ಚಲನಚಿತ್ರ ನಿರ್ದೇಶಕ, ಸಾಹಿತಿ ಅಭಿಮತ । ಕೋಟೆ ಮನೆ ಕಲೋತ್ಸವ 2024 ಕಾರ್ಯಕ್ರಮ । ಮಕ್ಕಳಿಗೆ ಪುಸ್ತಕ ನೀಡಬೇಕು
ಸಾಹಿತ್ಯ ಕ್ಷೇತ್ರಕ್ಕೆ 4 ಸಾವಿರ ವರ್ಷಗಳ ಇತಿಹಾಸವಿದೆ ನಾವು ನೀವು ಮೆಚ್ಚಿ ಆನಂದಿಸುವ ದೃಶ್ಯ ಮಾಧ್ಯಮಕ್ಕೆ 2 ನೂರು ವರ್ಷಗಳ ಇತಿಹಾಸವಿಲ್ಲ ದೃಶ್ಯ ಮಾಧ್ಯಮದ ಅತಿಯಾದ ವ್ಯಸನದಿಂದ ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ದೂರವಿಡಬೇಕು ಎಂದು ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ದೃಶ್ಯ ಮಾಧ್ಯಮಕ್ಕೆ 2 ನೂರು ವರ್ಷಗಳ ಇತಿಹಾಸವಿಲ್ಲ ದೃಶ್ಯ ಮಾಧ್ಯಮದ ಅತಿಯಾದ ವ್ಯಸನದಿಂದ ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ದೂರವಿಡಬೇಕು ಎಂದು ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಸನದ ನುಗ್ಗೇಹಳ್ಳಿಯಲ್ಲಿ ಮಾತನಾಡಿದರು. ಹೋಬಳಿಯ ಹೊನ್ನ ಮಾರನಹಳ್ಳಿ ಬಳಿ ಇರುವ ಕೋಟೆಮನೆ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ಕೋಟೆ ಮನೆ ಕಲೋತ್ಸವ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪೋಷಕರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮನೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತರಲು ಎಷ್ಟು ಆಸಕ್ತಿ ವಹಿಸುತ್ತಾರೆಯೋ ಅದೇ ರೀತಿ ಮನೆಗೆ ಒಂದು ಕನ್ನಡ ದಿನಪತ್ರಿಕೆ ತರಿಸಬೇಕು. ಒಂದು ಪುಟ್ಟ ಗ್ರಂಥಾಲಯವನ್ನು ತೆರೆದು ಮಕ್ಕಳು ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಿದರೆ ಅವರಲ್ಲಿ ಜ್ಞಾನಾರ್ಜನೆಯ ಜತೆಗೆ ಮಾನವೀಯ ಮೌಲ್ಯಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.
ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯವನ್ನು ಸ್ವಚ್ಛಗೊಳಿಸುವುದು ತಪ್ಪು ಆದರೆ ಅದೇ ಶಾಲೆ ಆವರಣದಲ್ಲಿ ಗಿಡಮರಗಳನ್ನು ಬೆಳೆಸುವುದರಿಂದ ಮಕ್ಕಳಿಗೆ ಶುದ್ಧ ಗಾಳಿಯ ಜೊತೆಗೆ ಸಿಹಿಯಾದ ಹಣ್ಣುಗಳು ಕೂಡ ಸಿಗುತ್ತವೆ ಎಲ್ಲಾ ಕೆಲಸದಲ್ಲೂ ತಪ್ಪು ಹುಡುಕುವುದನ್ನು ನಾವು ಬಿಡಬೇಕು ಎಂದರು.
ಪ್ರೊಫೆಸರ್ ಲೋಲಾಕ್ಷಿ ಮತ್ತು ಶಾಸಕ ಸಿಎನ್ ಬಾಲಕೃಷ್ಣ ಅವರನ್ನು ಕೋಟೆಮನೆ ಎಜುಕೇಶನ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಪ್ರೊಫೆಸರ್ ಲೋಲಾಕ್ಷಿ, ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಗಂಗಾಧರೇಗೌಡ, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದೊರೆಸ್ವಾಮಿ, ಬೆಂಗಳೂರು ಇಎಸ್ಐ ಆಸ್ಪತ್ರೆ ಮೆಡಿಕಲ್ ಆಫೀಸರ್ ಡಾ. ಎಚ್ ಬಿ ನಾಗೇಶ್, ಕೋಟೆಮನೆ ಇಂಟರ್ ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ಮಧು ಕುಮಾರ್, ಪ್ರಾಂಶುಪಾಲೆ ಪವಿತ್ರಾ ಮಧು ಕುಮಾರ್, ಉದ್ಯಮಿ ಸಿಬಿ ಶಂಕರ್, ಲಕ್ಷ್ಮಣ್, ಗೌಡಕಿ ಮಂಜು ಹಾಜರಿದ್ದರು.ಕೋಟೆ ಮನೆ ಕಲೋತ್ಸವ 2024 ಕಾರ್ಯಕ್ರಮವದಲ್ಲಿ ಸಾಹಿತಿ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.