ಭೂದಾನಿಗಳ ಉದಾರತೆ ಮೆಚ್ಚುವಂತದ್ದು: ಪ್ರಿಯಾಂಕಾ ಜಾರಕಿಹೊಳಿ

KannadaprabhaNewsNetwork |  
Published : Oct 31, 2024, 12:45 AM ISTUpdated : Oct 31, 2024, 12:46 AM IST
 ಕರಗುಪ್ಪಿ ಗ್ರಾಮದಲ್ಲಿ ನಿರ್ಮಿಸಿರುವ ಸೀಮಿಲಕ್ಷ್ಮೀದೇವಿ ಯಾತ್ರಾ ನಿವಾಸವನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಆಸ್ತಿ- ಅಂತಸ್ತು ಮಾಡುತ್ತಿರುವ ಇಂದಿನ ಕಾಲದಲ್ಲಿ ಸೀಮಿಲಕ್ಷ್ಮೀದೇವಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಬರುವ ಭಕ್ತರ ಅನುಕೂಲಕ್ಕಾಗಿ ಯಾತ್ರಾ ನಿವಾಸ ಕಟ್ಟಲು ಭೂದಾನಿಗಳ ಉದಾರತೆ ಮೆಚ್ಚುವಂತದ್ದು ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಆಸ್ತಿ- ಅಂತಸ್ತು ಮಾಡುತ್ತಿರುವ ಇಂದಿನ ಕಾಲದಲ್ಲಿ ಸೀಮಿಲಕ್ಷ್ಮೀದೇವಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಬರುವ ಭಕ್ತರ ಅನುಕೂಲಕ್ಕಾಗಿ ಯಾತ್ರಾ ನಿವಾಸ ಕಟ್ಟಲು ಭೂದಾನಿಗಳ ಉದಾರತೆ ಮೆಚ್ಚುವಂತದ್ದು ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಮಂಗಳವಾರ ಕರಗುಪ್ಪಿ ಗ್ರಾಮದಲ್ಲಿ ನಿರ್ಮಿಸಿರುವ ಸೀಮಿಲಕ್ಷ್ಮೀದೇವಿ ಯಾತ್ರಾ ನಿವಾಸ ಉದ್ಘಾಟಿಸಿ ಮಾತನಾಡಿ,. ಸಚಿವ ಸತೀಶ ಜಾರಕಿಹೊಳಿಯವರು ತಮ್ಮ ಶಾಸಕರ ಅನುದಾನದಲ್ಲಿ ನೀಡಿರುವ ₹25 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಭವನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಕಲ್ಯಾಣ ಮಂಟಪ ನಿಮಾಣಕ್ಕಾಗಿ ₹50 ಲಕ್ಷ ಶಾಸಕರ ಅನುದಾನ ಮಂಜೂರಾಗಿದೆ. ಈ ಭಾಗದಲ್ಲಿ ಸಚಿವರು ಹಲವಾರು ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ. ಸುಸಜ್ಜಿತವಾದ ಈ ಯಾತ್ರಾ ನಿವಾಸವನ್ನು ಸದ್ಭಕ್ತರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಅಂಕಲಗಿ-ಕುಂದರಗಿ ಅಡವಿಸಿದ್ದೇಶ್ವರ ಮಠದ ಅಮಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮಠಮಾನ್ಯ, ದೇವಸ್ಥಾನಗಳ ಬಗ್ಗೆ ಅಪಾರ ಕಾರಳಜಿ ಹೊಂದಿ ಅವುಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸತೀಶ ಜಾರಕಿಹೊಳಿಯವರ ಕಾರ್ಯವು ಅತ್ಯಂತ ಶ್ಲಾಘನೀಯವಾದದು, ಇತಿಹಾಸದ ಪೂರ್ಣ ಜ್ಞಾನ ಹೊಂದಿರುವ ಸಚಿವ ಸತೀಶ ಜಾರಕಿಹೊಳಿಯವರು ಜನಸೇವೆಯೇ ತಮ್ಮ ಸಾಧನೆ ಎಂದು ತಿಳಿದು ಜನಪರ ಕಾರ್ಯ ಮಾಡುತ್ತಿದ್ದಾರೆ. ಇಂತಹ ಶಾಸಕರು ಯಮಕನಮರಡಿ ಮತಕ್ಷೇತ್ರಕ್ಕೆ ದೊರಕಿರುವುದು ಸೌಭಾಗ್ಯವೇ ಸರಿ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಗುರಪ್ಪ ಮಾಳಗಿ ಮಾತನಾಡಿ, ಕುಂದರನಾಡಿನ ಶಕ್ತಿದೇವತೆಗಳಲ್ಲಿ ಒಂದಾದ ಸೀಮಿಲಕ್ಷ್ಮೀದೇವಿಯು ತನ್ನ ಲೀಲೆ ಪವಾಡಗಳಿಂದ ಭಕ್ತರ ಬೇಡಿಕೆಗಳಿಗೆ ಅನುಗ್ರಹ ನೀಡುತ್ತಾ ಪ್ರಖ್ಯಾತಿ ಹೊಂದಿದ್ದಾಳೆ. ಎಲ್ಲ ಭಕ್ತರಿಗೆ ರಕ್ಷಣೆ ನೀಡುತ್ತಾಳೆ ಎಂದು ಹೇಳಿದರು.

ಬಸ್ಸಾಪುರ ಗವಿಮಠದ ಬಾಲಸಿದ್ದೇಶ್ವರ ದೇವರು ಸಮ್ಮುಖ ವಹಿಸಿದ್ದರು. ಕರಗುಪ್ಪಿ ಗ್ರಾಮದ ಗಣ್ಯರಾದ ಕಲಗೌಡ ಪಾಟೀಲ, ಕರಗುಪ್ಪಿ ಗ್ರಾಪಂ ಅಧ್ಯಕ್ಷ ಸುಮಿತ್ರಾ ಜೋರ್ಲಿ, ಡಾ. ಪ್ರವೀಣ ಪಾಯನ್ನವರ, ಮಲ್ಲಪ್ಪ ನಾಯಿಕ, ಗಂಗಪ್ಪ ಕಂಟಿಕಾರ, ಲಗಮೋಜಿ ಪೂಜೇರಿ, ಲಗಮಣ್ಣ ಪೂಜೇರಿ, ಸೋಮಲಿಂಗ ಜೋರ್ಲಿ, ಚಂದ್ರು ಜೋರ್ಲಿ, ಕಮೀಟಿಯ ಸರ್ವ ಸದಸ್ಯರು, ಪ್ರಮುಖರು ಇದ್ದರು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ದಾನ ನೀಡಿದ ಭೂದಾನಿಗಳಾದ ಸಂತೋಷ ಸೋಮಲಿಂಗ ಸಣ್ಣಸಂಕಪ್ಪಗೋಳ, ಮಲ್ಲಿಕಾರ್ಜುನ ಸಿದ್ದಪ್ಪ ಪಾಟೀಲ, ಚನ್ನಬಸಪ್ಪಾ ಪಾಟೀಲ ಅವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಇದ್ದರು. ಸೋಮವಾರ ಮಹಾಲಕ್ಷ್ಮೀದೇವಿ ಹಾಗೂ ಸೀಮಿದೇವಿ ಅಭಿಷೇಕ ಪೂಜೆ ನಂತರ ನೂತನ ಯಾತ್ರಾ ನಿವಾಸದ ವಾಸ್ತು ಹೋಮ ಹವನ ನಡೆಯಿತು. ಸರ್ವ ಪಲ್ಲಕ್ಕಿಗಳ ಆಗಮನ ಮತ್ತು ಸುಮಂಗಲೆಯರಿಂದ ಬುತ್ತಿಯ ಸೇವೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು