ವಿಶೇಷ ವರದಿ
ನಾಪೋಕ್ಲು ಚೀಯಕಪೂವಂಡ ಕುಟುಂಬ ಐದನೇ ವರ್ಷದ ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆಯ ಸಾರಥ್ಯವಹಿಸಿದ್ದು ಜಿದ್ದಾಜಿದ್ದಿನ ಪೈಪೋಟಿಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೈದಾನ ಸಜ್ಜುಗೊಳಿಸುವ ಅಂತಿಮ ಹಂತದ ಕಾರ್ಯಗಳು ಬುಧವಾರ ನಡೆದವು. ಮೈದಾನದ ಸಿದ್ಧತೆ, ಮಾರ್ಕಿಂಗ್, ಶಾಮಿಯಾನ ಅಳವಡಿಕೆ ಕಾರ್ಯಗಳು ನಡೆದವು.
ಕೊಡವ ಕುಟುಂಬಗಳ ನಡುವೆ ಚೇನಂಡ ಕಪ್ ಹಾಕಿ ಉತ್ಸವ ಇಲ್ಲಿನ ಜನರಲ್ ಕೆ.ಎಸ್..ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಕ್ರೀಡಾ ಪ್ರೇಮಿಗಳ ಮನಸೆಳೆಯುತ್ತಿದೆ. ಇದೀಗ ಚೀಯಕಪೂವಂಡ ಕುಟುಂಬದ ವತಿಯಿಂದ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆಯು ಅಪಾರ ಸಂಖ್ಯೆಯ ಕ್ರೀಡಾ ಪ್ರೇಮಿಗಳ ಮನಸೂರೆಗೊಳ್ಳಲಿದೆ.ಆರಂಭದ ವರ್ಷದಲ್ಲಿ ಪೊನ್ನೋಲತಂಡ ಕುಟುಂಬಸ್ಥರು ಈ ಸ್ಪರ್ಧೆಗೆ ಚಾಲನೆ ನೀಡಿದರು. ತೀವ್ರ ಹೋರಾಟದ ರೋಚಕ ಹಗ್ಗ ಜಗ್ಗಾಟ ಸ್ಪರ್ಧೆಗೆ ಕ್ರೀಡಾ ಮನೋಭಾವದ ಜನಾಂಗದವರು ಇತರ ಕ್ರೀಡೆಗಳಂತೆ ಸಹಕಾರ ನೀಡಿದ್ದರು. ಎರಡನೇ ವರ್ಷದಿಂದ ಕೇರ್ ಬಲಿ ನಮ್ಮೆ ಮತ್ತಷ್ಟು ಜನಪ್ರಿಯತೆಗೆ ಸಾಕ್ಷಿಯಾಯಿತು. ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಸಹಕಾರದೊಂದಿಗೆ ವಿವಿಧ ಕುಟುಂಬಗಳು ಕ್ರೀಡಾಕೂಟ ಆಚರಿಸಲು ಮುಂದೆ ಬಂದವು. ಆರಂಭದ ವರ್ಷದಲ್ಲಿ 40 ಕುಟುಂಬಗಳು ಪಾಲ್ಗೊಂಡಿದ್ದವು. ನಂತರ 2023ರಲ್ಲಿ ಟಿ-ಶೆಟ್ಟಿಗೇರಿಯಲ್ಲಿ ನಡೆದ ಚಟ್ಟಂಗಡ ಕೇರ್ಬಲಿ ಉತ್ಸವದಲ್ಲಿ 171,
ಈ ಬಾರಿ ವಿಶೇಷವಾಗಿ 16 ವಯೋಮಿತಿಯ ಒಳಗಿನ ಮಕ್ಕಳಿಗೆ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದ್ದು ಇದರಲ್ಲಿ 22 ತಂಡಗಳು ಪಾಲ್ಗೊಂಡಿವೆ. ಪುರುಷರ ವಿಭಾಗದಲ್ಲಿ 189 ಕುಟುಂಬ ಹಾಗೂ ಮಹಿಳಾ ವಿಭಾಗದಲ್ಲಿ 85 ತಂಡಗಳು ಪಾಲ್ಗೊಳ್ಳಲು ನೋಂದಾಯಿಸಿಕೊಂಡಿವೆ ಎಂದು ಅವರು ಮಾಹಿತಿ ನೀಡಿದರು.
ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆ ಸಮಾರಂಭವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಕರ್ನಾಟಕದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ, ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಸೋಮಯ್ಯ, ಕೆಪಿಎಸ್ ಶಾಲೆಯ ಪ್ರಾಂಶುಪಾಲರಾದ ಮೇದುರವಿಶಾಲ್, ಕಾಫಿ ಬೆಳೆಗಾರ ಬೊಳ್ಳಚೆಟ್ಟಿರ ಸುರೇಶ್ ಪಾಲ್ಗೊಳ್ಳುವರು.
.......ದಾಖಲೆ ನಿರ್ಮಾಣಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆ ಈ ಬಾರಿ ಭಾರತೀಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಕಿರಣ್ ಪೊನ್ನಪ್ಪ ತಿಳಿಸಿದ್ದಾರೆ. ಕಳೆದ ವರ್ಷ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿತ್ತು. ವೈಯಕ್ತಿಕ ಸಾಧನೆಗಾಗಿ ಅಕಾಡೆಮಿ ಹಾಗೂ ಕಿರಣ್ ಪೊನ್ನಪ್ಪ ಅವರಿಗೆ ಭಾರತೀಯ ಬುಕ್ ಆಫ್ ರೆಕಾರ್ಡ್ಸ್ ಗೌರವ ನೀಡಿದ್ದು ಈ ಬಾರಿ ಅಧಿಕ ಸಂಖ್ಯೆಯ ತಂಡಗಳು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು ಚೀಯಕಪೂವಂಡ ಕೇರ್ ಬಲಿ ನಮ್ಮೆ ಭಾರತೀಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಲಿದೆ ಎಂದು ಕಿರಣ್ ಪೊನ್ನಪ್ಪ ತಿಳಿಸಿದರು.