ಕನ್ನಡಪ್ರಭ ವಾರ್ತೆ ತುರುವೇಕೆರೆ
ಗ್ರಾಮಸ್ಥರು ನಡೆಸಿದ ರಾಜೀ ಸಂಧಾನದಲ್ಲಿ ಮರಗಳನ್ನು ಬೆಳೆಸಿದ್ದಕ್ಕಾಗಿ ಒಂದಿಷ್ಟು ಹಣದ ರೂಪದಲ್ಲಿ ಪರಿಹಾರ ಕೊಡಿಸಲು ಪ್ರಯತ್ನಿಸಿದ್ದಾರೆ. ಆದರೆ ಸಿದ್ದಗಂಗಮ್ಮ ೩೦ ವರ್ಷಗಳಿಂದ ನನ್ನ ಜಮೀನನ್ನು ಅನುಭವಿಸಿದ್ದಾರೆ. ಅದರ ಫಲವನ್ನೂ ಸಹ ಉಂಡಿದ್ದಾರೆ. ಅಲ್ಲದೇ ನನಗೆ ಜಮೀನಿನ ಹಕ್ಕು ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಜಮೀನಿನ ಹಕ್ಕನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದ ವೇಳೆ ನೀನು ನೆಟ್ಟಿರುವ ತೆಂಗಿನ ಮರಗಳನ್ನು ಕಡಿದು ಕೋ ನನಗೇನು ಎಂದು ಸಿದ್ದಗಂಗಮ್ಮ ಹೇಳಿದರು ಎಂದು ತಿಳಿದುಬಂದಿದೆ. ಇದರಿಂದ ಆಕ್ರೋಶಗೊಂಡ ಕಾಳೇಗೌಡರ ಮಕ್ಕಳಾದ ಉಮೇಶ ಮತ್ತು ರಾಜು ಒತ್ತುವರಿಯಾಗಿದ್ದ ಜಮೀನಿನಲ್ಲಿ ಬೆಳೆಸಿದ್ದ ಸುಮಾರು ೪೨ ತೆಂಗಿನ ಮರಗಳನ್ನು ತಾವೇ ಕಡಿದು ಹಾಕಿದರು ಎಂದು ತಿಳಿದುಬಂದಿದೆ. ದಾಖಲೆಗಳ ಪ್ರಕಾರ ತನ್ನದಾದ ಜಮೀನಿನಲ್ಲಿ ಕಡಿದ ತೆಂಗಿನ ಮರಗಳನ್ನು ತಬ್ಬಿಕೊಂಡು. ಕೈಯಲ್ಲಿ ಮುಟ್ಟಿ ಸಿದ್ದಗಂಗಮ್ಮ ಕಣ್ಣೀರಿಡುವ ದೃಶ್ಯ ವೈರಲ್ ಆಗಿದೆ. ಸಿದ್ದಗಂಗಮ್ಮ ಗೋಳಿಡುವ ದೃಶ್ಯ ಎಂತಹವರ ಎದೆಯನ್ನೂ ಕ್ಷಣಕಾಲ ಚಡಪಡಿಸುವಂತೆ ಮಾಡುತ್ತದೆ.
ದೂರು: ಅಧಿಕೃತವಾಗಿ ತಮ್ಮ ಹೆಸರಿನಲ್ಲಿರುವ ಜಮೀನಿನಲ್ಲಿ ಬೆಳೆಯಲಾಗಿದ್ದ ತೆಂಗಿನ ಮರಗಳನ್ನು ಕಾಳೇಗೌಡರ ಮಕ್ಕಳಾದ ಉಮೇಶ್ ಮತ್ತು ರಾಜು ಎಂಬುವವರು ಕಡಿದು ಹಾಕಿದ್ದಾರೆ. ಕೇಳಲು ಹೋಗಿದ್ದ ಸಂದರ್ಭದಲ್ಲಿ ನನ್ನ ಅಳಿಯ ಹೊನ್ನಪ್ಪ ಮತ್ತು ನನ್ನ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾದರು ಎಂದು ದಂಡಿನಶಿವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕ್ರಮಕ್ಕೆ ಆಗ್ರಹ : ದಂಡಿನಶಿವರ ಪೋಲಿಸರು ಮರಗಳನ್ನು ಕಡಿದಿರುವ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿ ೪೨ ತೆಂಗಿನಮರಗಳನ್ನು ಕಡಿದಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದಾರೆ. ಸೂಕ್ತ ಪರಿಹಾರವನ್ನೂ ಸಹ ನೀಡಬೇಕೆಂದು ಆಗ್ರಹಿಸಿದ್ದಾರೆ.