಗೆ ಪರಿಸರದ ಮಹತ್ವವನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ಕರವೇ ಗೌರವಾಧ್ಯಕ್ಷ ಅನ್ಸಾರ್ ಅಹ್ಮದ್ ಅವರು ಮಾತನಾಡಿ, ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಿಗಿಂತ ಸ್ವಾರ್ಥಿ ಪ್ರಾಣಿ ಎಂದರೆ ಅದು ಮನುಷ್ಯ. ಮನುಷ್ಯ ತನ್ನ ಸ್ವಾರ್ಥಕ್ಕೋಸ್ಕರ ಪ್ರಕೃತಿಯನ್ನು ಹಾಳುಗೆಡುವುತ್ತಿದ್ದಾನೆ. ಆದರೆ ಪ್ರಕೃತಿಯನ್ನು ಹಾಳು ಮಾಡಿ ಲೋಕೋದ್ಧಾರ ಸಾಧ್ಯವಿಲ್ಲ ಎಂಬುದನ್ನು ಬಹುಶಃ ಮನುಷ್ಯ ಮರೆತಿರಬೇಕು. ತಾನು ಹಾಳುಗಡವಿದ ಪ್ರಕೃತಿಯನ್ನು ಸರಿಪಡಿಸಲು ಪರಿಸರ ದಿನಾಚರಣೆಯಂತಹ ಸಂದರ್ಭ ಸಹಕಾರಿಯಾಗಬಲ್ಲದು ಎಂದರು. ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಶಿಕ್ಷಕಿಯರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಕಾರ್ಕಳ ತಾಲೂಕ ಅಧ್ಯಕ್ಷ ಹನೀಫ್ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್. ಸೈಯದ್ ನಿಜಾಮುದ್ದೀನ್, ಜಿಲ್ಲಾ ಮಹಿಳಾ ಅಧ್ಯಕ್ಷ ಜ್ಯೋತಿ ಶೇರಿಗಾರ್, ಶಾಹಿಲ್ ರಹಮತುಲ್ಲಾ, ದೇವಕಿ, ಚಂದ್ರಕಲಾ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ