ಕನ್ನಡಪ್ರಭ ವಾರ್ತೆ ಹುಣಸೂರು
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಕೆಆರ್.ಐಡಿಎಲ್ ಕೈಗೊಂಡಿರುವ ಕಾಮಗಾರಿ ವರದಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ನಿಮಗೆ ನಿರ್ವಹಿಸಿದ ಕಾಮಗಾರಿಯನ್ನು 10 ರಿಂದ 12 ವರ್ಷಗಳಾದರೂ ಸಂಪೂರ್ಣಗೊಳಿಸಿಲ್ಲ. ಪ್ರತಿ ಸಭೆಯಲ್ಲೂ ಸಮಸ್ಯೆ ಇದೆ ಎನ್ನುತ್ತೀರಿ ಎಂದು ಎಇಇ ಕೀರ್ತನ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗುತ್ತಿದ್ದೀರಿ. 2012-13ರಲ್ಲಿ ಆರಂಭಗೊಂಡಿರುವ ಹೊಸವಾರಂಚಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಇದೀಗ ಹೆಚ್ಚುವರಿ 5 ಲಕ್ಷ ರು. ಅನುದಾನ ಕೋರುತ್ತಿದ್ದೀರಲ್ಲ ಸರಿಯೇ? ನಿವೇಶನದ ಸಮಸ್ಯೆ, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳೊಂದಿಗೆ ಅಥವಾ ಹಿರಿಯ ಅಧಿಕಾರಿಗಳೊಂದಿಗೆ ಸತತ ಫಾಲೋ ಅಪ್ ಇದ್ದಲ್ಲಿ ಇಂತಹ ಸಮಸ್ಯೆ ಉಳಿಯಲು ಸಾಧ್ಯವಿಲ್ಲ. ಅದನ್ನು ನೀವು ಮಾಡುತ್ತಿಲ್ಲ. ಮುಂದಿನ 15 ದಿನಗಳೊಳಗೆ ಎಷ್ಟು ಬಾಕಿ ಕಾಮಗಾರಿ ಪೂರ್ಣಗೊಳಿಸುತ್ತೀರಿ ತಿಳಿಸಿ. ಈ ಕುರಿತು ಸಿಇಒಗೆ ನಾನು ಮಾಹಿತಿ ನೀಡಲಿದ್ದೇನೆ ಎಂದರು.ನೀವು ಕಾಮಗಾರಿ ನಿರ್ವಹಿಸುವಲ್ಲಿ ವಿಫಲರಾಗಿರುವ ಕಾರಣ ತಾಲೂಕಿನಲ್ಲಿ ನಿರ್ಮಿತಿ ಕೇಂದ್ರವು ಹನಗೋಡು, ಧರ್ಮಾಪುರ ಮುಂತಾದ ಕಡೆಗಳಲ್ಲಿ ನಿರ್ಮಾಣ ಕಾಮಗಾರಿಯನ್ನು ಪಡೆದುಕೊಂಡಿದೆ. ಸರ್ಕಾರದಿಂದ ಮುಂಗಡವಾಗಿ ಪಡೆದಿರುವ ಹಣಕ್ಕೆ ನೀವು ಬಡ್ಡಿ ಕೊಡಬೇಕಾದೀತು ನೆನಪಿರಲಿ ಎಂದು ಎಚ್ಚರಿಸಿದರು.
ಸೆಸ್ಕ್ ಹುಣಸೂರು ಉಪವಿಭಾಗದ ಎಇಇ ಜಗದೀಶ್ ಮಾತನಾಡಿ, ಕೇಂದ್ರ ಸರ್ಕಾರ ಆದಿವಾಸಿ ಗಿರಿಜನರಿಗಾಗಿ ಪಿಎನ್ ಜನ್ ಮನ್ ಯೋಜನೆ ಜಾರಿಗೊಳಿಸಿದ್ದು, ಪ್ರತಿಮನೆಗೆ ವಿದ್ಯುತ್ ಸಂಪರ್ಕ ಉಚಿತವಾಗಿ ಮಾಡಿಕೊಡಲಾಗುವುದು. ಅಲ್ಲದೇ ರಾಜ್ಯ ಸರ್ಕಾರದ ನಿಮಯದಂತೆ ತಿಂಗಳಿಗೆ 58 ಯೂನಿಟ್ ವಿದ್ಯುತ್ ಉಚಿತವಾಗಿ ಪೂರೈಸಲಾಗುವುದು. ಉಪವಿಭಾಗ ವ್ಯಾಪ್ತಿಯಲ್ಲಿ 4 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲ್ ಕುಮಾರ ಮಾತನಾಡಿದರು.