ಕೆಜಿಎಫ್‌ ನಗರ ಸ್ವಚ್ಛತೆಗೆ ಅ.2ರ ಗಡುವು

KannadaprabhaNewsNetwork |  
Published : Sep 15, 2025, 01:00 AM IST
14ಕೆಜಿಎಫ್‌1 | Kannada Prabha

ಸಾರಾಂಶ

ಸಣ್ಣ ಸಣ್ಣ ನಗರಗಳಲ್ಲಿ ನಾವು ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಏಕೇ ಸಾಧ್ಯವಾಗುತ್ತಿಲ್ಲ, ಅಧಿಕಾರಿಗಳು ಜನರೊಂದಿಗೆ ಬೆರೆತು ಉತ್ತಮ ಕೆಲಸವನ್ನು ಮಾಡಬೇಕು. ನಗರದ ಪಾರ್ಕ್‌ಗಳು, ರಸ್ತೆಗಳು ಚರಂಡಿಗಳನ್ನು ಸ್ವಚ್ಛ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡುವುದು ನಮ್ಮಲ್ಲರ ಕರ್ತವ್ಯ.

ಕನ್ನಡಪ್ರಭ ವಾರ್ತೆ ಕೆಜಿಎಫ್ನಾವು ಎಲ್ಲರೂ ವಿದ್ಯಾವಂತರೂ, ಸರಕಾರ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದೆ, ನಾವು ಜನರೊಂದಿಗೆ ಬೆರತು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡಲು ಪಣ ತೊಡಬೇಕು. ಅಕ್ಟೋಬರ್‌ ೨ರೊಳಗೆ ನಗರದಲ್ಲಿ ಎಲ್ಲಿಯೂ ಕಸದ ಬ್ಲಾಕ್ ಸ್ಪಾಟ್ ಕಾಣಬಾರದು ಎಂದು ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್. ರವಿ ಸೂಚಿಸಿದರು.

ನಗರದಲ್ಲಿ ಜಿಲ್ಲಾಧಿಕಾರಿಗಳು ಭಾನುವಾರ ಕೈಗೊಂಡ ಸೈಕಲ್‌ ಜಾಥಾ ಸಂದರ್ಭದಲ್ಲಿ ರಾಶಿರಾಶಿ ಕಸ, ಫುಟ್‌ಪಾತ್‌ಗಳ ಒತ್ತವರಿ, ಪಾರ್ಕ್‌ಗಳಲ್ಲಿ ಗಿಡಗಂಟಿ, ಪ್ಲಾಸ್ಟಿಕ್ ತ್ಯಾಜ್ಯ, ನಗರಸಭೆ ಬಸ್ ನಿಲ್ದಾಣದಲ್ಲಿ ಬಾರ್‌ ಇಷ್ಟೆಲ್ಲಾ ಸಮಸ್ಯೆಗಳು ಕಂಡುಬಂದವು.

ಸ್ವಚ್ಛತೆ ಎಲ್ಲರ ಕರ್ತವ್ಯ

ಸಣ್ಣ ಸಣ್ಣ ನಗರಗಳಲ್ಲಿ ನಾವು ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಏಕೇ ಸಾಧ್ಯವಾಗುತ್ತಿಲ್ಲ, ಅಧಿಕಾರಿಗಳು ಜನರೊಂದಿಗೆ ಬೆರೆತು ಉತ್ತಮ ಕೆಲಸವನ್ನು ಮಾಡಬೇಕು. ನಗರದ ಪಾರ್ಕ್‌ಗಳು, ರಸ್ತೆಗಳು ಚರಂಡಿಗಳನ್ನು ಸ್ವಚ್ಛ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡುವುದು ನಮ್ಮಲ್ಲರ ಕರ್ತವ್ಯ ಎಂದು ಹೇಳಿದರು.ಬಾರ್‌ ಕಂಡು ದಂಗಾದ ಡಿಸಿ

ಏನಪ್ಪ ಎಲ್ಲಿಯಾದರೂ ಬಸ್ ನಿಲ್ದಾಣಗಳಲ್ಲಿ ಬಾರ್‌ಗೆ ಅನುಮತಿ ನೀಡಿರುವ ಊದಾಹರಣೆ ಇದೆಯೇ, ನಗರಸಭೆ ಮಳಿಗೆಗಳಲ್ಲಿ ಬಾರ್‌ಗೆ ಅನುಮತಿ ನೀಡಲು ಕಾನೂನು ಇದೆಯೇ ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು, ಕೂಡಲೇ ಬಾರ್‌ಗಳನ್ನು ತೆರವುಗೊಳಿಸಬೇಕು ನಾನು ಅಬಕಾರಿ ಇಲಾಖೆಯ ಡಿಸಿ ಜತೆ ಮಾತನಾಡುತ್ತೆನೆ ಎಂದರು. ಏನಮ್ಮ ನಿಮ್ಮ ಮನೆಯ ಮುಂದೆ ಬೆಳಿಗ್ಗೆ ಎದ್ದು ಕಸವನ್ನು ನೋಡಿದರೆ ನಿಮಗೆ ಏನು ಅನಿಸುತ್ತದೆ, ಹಾಗೇ ತಾನೇ ಸಾರ್ವಜನಿಕರ ಮನೆಗಳ ಮುಂದೆ ಕಸವನ್ನು ತಂದು ಬ್ಲಾಕ್ ಸ್ಪಾಟ್ ಮಾಡುತ್ತಿರುವುದು ನಿಮ್ಮ ಕಾಣಸಲಿಲ್ಲವೇ, ನೀವು ಏನು ಕೆಲಸ ಮಾಡುತ್ತಿದ್ದೀರಿ, ಬ್ಲಾಕ್ ಸ್ಪಾಟ್ ಜಾಗದಲ್ಲಿ ಸಿಸಿ ಕ್ಯಾಮೆರಾ ಏಕೆ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪಟ್‌ಪಾತ್‌ನಲ್ಲಿ ಕಟ್ಟಡ ತ್ಯಾಜ್ಯನಗರದ ಪ್ರಮುಖ ಗೀತಾರಸ್ತೆ, ಪಿಚ್ಚರ್ಡ್‌ ರಸ್ತೆಯ ಪುಟ್‌ಪಾತ್‌ನಲ್ಲಿ ಮನೆ ಮತ್ತು ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಇಟ್ಟಿಗೆ, ಮರಳು, ತಂದು ಸಾರ್ವಜನಿಕರು ಓಡಾಡುವ ಪುಟ್‌ಪಾತ್‌ನಲ್ಲಿ ಸುರಿದಿರುವುದನ್ನು ಕಂಡು ಸಾರ್ವಜನಿಕರು ಎಲ್ಲಿ ನಡೆಯಬೇಕು, ರಸ್ತೆಯಲ್ಲಿ ನಡೆಯ ಬೇಕೇ, ಕೂಡಲೇ ದಂಡವನ್ನು ಹಾಕಿ ಪುಟ್‌ಪಾತ್‌ನಲ್ಲಿರುವ ಇಟ್ಟಿಗೆ ಮರಳನ್ನು ತರವುಗೊಳಿಸಲು ಜಿಲ್ಲಾಧಿಕಾರಿ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸುರಕ್ಷತೆ ಇಲ್ಲದ ಟ್ರಾನ್ಸ್‌ಫಾರ್ಮರ್‌ ನಗರದ ಪ್ರಮುಖ ರಸ್ತೆಗಳಲ್ಲಿರುವ ವಿದ್ಯತ್ ಟ್ರಾನ್ಸ್‌ಫಾರ್ಮರ್‌ಗಳಿಗೆ ತಂತಿ ಬೇಲಿ ನಿರ್ಮಿಸಲು ಜಿಲ್ಲಾಧಿಕಾರಿಗೆ ಸಾರ್ವಜನಿಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿ, ಬೆಸ್ಕಾಂ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಕೂಡಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.ಎಂ.ಜಿ ಮಾರುಕಟ್ಟೆಯಲ್ಲಿ ಪುಟ್‌ಪಾತ್ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಮುಕ್ತ ಓಡಾಟಕ್ಕೆ ಅನೂಕೂಲ ಮಾಡಿಕೊಡಿ, ಮಾರುಕಟ್ಟೆಯಲ್ಲಿ ಬರುವ ಬಾಡಿಗೆಯಿಂದ ಶೇ.೨೦ ರಷ್ಟು ಹಣವನ್ನು ಸಾರ್ವಜನಿಕರ ಮೂಲ ಸೌಕರ್ಯ ಕಲ್ಪಿಸುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಇಂದಿರಗಾAಧಿ, ಸ್ಥಾಯಿ ಸಮಿತಿ ಅಆಧ್ಯಕ್ಷರಾದ ವಳ್ಳಲ್ ಮುನಿಸ್ವಾಮಿ, ನಗರಸಭೆ ಸದಸ್ಯರಾದ ಕರಣಾಕರನ್, ಮಾಣಿಕ್ಯಂ, ಕೆಜಿಎಫ್ ತಹಸೀಲ್ದಾರ್ ಭರತ್, ಪಿ.ಡಿ.ಅಂಬಿಕಾ, ಇಇ ಶ್ರೀನಿವಾಸ್, ಎಇ ಗಂಗಾಧರ್, ನಗರಸಭೆ ವ್ಯವಸ್ಥಾಪಕ ಶಶಿಕುಮಾರ್, ಜಯರಾಮ್, ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ನರಸಿಂಹಮೂರ್ತಿ ಹಾಗೂ ಇನ್ನಿತರ ಅಧಿಕಾರಿಗಳು ಸೈಕಲ್ ಜಾಥದಲ್ಲಿ ಭಾಗವಹಿಸಿದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ