ಉದ್ಯೋಗದ ನಂತರವೂ ಕಲಿಕೆ ನಿರಂತರ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಶಾಲೆಯಿಂದ ಶಿಕ್ಷಣ ಆರಂಭಿಸಿ ಉದ್ಯೋಗ ಸೇರಿದ ನಂತರವೂ ಕಲಿಕೆ ನಿರಂತರ. ಈ ಮೊದಲು ಸಂಸ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಆದರೆ ಈಗ ಇತರೆ ಚಟುವಟಿಕೆಗಳಿಗೆ ಸಮಯ ನೀಡುವುದು ಕಷ್ಟವಾಗಿದೆ.

ಹೊನ್ನಾವರ:

ಪಟ್ಟಣದ ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿಯ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಡಾ. ಎನ್.ಆರ್. ನಾಯಕ ಬಯಲು ರಂಗಮಂದಿರದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಎಂಪಿಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಸಂಸ್ಥೆ ಲಾಭದಾಯಕ ವಿಚಾರ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಒಳ್ಳೆಯ ವಿದ್ಯೆ ನೀಡಿ , ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡುವುದೇ ನಮ್ಮ ಗುರಿ ಎಂದರು.ದಂತವೈದ್ಯೆ ಶೀಲಾ ವಿಜಯ್ ಮಾತನಾಡಿ, ಶಾಲೆಯಿಂದ ಶಿಕ್ಷಣ ಆರಂಭಿಸಿ ಉದ್ಯೋಗ ಸೇರಿದ ನಂತರವೂ ಕಲಿಕೆ ನಿರಂತರ. ಈ ಮೊದಲು ಸಂಸ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಆದರೆ ಈಗ ಇತರೆ ಚಟುವಟಿಕೆಗಳಿಗೆ ಸಮಯ ನೀಡುವುದು ಕಷ್ಟ. ಎಸ್‌ಡಿಎಂ ಕಾಲೇಜಿನಲ್ಲಿ ಸಂಸ್ಕಾರ ನೀಡುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬಂದ ಶೈಕ್ಷಣಿಕ ಸಂಸ್ಥೆ ಇಂದು ಎಂದರು. ವಿಶ್ವದಾದ್ಯಂತ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳು ತಮ್ಮದೆ ಆದಂತಹ ಛಾಪು ಮೂಡಿಸಿದ್ದಾರೆ. ಯಾವುದೇ ಹೊಸ ಕೋರ್ಸ್ ಬಂದರೂ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮಹತ್ವದ್ದು ಎಂದರು. ಪ್ರಭಾರ ಪ್ರಾಂಶುಪಾಲ ಡಾ. ಡಿ.ಎಲ್. ಹೆಬ್ಬಾರ ಮಾತನಾಡಿ, ಎರಡು ವರ್ಷ ಭದ್ರ ನೆಲೆಗಟ್ಟು ಹೊಂದಿ ಮುಂದಿನ ಭವಿಷ್ಯ ರೂಪಿಸಿಕೊಳ್ಳಿ. ಶಿಕ್ಷಣದ ಜತೆಗೆ ಜ್ಞಾನ ಪಡೆದುಕೊಳ್ಳಿ ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ಎಚ್. ಭಟ್, ಕಾಲೇಜಿನ ವರ್ಷದ ಚಟುವಟಿಕೆ ಹಾಗೂ ವಿದ್ಯಾರ್ಥಿಗಳ ಸಾಧನೆ ಗುರುತಿಸಿ, ಗೌರವಿಸುವ ಕಾರ್ಯಕ್ರಮ ಇದಾಗಿದೆ. ವಿದ್ಯಾರ್ಥಿಗಳು ಸಾಧನೆ ಮಾಡುವಂತಾಗಬೇಕು. ಗುರಿ ಬೆನ್ನಟ್ಟಬೇಕು ಎಂದು ಶುಭ ಹಾರೈಸಿದರು.ಹೊನ್ನಾವರ ತಾಲೂಕಿನ ಅಗ್ನಿಶಾಮಕ ಠಾಣೆಯ ಮುಖ್ಯಸ್ಥ, 2023-24ನೇ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ವಿನಾಯಕ ಭಟ್, ಎಂ.ಎನ್. ಅಡಿಗುಂಡಿ, ಹೇಮಾ ಭಟ್, ಸ್ವಾತಿ ಡಿ.ಜಿ, ಇದೇ ವೇಳೆ ಎಂಪಿಇ ಸೊಸೈಟಿ ಆಡಳಿತ ಮಂಡಳಿ ಸದಸ್ಯರು, ನಿವೃತ್ತ ಪ್ರಾಂಶುಪಾಲರು, ಪೂರ್ವ ವಿದ್ಯಾರ್ಥಿಗಳು, ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share this article