ಹಳಿಯಾಳ: ಹಿಂದೂ ಸಮಾಜದವರಿಗೆ ಸ್ಮಶಾನ ಭೂಮಿಯನ್ನು ಮಂಜೂರು ಮಾಡಲು ಆಗ್ರಹಿಸಿ ಕೆಸರೊಳ್ಳಿ ಗ್ರಾಮಸ್ಥರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಭೂಮಿಯ ಸಮಸ್ಯೆಯನ್ನು ಬಗೆಹರಿಸಲು ತಾಲೂಕಾಡಳಿತಕ್ಕೆ ಸೆ. 23ರ ವರೆಗೆ ಗಡುವು ನೀಡಿದರು.
ಕೆಸರೊಳ್ಳಿ ಗ್ರಾಮದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಸಮಾಜದವರು ಇದ್ದು, ಅಧಿಕಾರಿಗಳ ಹೇಳಿಕೆಯಂತೆ ಸಾರ್ವಜನಿಕ ಸ್ಮಶಾನ ಬಳಸಲು ಹೋದರೆ ಗಲಭೆ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಹಿಂದೂಗಳಿಗಾಗಿ ಬಳಸಲು ಈ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಸ್ಮಶಾನ ಭೂಮಿ ಮೂಲ ಅವಶ್ಯಕತೆಯಾಗಿದೆ. ಹೀಗಿರುವಾಗ ತಾಲೂಕಾಡಳಿತ ಕೆಸರೊಳ್ಳಿ ಗ್ರಾಮಸ್ಥರ ಅವಶ್ಯಕ ಬೇಡಿಕೆಯ ಬಗ್ಗೆ ಅಸಡ್ಡೆ ತೋರದೇ ಬೇಗನೆ ಸಮಸ್ಯೆ ಬಗೆಹರಿಸಬೇಕು. ಅದಕ್ಕಾಗಿ ಹಿಂದೂ ಸ್ಮಶಾನ ಜಮೀನಿನ ಸಮಸ್ಯೆ ಬಗೆಹರಿಸಲು ತಾಲೂಕಾಡಳಿತಕ್ಕೆ ಸೆ. 23ರ ವರೆಗೆ ಗಡುವು ನೀಡುತ್ತಿದ್ದೇವೆ. ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಗ್ರಾಮದ ಹಿರಿಯರಾದ ಗಿರಿಜಾರಾಮ ಅಳವಣಕರ, ವಿಠ್ಠಲ ಕೆಸರೇಕರ, ಪರಶುರಾಮ ಕರಗಸ್ಕರ್, ಡೋಂಗ್ರು ಜುವೇಕರ, ಆನಂದ ಗುಡಗೇರಿ, ರಾಘವೇಂದ್ರ ನಾಯ್ಕ, ಸುರೇಶ ಶಹಾಪುರಕರ, ಮಂಜುನಾಥ ಕೆಸರೆಕರ, ಸಿದ್ದರಾಮ ಶೇಡಿ, ಅಜೋಬಾ ಕೇಸರೆಕರ, ಸೋಮನಿಂಗ ಮೋರಿ, ಫಕೀರಪ್ಪ ಕುರುಬುರ, ನರಸಿಂಹ ಮಡಿವಾಳ, ರಮೇಶ ಗುಡಗೇರಿ ಹಾಗೂ ಇತರರು ಇದ್ದರು ಸಿಪಿಐ ಜೈಪಾಲ ಪಾಟೀಲ ಹಾಗೂ ಪಿಎಸ್ಐ ವಿನೋದ ರೆಡ್ಡಿಯವರ ಮುಂದಾಳತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.