ಕನ್ನಡಪ್ರಭ ವಾರ್ತೆ ಮೈಸೂರು
ನಗರದ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ 23ನೇ ವಾರ್ಷಿಕೋತ್ಸವದಲ್ಲಿ ಲೇಖಕ ಕಿರಣ್ ಸಿಡ್ಲೇಹಳ್ಳಿ ಅವರ ‘ಭೋಗಮುಕ್ತಕ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕವಿತೆಗಳನ್ನು ಬರೆಯುವ ಸಂದರ್ಭದಲ್ಲಿ ಛಂದಸ್ಸು ಬಿಟ್ಟು ರಗಳೆಗಳ ಸ್ವರೂಪದಲ್ಲಿ ಕವಿತೆ ಬರೆಯಲಾಗಿದೆ. ಲಯ ಇಲ್ಲದಿದ್ದರೆ ಕಾವ್ಯವಾಗುವುದಿಲ್ಲ. ಹೀಗಾಗಿ, ಛಂದೋಬದ್ಧವಾಗಿ, ಲಯಬದ್ಧವಾಗಿ ಸಾಹಿತ್ಯ ಇರಬೇಕು ಎಂದರು.
ಗಮಕಿಗಳು ಪದ್ಯಗಳನ್ನು ಸಂಗೀತಕ್ಕೆ ಅಳವಡಿಸಿಕೊಳ್ಳಬೇಕಾದರೆ ಛಂದಸ್ಸು, ಲಯ ಮುಖ್ಯವಾಗಲಿದೆ. ಒಂದು ವೇಳೆ ಇವರೆರಡು ಇಲ್ಲದಿದ್ದರೆ ಕಷ್ಟಪಟ್ಟು ಸಂಗೀತ ಮಾಡಬೇಕಾಗುತ್ತದೆ. ಕೇಳಲು ಕೂಡ ಚೆನ್ನಾಗಿರುವುದಿಲ್ಲ. ಹೀಗಾಗಿ, ಛಂದೋಬದ್ಧ ಮತ್ತು ಲಯಬದ್ಧವಾಗಿ ಕಾವ್ಯ ರಚಿಸಬೇಕು. ಇಂತಹ ಛಂದೋಬದ್ಧ ಕೃತಿಯನ್ನು ಲೇಖಕ ಕಿರಣ್ ಸಿಡ್ಲೇಹಳ್ಳಿ ರಚಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.ಅದ್ಭುತವಾದ ಅಮೃತ ಸಿಂಚನ
ಭೋಗಮುಕ್ತಕ ಕೃತಿ ಸಾಹಿತ್ಯ ಭಂಡಾರಕ್ಕೆ ಅದ್ಭುತ ಕೊಡುಗೆಯಾಗಿದೆ. ಭಾಷೆ ಸರಳವಾಗಿದ್ದು, ಭಾವ ಮಧುರವಾಗಿದೆ. ಭೋಗ ಷಟ್ಬದಿ ಪುನರುಜ್ಜೀವನಗೊಳಿಸುವ ಕೃತಿಯಾಗಿದೆ. ಇಲ್ಲಿ ಜೀವನ ಮೌಲ್ಯಗಳಿವೆ. ಬದುಕಿನ ದರ್ಶನವಿದೆ. ಸತ್ವ–ತತ್ವವೂ ಅಡಕಗೊಂಡಿದೆ. ಸಾಹಿತ್ಯದ ಸಿರಿವಂತಿಕೆಯೂ ಇದೆ. ತಮ್ಮ ಅನುಭವದಿಂದ ಹೆಕ್ಕಿದ ಎಲ್ಲಾ ಮುತ್ತುಗಳನ್ನು ಕೃತಿಯಲ್ಲಿ ಪೋಣಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.
ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಸ್. ರಾಮಪ್ರಸಾದ್, ಅಧ್ಯಕ್ಷ ಡಾ.ಎಚ್.ವಿ. ನಾಗರಾಜರಾವ್, ಲೇಖಕ ಕಿರಣ್ ಸಿಡ್ಲೇಹಳ್ಳಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಮೊದಲಾದವರು, ಕೃಪಾ ಮಂಜುನಾಥ್ ಇದ್ದರು.
ಕೋಟ್...
- ಡಾ. ಧರಣಿದೇವಿ ಮಾಲಗತ್ತಿ, ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ