ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
೧ ವರ್ಷದ ಹೆಣ್ಣು ಚಿರತೆ ಮರಿ ಕಳೇಬರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಬಳಿ ಪತ್ತೆಯಾಗಿದ್ದು, ವಿಷಯ ತಿಳಿದು ಗುಂಡ್ಲುಪೇಟೆ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಸ್ಥಳ ಪರಿಶೀಲನೆ ಬಳಿಕ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪಶು ವೈದ್ಯ ಡಾ. ವಾಸೀಂ ಮಿರ್ಜಾ ಮೃತಪಟ್ಟ ಚಿರತೆ ಮರಿಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಚಿರತೆಯೊಂದಿಗಿನ ಕಾದಾಟದಲ್ಲಿ ಮರಿ ಚಿರತೆ ಮೃತಪಟ್ಟಿದ್ದು, ಅದರ ಕುತ್ತಿಗೆ ಬಳಿ ಗಾಯವಾಗಿರುವ ಗುರುತು ಪತ್ತೆಯಾಗಿದೆ. ಜೊತೆಗೆ ಮುಳ್ಳುಹಂದಿಯ ಮುಳ್ಳುಗಳು ಪತ್ತೆಯಾಗಿವೆ.ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ .ನವೀನ್ ಕುಮಾರ್, ಪ್ರೊಬೆಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಿತ, ಎನ್ಜಿಒ ರಘುರಾಂ ಹಾಗೂ ಅರಣ್ಯ ಸಿಬ್ಬಂದಿಗಳಿದ್ದರು.
---
1 ವರ್ಷದ ಚಿರತೆ ಮರಿಯ ಮೃತದೇಹ.