ಕನ್ನಡಪ್ರಭ ವಾರ್ತೆ ಕಲಬುರಗಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಕೋಟನೂರ್ ಅಂಬೇಡ್ಕರ್ ಪ್ರತಿಮೆ ಅಮಾನ ಪ್ರಕರಣಕ್ಕೂ ಮಗೂ ಸಂಬಂಧವೇ ಇಲ್ಲ. ಆ ದಿನ ತಾವು ಕಲಬುರಗಿಯಿಂದ ರಾತ್ರಿ ಜೇವರ್ಗಿ ಮಾರ್ಗವಾಗಿ ಆಂದೋಲಾಕ್ಕೆ ಹೋಗಿದ್ದನ್ನೇ ಬಂಡವಾಳ ಮಾಡಿಕೊಂಡು ಈ ರೀತಿ ಸಂಚು ರೂಪಿಸಲಾಗಿದೆ. ಇದಕ್ಕೆ ಪ್ರಕರಣದ ತನಿಖಾಧಿಕಾರಿ ರಾಜಣ್ಣ ಕಾರಣ ಎಂದು ದೂರಿದರು.
ತಾವು ಈಚೆಗೆ ಕೋಟನೂರ್ನಲ್ಲಿ ನಡೆದ ದಾಂಧಲೆಯಲ್ಲಿ ಹಲ್ಲೆಗೊಳಗಾಗಿರುವ ಸಂಗಮೇಶ ಪಾಟೀಲರ ಮನೆಗೆ ಪ್ರಮೋದ ಮುತಾಲಿಕ ಹಾಗೂ ಗಂಗಾಧರ ಕುಲಕರ್ಣಿಯವರೊಂದಿಗೆ ಹೋದಾಗ ಸಂಗಮೇಶ ಪಾಟೀಲರೇ ಈ ಸಂಗತಿ ಬಾಯಿ ಬಿಟ್ಟಿದ್ದಾರೆ. ಸಂಗಮೇಶ ಹೇಳಿಕೆಯ ವಿಡಿಯೋ ಸಾಕ್ಷಿ ತಮ್ಮ ಬಳಿ ಇದೆ. ಅದನ್ನು ಡಿಜಿಪಿಯವರಿಗೂ ಪತ್ರದ ಜೊತೆ ಲಗತ್ತಿಸಲಾಗಿದೆ ಎಂದರು.ಅಂಬೇಡ್ಕರ್ ಅಪಮಾನ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ರಾಜಣ್ಣ ಸಂಗಮೇಶರನ್ನು ಬಂಧಿಸಿ ವಿಚಾಣೆಗೊಳಪಡಿಸಿದ್ದರು, ಆಗ ಅಪಮಾನ ಪ್ರಕರಣದ ಹಿಂದೆ ಆಂದೋಲಾ ಸ್ವಾಮೀಜಿ ಕುಮ್ಮಕ್ಕಿದೆ ಎಂದು ಹೇಳುವಂತೆ ಆಗ್ರಹಿಸಿ ವಿಪರೀತ ದೈಹಿಕ, ಮಾನಸಿಕ ಹಿಂಸೆ ಕೊಟ್ಟಿದ್ದಾರೆ. ಮಹಾ ನಾಯಕರ ಪುತ್ಥಳಿ ಅಪಮಾನ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಿ ಸಮಾಜದಲ್ಲಿ ಇನ್ನಷ್ಟು ಅಶಾಂತಿ ಹುಟ್ಟು ಹಾಕಲು ಪೊಲೀಸ್ ಅಧಿಕಾರಿ ಸಂಚು ರೂಪಿಸಿರೋದು ಆಘಾತಕಾರಿ ಸಂಗತಿ ಎಂದರು.
ಜ.20ರಿಂದ ಇಲ್ಲಿಯವರೆಗೂ ಎಸಿಪಿ ರಾಜಣ್ಣನವರ ಮೋಬೈಲ್ನ ಸಿಡಿಆರ್ ದಾಕಲೆ ತೆರೆದು ನೋಡಲಿ. ಅವರು ಯಾರನ್ನು ಸಂಪರ್ಕಿಸಿದ್ದಾರೆ? ಯಾತಕ್ಕಾಗಿ ಸಂಪರ್ಕಿಸಿದ್ದಾರೆಂದು ಗೊತ್ತಾಗುತ್ತದೆ. ಇವರೆಲ್ಲ ಹೀಗೆ ವರ್ತಿಸಲು ಇಂವರ ಹಿಂದೆ ಚಾರ್ಜ್ ಮಿನಿಸ್ಟರ್ ಬೆಂಬಲವಿದೆ. ಅದಕ್ಕೇ ಇಂತಹವರಿಗೆ ಏನೂ ಆಗುತ್ತಿಲ್ಲ. ಕಾನೂನು ದುರ್ಬಳಕೆಯಾಗುತ್ತಿದೆ. ಹಿಂದು ಕಾರ್ಯಕರ್ತರನ್ನು ಹೀಗೆ ಪ್ರಕರಣಗಳಲ್ಲಿ ಸಿಲುಕಿಸುವ ಹುನ್ನಾರ ಅಪಾಯಕಾರಿ ಎಂದು ಆಂದೋಲಾ ಶ್ರೀಗಳು ಕಿಡಿ ಕಾರಿದರು.
ಕಲಬುರಗಿ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿರುವ ಸಂಚಾರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಭಾರತಿ ಎಂಬುವವರು ಕರ್ತವ್ಯದ ಮೇಲಿದ್ದಾಗ, ಸಂಚಾರ ನಿಯಮಗಳ ಉಲ್ಲಂಘನೆ ವಿಚಾರದಲ್ಲಿ ವಾಹನ ಸವಾರರಿಗೆ ಪತ್ತೆ ಹಚ್ಚಿ ದಂಡ ಹಾಕಲಿ, ನಮ್ಮದೇನು ಆಕ್ಷೇಪವಿಲ್ಲ. ಆದರೆ ಈ ಮಹಿಳಾ ಅಧಿಕಾರಿ ಯಾರನ್ನೇ ಹಿಡಿದರೂ ಮೊದಲು ಸೊಂಟದ ಕೆಳಗಿನ ಭಾಷೆಗಳನ್ನೇ ಬಳಸಿ ಸಾರ್ವಜನಿಕವಾಗಿ ಜರಿಯುತ್ತಾರೆ. ಇದೆಷ್ಟು ಸರಿ? ಪೊಲೀಸರ ಯಾವ ಕಾನೂನಲ್ಲಿ ಹೀಗೆ ನಿಂದಿಸಬೇಕೆಂದು ಇದೆ? ಎಂದು ಆಂದೋಲಾ ಶ್ರೀ ಪ್ರಶ್ನಿಸಿದರು.