ಲಕ್ಷ್ಮೇಶ್ವರ: ಭರತನಾಟ್ಯ ನಮ್ಮ ಪ್ರಾಚೀನ ಸಂಸ್ಕೃತಿ, ಪರಂಪರೆಯ ವೈಭವದ ಪ್ರತೀಕವಾಗಿದೆ. ಭರತನಾಟ್ಯ ಕಲೆಯು ಜಗತ್ತಿನ ಅದ್ಭುತ ನಾಟ್ಯಕಲೆಗಳಲ್ಲಿ ಒಂದಾಗಿದೆ ಎಂದು ಹುಬ್ಬಳ್ಳಿಯ ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದ ವಿದುಷಿ ಸಹನಾ ಭಟ್ ಹೇಳಿದರು.
ಭರತ ನಾಟ್ಯ ಕಲೆಯು ನಮ್ಮ ರಾಜ ಮಹಾರಾಜರ ಕಾಲಕ್ಕಿಂತಲೂ ಪೂರ್ವದಲ್ಲಿ ಭಾರತೀಯ ಸಂಸ್ಕೃತಿಯ ಭಾಗವಾಗಿ ಭರತ ನಾಟ್ಯ ಕಲೆಯು ಬೆಳೆದು ಬಂದಿದೆ. ಭರತ ನಾಟ್ಯವು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ಭರತನಾಟ್ಯ ಕಲೆಯು ಭಾರತೀಯ ಪರಂಪರೆ, ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದಿರುವುದು ಸಂತೋಷದ ಸಂಗತಿಯಾಗಿದೆ. ಭಾರತೀಯ ನೃತ್ಯ ಪ್ರಕಾರಗಳಲ್ಲಿ ಭರರತ ನಾಟ್ಯ ಕಲೆಗೆ ವಿಶೇಷ ಗೌರವಿದೆ. ಇಂದು ಪ್ರಪಂಚದ ತುಂಬಾ ಭರತ ನಾಟ್ಯ ಕಲೆಯು ಉಳಿಸಿ ಬೆಳೆಸುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಈ ವೇಳೆ ಮಂಜುನಾಥ ಪುತ್ತೂರ ಹಾಗೂ ಸುನೀಲ ಮಹಾಂತಶೆಟ್ಟರ ಮಾತನಾಡಿ, ಭರತ ನಾಟ್ಯ ಕಲೆಯಿಂದ ಮಾನಸಿಕ ಸಂತೋಷ ಮತ್ತು ನೆಮ್ಮದಿ ದೊರಯುತ್ತದೆ. ನಮ್ಮ ಮಕ್ಕಳಿಗೆ ಭರತ ನಾಟ್ಯದಂತಹ ಕಲೆ ಕಲಿಸುವ ಮೂಲಕ ಅದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡೋಣ ಎಂದು ಹೇಳಿದರು.ಈ ವೇಳೆ ಪಟ್ಟಣದ ವಿವಿಧ ಭರತ ನಾಟ್ಯ ತಂಡದ ವಿದ್ಯಾರ್ಥಿಗಳು ಅದ್ಭುತ ಭರತ ನಾಟ್ಯ ಪ್ರದರ್ಶನ ಮಾಡುವ ಮೂಲಕ ಸೇರಿದ್ದ ಸೋತೃಗಳನ್ನು ಮಂತ್ರ ಮುಗ್ದಗೊಳಿಸಿದರು.