ಧಾರವಾಡ:
ಇಲ್ಲಿಯ ಕೃಷಿ ವಿವಿ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ 7ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ಇನ್ಮುಂದೆ ಕಾನೂನು ನ್ಯಾಯಾಲಯದ ಕೊಠಡಿಗಳಿಗೆ ಮಾತ್ರ ಸೀಮಿತಗೊಳ್ಳಲಾರದು. ನಮ್ಮ ಜೀವನದ ಪ್ರತಿ ಭಾಗವನ್ನೂ ಮುಟ್ಟಲಿದೆ. ಆದ್ದರಿಂದ ವಕೀಲಿ ವೃತ್ತಿಗೆ ಬರುವವರು ಇಂದಿನ ಡಿಜಿಟಲ್ ಯುಗದಲ್ಲಿಯೂ ಗೌಪ್ಯತೆ, ಘನತೆ ಎತ್ತಿ ಹಿಡಿಯಬೇಕು ಎಂದು ಕಿವಿಮಾತು ಹೇಳಿದರು.
ಭಾರತದಲ್ಲಿ ಈಗ ಮೊಕ್ಕದ್ದಮೆಗಳ ಸ್ವರೂಪ ಬದಲಾಗಿದೆ. ಸಿವಿಲ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ಸೈಬರ್ ಅಪರಾಧದಂತಹ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ವೃತ್ತಿಯು ಸಾಂಪ್ರದಾಯಿಕ ಹಾಗೂ ರೂಪಾಂತರದ ಕವಲು ದಾರಿಯಲ್ಲಿ ನಿಂತಿದೆ. ಈ ಹಿಂದೆ ಜಗಳಗಳು ಪಂಚಾಯ್ತಿ- ಹಿರಿಯರ ಹಂತದಲ್ಲಿಯೇ ಬಗೆಹರಿಯುತ್ತಿದ್ದವು. ನ್ಯಾಯಾಲಯ ಕೊನೆಯ ಆಯ್ಕೆ ಆಗಿತ್ತು. ಆದರೀಗ ಆಸ್ತಿ, ಕೌಟುಂಬಿಕ ವಿಚಾರ ಮಾತ್ರವಲ್ಲ ಗ್ರಾಹಕ ಹಕ್ಕುಗಳು, ಮಹಿಳಾ ಹಕ್ಕು, ಶಿಕ್ಷಣ, ಉದ್ಯೋಗ, ಡಿಜಿಟಲ್ ಗೌಪ್ಯತೆಗೂ ಜನ ಕೋರ್ಟ್ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಜನರಲ್ಲಿ ಮೂಡಿದ ಕಾನೂನು ಶಿಕ್ಷಣ. ಹೀಗಾಗಿ ವಕೀಲ ವೃತ್ತಿಗೆ ಬರುವವರು ಕೌಶಲ್ಯ ಬೆಳೆಸಿಕೊಳ್ಳಬೇಕೆಂದರು.ಎಐ ತಂತ್ರಜ್ಞಾನ:
ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಮಾತನಾಡಿ, ವಕೀಲ ವೃತ್ತಿಗೆ ಬರುವವರು ಸತ್ಯ, ನ್ಯಾಯ, ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಕಾನೂನು ಪದವಿ ಎಂಬುದು ಬರೀ ಪದವಿ ಅಲ್ಲ. ಅದು ಸಮಾಜದ ಆತ್ಮ. ಮಾರ್ಗದರ್ಶಕ ಶಕ್ತಿ ಹೊಂದಿದೆ. ಇಂದು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ನ್ಯಾಯದಾನ ವಿಳಂಬವಾಗಬಾರದು. ವಿಳಂಬವಾಗಿ ಸಿಕ್ಕ ನ್ಯಾಯದಿಂದ ಫಲವಿಲ್ಲ. ಇದನ್ನು ವೃತ್ತಿಪರರು ಗಮನದಲ್ಲಿ ಇಟ್ಟುಕೊಳ್ಳಬೇಕು. ಸುಲಭ ಹಾಗೂ ಸರಳವಾಗಿ ನ್ಯಾಯವೊದಗಿಸಲು ಪ್ರಯತ್ನಿಸಬೇಕು ಎಂದರು.
ಕಾನೂನು ವೃತ್ತಿ ವ್ಯಾಪಾರದ ವಸ್ತುವಲ್ಲ. ಸಮಾಜ ಸೇವೆ, ವ್ಯಾಜ್ಯಮುಕ್ತ ಸಮಾಜ ನಿರ್ಮಾಣಕ್ಕೆ ಇದ್ದು, ನ್ಯಾಯವಾದಿಗಳು ಈ ಬಗ್ಗೆ ಸಂಕಲ್ಪ ತೊಡಬೇಕು. ಸಮಾಜದ ಕಲ್ಯಾಣಕ್ಕಾಗಿ, ದುರ್ಬಲರ ಮತ್ತು ನ್ಯಾಯ ವಂಚಿತರ ಹಕ್ಕುಗಳನ್ನು ರಕ್ಷಿಸಲು ಯುವ ವಕೀಲರ ಜ್ಞಾನ ಬಳಕೆ ಆಗಬೇಕು. ಕಾನೂನು ಪದವಿ ಪಡೆದವರಿಂದ ಸಮಾಜವು ಇದನ್ನೇ ಬಯಸುತ್ತದೆ. ತರಗತಿಯಲ್ಲಿ ಪಡೆದ ಜ್ಞಾನವನ್ನು ನ್ಯಾಯಾಲಯದ ಕೊಠಡಿಯಲ್ಲಿ ಬಳಸಿ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವಾಗಲಿ.
ವಿ. ಸುಧೇಶ ಪೈ, ಬೆಂಗಳೂರಿನ ಹಿರಿಯ ನ್ಯಾಯವಾದಿ