ಕನ್ನಡಪ್ರಭ ವಾರ್ತೆ ಯಾದಗಿರಿ
ಸಮೀಪದ ನಾಯ್ಕಲ್ ಗ್ರಾಮದಲ್ಲಿ ಪೂನಾದ ಫೋರ್ಸ್ ಮೋಟಾರ್ ಲಿಮಿಟೆಡ್ನ ಚೇರ್ಮನ್ ಅಭಯ ಫಿರೋಧಿಯಾ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಕಂಚನ ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.
ರೈತರಿಗೆ ಯಂತ್ರಗಳ ಮೂಲಕ ಹೂಳನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಇದರಿಂದ ರೈತರಿಗೆ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಲಿದೆ ಎಂದರು.ಕೆರೆಗಳಲ್ಲಿ ಹೂಳು ಹೊರ ತೆಗೆಯುವುದರಿಂದ ಮಳೆಗಾಲದ ಅವದಿಯಲ್ಲಿ ಹೆಚ್ಚು ನೀರು ಸಂಗ್ರಹವಾಗಿ ಕೆರೆಯ ಸುತ್ತಲ್ಲಿನ ಪ್ರದೇಶಗಳಲ್ಲಿ ಮತ್ತು ರೈತರ ಕೃಷಿ ಹೊಂಡಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಇದರಿಂದ ದಿನನಿತ್ಯದ ಬಳಕೆ, ಪಶು ಪ್ರಾಣಿಗಳಿಗೆ, ಜಲಚರಗಳಿಗೆ ಹಾಗೂ ವ್ಯವಸಾಯಕ್ಕೆ ನೀರು ಲಭ್ಯವಾಗಲಿದೆ ಎಂದರ
ಈ ವೇಳೆ ಬಿಜೆಎಸ್ನ ರಾಯಚೂರ ವಲಯದ ಕಾರ್ಯದರ್ಶಿ ಅಜಿತಕುಮಾರ ದೋಕಾ, ಬಿಜೆಎಸ್ನ ಯಾದಗಿರಿ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಮಹ್ಯಕುಮಾರ, ನಾಯ್ಕಲ್ ಗ್ರಾಮದ ಮುಖಂಡರಾದ ಜಾವೀದ್ ಕುರುಕುಂದಿ, ಫಾರೋಕ್ ಹೊಸಳ್ಳಿ ಭೀಮರಾಯ ತುಮಕೂರ, ದೇವಿಂದ್ರಪ್ಪ ನಾಟೇಕಾರ್, ಮರೆಪ್ಪ ಕಂಚಗಾರ, ಮೋನಪ್ಪ, ನಾಗಪ್ಪ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ, ರೈತರು ಇತರರಿದ್ದರು.