ಕನ್ನಡಪ್ರಭ ವಾರ್ತೆ ಕುರುಗೋಡು
ಇಲ್ಲಿನ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ತಾಲೂಕು ಆಡಳಿತ ಮತ್ತು ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾತನಾಡಿದರು.
ಹೆಚ್ಚು ಲಾಭದಾಸೆಗಾಗಿ ಬೇಡಿಕೆ ಇರುವ ಉತ್ಪನ್ನಗಳ ಕೃತಕ ಮುಗ್ಗಟ್ಟು ಸೃಷ್ಟಿಸುವುದು ಮತ್ತು ಕಳಪೆ ಗಣಮಟ್ಟದ ಉತ್ಪನ್ನ ಮಾರಾಟ ಮಾಡಿ ರೈತರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಕಂಡುಬಂದರೆ ಪರವಾನಿಗೆ ರದ್ದು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ರೈತರಿಗೆ ತೊಂದರೆಯಾಗದಂತೆ ಕೃಷಿ ಇಲಾಖೆ ನಿಯಮಗಳ ಪ್ರಕಾರ ವ್ಯಾಪಾರ ವಹಿವಾಟು ನಡೆಸಿದರೆ ತಾಲೂಕು ಆಡಳಿತ ನಿಮ್ಮ ಬೆಂಬಲಕ್ಕೆ ಇರುತ್ತದೆ. ದೋಷ ಕಂಡುಬಂದರೆ ಕ್ರಮಕ್ಕೂ ಸೂಚಿಸಲಾಗುತ್ತದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ದಯಾನಂದ್ ಮಾತನಾಡಿ, ಇಲಾಖೆಯಲ್ಲಿ ಪ್ರಮಾಣೀಕರಿಸಿದ ಕ್ರಿಮಿನಾಶಕ, ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡಬೇಕು. ಲಾಭದಾಸೆಗಾಗಿ ಕಳಪೆ ಗುಣಮಟ್ಟದ ಬಯೋ ಉತ್ಪನ್ನಗಳನ್ನು ಮಾಡಾಟ ಮಾಡಬಾರದು. ಪ್ರತಿಯೊಂದು ಉತ್ಪನ್ನದ ದಾಸ್ತಾನು ಮಾಹಿತಿ ಫಲಕ ಅಂಗಡಿಗಳನ್ನು ಗ್ರಾಹಕರಿಗೆ ಕಾಣುವಂತೆ ಅಳವಡಿಸಬೇಕು. ಖರೀದಿ ಮತ್ತು ಮಾರಾಟದ ಪ್ರತ್ಯೇಕ ವಹಿಗಳನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.
ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕ ಮುಜಿಬುರ್ ರೆಹಮಾನ್ ಮಾತನಾಡಿ, ಅನಧಿಕೃತ ದಾಸ್ತಾನು, ಇಲಾಖೆಯಿಂದ ಪ್ರಮಾಣೀಕರಿಸದ ಉತ್ಪನ್ನಗಳ ಮಾರಾಟ ಮತ್ತು ಭೂಮಿ ಮತ್ತು ರೈತರ ಮೇಲೆ ದುಷ್ಪರಿಣಾಮ ಭೀರುವ ನಿರ್ಬಂಧಿತ ಉತ್ಪನ್ನಗಳ ಮಾರಾಟ ಮತ್ತು ಹೆಚ್ಚಿ ಬೇಡಿಕೆ ಇರುವ ಉತ್ಪನ್ನಗಳ ಕಾಳಸಂತೆಯನ್ನು ಮಾರಾಟ ಮಾಡುವುದು ಪತ್ತೆ ಹಚ್ಚಲು ಇಲಾಖೆಯಲ್ಲಿ ಒಂದು ಪ್ರತ್ಯೇಕ ತಂಡ ಇದೆ. ಸಾರ್ವಜನಿಕರಿಂದ ದೂರುಗಳು ಬಂದರೆ ದಾಳಿ ನಡೆಸಿ ಸಂಬಂಧಿಸಿದ ವರ್ತಕರ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.